ಚಿತ್ರದುರ್ಗ: ಚಿತ್ರದುರ್ಗ ನಗರದಲ್ಲಿ ATM ಕಳ್ಳತನಕ್ಕೆ ಚಾಲಾಕಿ ಕಳ್ಳನಿಂದ ವಿಫಲ ಯತ್ನ ನಡೆದಿದೆ. ಚಿತ್ರದುರ್ಗ ನಗರದ ಸರಸ್ವತಿ ಪುರಂ ಕೆನರಾ ಬ್ಯಾಂಕ್ ಶಾಲೆ