ಚಾಲೆಂಜಿಂಗ್ ಸ್ಟಾರ್ ದರ್ಶನ್ ಎಂದಿನಿಂದ ತಮ್ಮ ಅಭಿಮಾನಿಗಳನ್ನ ಸೆಲೆಬ್ರಿಟಿಸ್ ಅಂತ ಕರೆದ್ರೋ ಅಂದಿನಿಂದ್ಲೇ ದರ್ಶನ್ ಕ್ರೇಜ್ ಹತ್ತು, ನೂರು ಪಟ್ಟು ಹೆಚ್ಚಾಗಿತ್ತು. ಬಟ್, ದರ್ಶನ್ರನ್ನು ಎತ್ತಿ, ಮೆರೆಸಿ, ಈ ಎತ್ತರಕ್ಕೆ ತಂದು ನಿಲ್ಲಿಸಿದ್ದ ಅಭಿಮಾನಿಗಳೇ ಇಂದು ದರ್ಶನ್ರ ಈ ಸ್ಥಿತಿ, ವರ್ತನೆಗೆ ಕಾರಣರಾದ್ರಾ? ದಾಸ ಮರ್ಡರ್ ಕೇಸ್ನಲ್ಲಿ ಜೈಲು ಸೇರಿದ ಮೊತ್ತ ಮೊದಲ ದಿನದಿಂದಲೇ ಇಂಥಾದ್ದೊಂದು ಚರ್ಚೆ ಶುರುವಾಗಿದೆ. ಈ ನಡುವೆ ದರ್ಶನ್ರ ಒಂದು ಕಾಲದ ದೋಸ್ತ ಕಿಚ್ಚ ಸುದೀಪ್ ಶಾಕಿಂಗ್ ಸ್ಟೇಟ್ಮೆಂಟ್ ನೀಡಿದ್ದಾರೆ. ನೇರವಾಗಿ ಮತ್ತು ಪರೋಕ್ಷವಾಗಿ ಮಾಜಿ ಸ್ನೇಹಿತನ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ್ದಾರೆ.
Darshan Thoogudeep: ಬಾಡಿಗೆ ಮನೆ ಹುಡುಕಾಟದಲ್ಲಿ ಡಿ ಬಾಸ್ ಕುಟುಂಬ: ಅಂತದ್ದೇನಾಯ್ತು!?
ದರ್ಶನ್ ಬಗ್ಗೆ ಕೇಳಿದಾಗ ಸುದೀಪ್ ಹೇಳಿರೋ ಒಂದೊಂದು ಹೇಳಿಕೆಗಳಲ್ಲೂ ನೂರಾರು ಅರ್ಥಗಳಿವೆ. ಹತ್ತಾರು ಸಂದೇಶಗಳಿವೆ. ನಾಲ್ಕಾರು ರಹಸ್ಯಗಳಿವೆ. ಹಾಗಾದ್ರೆ, ಕಿಚ್ಚ ಜೈಲಲ್ಲಿರೋ ದಚ್ಚು ಬಗ್ಗೆ, ದಚ್ಚು ಫ್ಯಾನ್ಸ್ ಬಗ್ಗೆ ಹೇಳಿದ್ದೇನು?. ಏನದು ಹೋಮ, ಫ್ಯಾನ್ಸ್ ಸಿವಿಲ್ ವಾರ್, ಸೂರ್ಯಚಂದ್ರ ರಾತ್ರಿ-ಹಗಲು ರಹಸ್ಯ? ಇಬ್ಬರ ನಡುವೆ ಒಡಕು ಮೂಡಿದ್ದೇಕೆ ಎಂಬ ಬಗ್ಗೆ ಕಿಚ್ಚ ಬಿಚ್ಚಿಟ್ಟ ಸೀಕ್ರೆಟ್ ಏನು?. ಮತ್ತು, ಸುದೀಪ್ ಪರೋಕ್ಷವಾಗಿ ದರ್ಶನ್ ಫ್ಯಾನ್ಸ್ಗೆ ಕೊಟ್ಟ ಸಂದೇಶವೇನು? ಈ ಪ್ರತಿಯೊಂದು ರೋಚಕ.. ರಣರೋಚಕ!
ಡಿಬಾಸ್, ಬಾಕ್ಸಾಫಿಸ್ ಸುಲ್ತಾನ, ದರ್ಶನ್ ತೂಗುದೀಪ.. ಹೀಗೆ ಹಲವಾರು ಹೆಸರುಗಳಿಂದ ಕರೆಯಲ್ಪಡೋ ನಟ ದರ್ಶನ್ ಇಂದು ಬಳ್ಳಾರಿ ಜೈಲಲ್ಲಿ ಲಾಕ್ ಆಗಿರೋದು ಗೊತ್ತಿದೆ. ದರ್ಶನ್ ಬಳ್ಳಾರಿ ಜೈಲು ಸೇರಿದ್ರೆ ಇತ್ತ ದರ್ಶನ್ ಅಭಿಮಾನಿಗಳ ಸುತ್ತ ಹತ್ತಾರು ವಿವಾದ. ಚರ್ಚೆ, ಆಕ್ರೋಶಗಳು ಕೇಳಿ ಬರ್ತಿವೆ. ಖುದ್ದು ಪೊಲೀಸ್ ಅಧಿಕಾರಿ ದರ್ಶನ್ ಅಭಿಮಾನಿಗಳ ಕೋಟೆಯ ನಡುವೆ ನಿಂತು ಮೈಕ್ ಹಿಡಿದು ನಿಮ್ಮಂತ ಕೆಲವು ಅಭಿಮಾನಿಗಳಿಂದ ದರ್ಶನ್ಗೆ ಕೆಟ್ಟ ಹೆಸರು ಅಂತ ಹೇಳಿದ್ದ ವಿಡಿಯೋ ಭಾರೀ ವೈರಲ್ ಆಗಿತ್ತು. ಹೀಗೆಲ್ಲಾ ಇರುವಾಗ ಸುದೀಪ್ ನೀಡಿರೋ ಇದೊಂದು ಹೇಳಿಕೆ ಭಾರೀ ಸಂಚಲನ ಸೃಷ್ಟಿಸಿದೆ.
ತಮ್ಮ ಫ್ಯಾನ್ಸ್ ಗುಂಪುಗಳಲ್ಲಿ ಪ್ರತಿ ವರ್ಷ ಬರ್ತ್ಡೇ ಟೈಮಲ್ಲಿ ಸಿವಿಲ್ ವಾರ್ ನಡೆಯುತ್ತೆ. ಹಾಗಾಗಿ, ಇದೆಲ್ಲಾ ಯಾಕ್ ಬೇಕು ಅಂತಾ ನಾನೇ ಸೈಲೆಂಟಾಗ್ಬಿಟ್ಟಿದ್ದೀನಿ ಅನ್ನೋದು ಸುದೀಪ್ ಮಾತು. ಇದರರ್ಥ ದರ್ಶನ್ ಈ ಕೆಲಸ ಮೊದಲೇ ಮಾಡ್ಬೇಕಿತ್ತು. ತಮ್ಮ ಫ್ಯಾನ್ಸ್ಗಳ ಆಟಾಟೋಪಕ್ಕೆ ಬ್ರೇಕ್ ಹಾಕ್ಬೇಕಿತ್ತು ಅನ್ನೋದಾ? ಖಂಡಿತ ಗೊತ್ತಿಲ್ಲ. ಬಟ್, ಹಿಂದೊಮ್ಮೆಯೂ ಸುದೀಪ್ ಇಂಥಹದ್ದೇ ಹೇಳಿಕೆ ಮಾರ್ಮಿಕ ಹೇಳಿಕೆ ನೀಡಿದ್ರು. ಆಗಲೂ ಸುದೀಪ್ ಪರೋಕ್ಷವಾಗಿ ದರ್ಶನ್ ಅಭಿಮಾನಿಗಳಿಗೆ ಇನ್ಡೈರೆಕ್ಟ್ ಸಿಗ್ನಲ್ ಕೊಟ್ಟಿದ್ದಾರೆಂಬ ಚರ್ಚೆ ಸ್ಫೋಟಗೊಂಡಿತ್ತು.
ನೀವೆಲ್ಲಾ ಒಬ್ಬ ಸ್ಟಾರ್ನ ಫ್ಯಾನ್ಸ್ ಮತ್ತೊಬ್ಬ ಸ್ಟಾರ್ನ ಫ್ಯಾನ್ಸ್ ನಡುವೆ ಟಾಕ್ ಫೈಟ್ ನಡೆಯೋದನ್ನು ಕಂಡಿದ್ದೀರಿ, ಕೇಳಿದ್ದೀರಿ. ಆದ್ರೆ, ಒಬ್ಬ ಸ್ಟಾರ್ನ ಫ್ಯಾನ್ಸ್ ಗುಂಪುಗಳ ಒಳಗೆ ಕಾದಾಟ ನಡೆಯುತ್ತೆ ಅನ್ನೋದನ್ನ ಕೇಳಿದ್ದೀರಾ? ಖಂಡಿತವಾಗಿ ನಡೆಯುತ್ತೆ ಅನ್ನೋ ವಿಚಾರವನ್ನ ಕಿಚ್ಚ ಸುದೀಪ್ ಹಿಂದೆಯೇ ಕೇಳಿದ್ರು. ಅಷ್ಟೇ ಅಲ್ಲ, ಪರೋಕ್ಷವಾಗಿ ಬೇರೆ ಸ್ಟಾರ್ಗಳಿಗೂ.. ಫ್ಯಾನ್ಸ್ಗೂ ಮುತ್ತಿನಂತಾ ಸಂದೇಶ ರವಾನಿಸಿದ್ರು
ಸುದೀಪ್ ವಿಚಾರದಲ್ಲಿ ಅವ್ರ ಹುಡುಗರು, ಅರ್ಥಾತ್ ಫ್ಯಾನ್ಸ್ ಗಲಾಟೆಗೆ ರೆಡಿಯಾಗ್ತಿದ್ರಂತೆ.. ಆಗ ಸುದೀಪ್ ಕರೆದು ಬುದ್ಧಿ ಹೇಳಿದ್ರಂತೆ. ಹಾಗೆ, ಸುದೀಪ್ ಬುದ್ಧಿವಾದ ಕೇಳಿದ್ದ 29 ಅಭಿಮಾನಿಗಳು ದೊಡ್ಡ ದೊಡ್ಡ ಹೋಟೆಲ್ಗಳ ಓನರ್ಗಳಾಗಿದ್ದಾರಂತೆ. ಹಾಗಾದ್ರೆ, ದರ್ಶನ್ ಅಂದು ಈ ಮಾತು ಹೇಳಿದ್ದು ದರ್ಶನ್ಗೆ ಕೊಟ್ಟ ಸಲಹೆಯಾಗಿತ್ತಾ? ನಿನ್ನ ಫ್ಯಾನ್ಸ್ ಹಾದಿ ತಪ್ಪುತ್ತಿದ್ದಾರೆ. ಮುಂದೊಂದು ದಿನ ನಿನ್ನ ಕುತ್ತಿಗೆಗೆ ತರ್ತಾರೆ ಎಂಬುದನ್ನು ತಮ್ಮ ಲೈಫ್ ಎಕ್ಸಾಂಪಲ್ ಕೊಟ್ಟು ಹೇಳಿದ್ರಾ? ಖಂಡಿತ ಗೊತ್ತಿಲ್ಲ. ಆದ್ರೆ, ಅಂದು ಮತ್ತು ಇಂದು ಸುದೀಪ್ ಹೇಳಿರೋ ಹೇಳಿಕೆಗಳು ದರ್ಶನ್ ಬದುಕಿಗೆ, ದರ್ಶನ್ ಫ್ಯಾನ್ಸ್ಗಳಿಗೆ ಪಕ್ಕಾ ಹೋಲಿಕೆಯಾಗ್ತಿದೆ ಎಂಬುದೇ ವಿಪರ್ಯಾಸ!
ಅಚ್ಚರಿ ಅಂದ್ರೆ, ಹಿಂದೆಲ್ಲಾ ದರ್ಶನ್ ಬಗ್ಗೆ ಸುದೀಪ್ ಬಳಿ ಕೇಳಿದಾಗ ಸರಿಯಾಗಿ ಪ್ರತಿಕ್ರಿಯೆ ನೀಡ್ತಾ ಇರ್ತಿಲ್ಲ. ಸಂಬಂಧವೇ ಇಲ್ಲ ಎಂಬಂತೆ ಪ್ರಶ್ನೆಯನ್ನು ಸಾಗು ಹಾಕ್ತಿದ್ರು. ಆದ್ರೆ, ಎಷ್ಟಾದ್ರೂ ಮಾಜಿ ಗೆಳಯ ಅಲ್ವಾ? ಇಂಥಾ ಸಂದರ್ಭದಲ್ಲೂ ರಿಯಾಕ್ಟ್ ಮಾಡ್ದೇ ಹೋದ್ರೆ ಹೇಗೆ? ಹಾಗಾಗಿ, ಎಂದೂ ಹೇಳಿರದಂತಾ ಕೆಲವೊಂದು ಶಾಕಿಂಗ್ ವಿಚಾರಗಳನ್ನ ಸುದೀಪ್ ಬಿಚ್ಚಿಟ್ಟಿದ್ದಾರೆ. ದರ್ಶನ್ಗೂ ತನಗೂ ಆಗಿಬರೋಲ್ಲ. ಇಬ್ಬರೂ ಒಟ್ಟಿಗೆ ಸರಿಯಿಲ್ಲ. ತಾವಿಬ್ಬರೂ ಸೂರ್ಯ ಚಂದ್ರರಂತೆ. ಒಟ್ಟಿಗೆ ಸೇರಬಾರ್ದು, ಸೇರಿದ್ರೆ ಪ್ರಾಬ್ಲಂ ಆಗುತ್ತೆ ಅಂತಾ ನೇರವಾಗಿ ಹೇಳಿದ್ದಾರೆ.
ಹೀಗೆ, ಸುದೀಪ್ ದರ್ಶನ್ ಬಗ್ಗೆ, ಮತ್ತು ಪರೋಕ್ಷವಾಗಿ ದರ್ಶನ್ ಅಭಿಮಾನಿಗಳ ಬಗ್ಗೆ ಮುಕ್ತವಾಗಿ ಮಾತಾಡೋಕೆ ಕಾರಣವಾಗಿದ್ದೇನು ಎಂಬ ಪ್ರಶ್ನೆ ಸಹಜವಾಗಿ ಹುಟ್ಟುತ್ತೆ. ಹಾಗಾದ್ರೆ, ದಚ್ಚು ಬಗ್ಗೆ ಕಿಚ್ಚನ ಈ ಹೇಳಿಕೆಗಳ ಹಿಂದೆ ದರ್ಶನ್ ಅಭಿಮಾನಿಗಳ ಆಟಾಟೋಪವೆ ಕಾರಣವಾಯ್ತಾ? ಅದ್ರಲ್ಲೂ, ದರ್ಶನ್ ಜೈಲು ಸೇರಿದ್ಮೇಲೆ ಕಾಟೇರನ ಅಭಿಮಾನಿಗಳ ಮಾಡ್ತಿರೋ ಸಾಲು ಸಾಲು ಅವಾಂತರಗಳು, ವಿವಾದಗಳಿಂದೇಲ್ಲಾ ಕಿಚ್ಚ ತುಟಿ ಬಿಚ್ಚುವಂತಾಯ್ತಾ?
ದರ್ಶನ್ರನ್ನು ಬಳ್ಳಾರಿ ಸೆಂಟ್ರಲ್ ಡೈಲಿಗೆೆ ಕರೆದೊಯ್ದು ಕೂಡಿದ್ದ ದಿನವದು. ಬಳ್ಳಾರಿಯ ದರ್ಶನ್ ಫ್ಯಾನ್ಸ್ ಮಾಡಿದ್ದ ಅದೊಂದು ಕೆಲಸ ಎಲ್ಲರ ಕಣ್ಣು ಕೆಂಪಾಗಿಸಿತ್ತು. ಕೊಲೆ ಕೇಸ್ ಆರೋಪಿ ದರ್ಶನ್ ಬಿಡುಗಡೆಯಾಗಲಿ ಎಂದು ಪ್ರಾರ್ಥಿಸಿ ಅಲ್ಲಿನ ಕನಕ ದುರ್ಗಮ್ಮ ಮೂರ್ತಿ ತಲೆ ಮೇಲೆ ಕಾಲಿಟ್ಟು ಹೂವಿನ ಹಾರ ಹಾಕಿದ್ರು.
ದರ್ಶನ್ ಅಭಿಮಾನಿಗಳ ಈ ಕೆಲಸದಿಂದ ಆಕ್ರೋಶಗೊಂಡಿದ್ದ ಭಕ್ತರು ಹೀಗೆ ಮಾಡಿದ್ರೆ ದರ್ಶನ್ಗೆ ಒಳ್ಳೆಯದಾಗುತ್ತಾ? ದರ್ಶನ್ ಫ್ಯಾನ್ಸ್ ಎಂತಹ ಅನಾಗರಿಕರು, ಸೂಕ್ಷ್ಮ ಸಂವೇದನೆ ಕಳೆದುಕೊಂಡವರು ಇಂತಹರ ಪೂಜೆಯಿಂದ ದರ್ಶನ್ಗೆ ನಿಜಕ್ಕೂ ಒಳಿತಾಗುತ್ತಾ ಎಂದು ಆಕ್ರೋಶ ವ್ಯಕ್ತಪಡಿಸಿದ್ರು. ಇದು ಸಾಲದು ಎಂಬಂತೆ ಆಗಸ್ಟ್ 30 ರಂದು ಕರಿಯ ಸಿನಿಮಾ ರೀ ರಿಲೀಸ್ ಆದಾಗ್ಲೂ ಪೊಲೀಸ್ ಅಧಿಕಾರಿ ತಾಳ್ಮೆ ಕಳೆದುಕೊಂಡು ಶಾಕಿಂಗ್ ಸ್ಟೇಟ್ಮೆಂಟ್ ಕೊಡುವಂತೆ ಮಾಡಿದ್ರು.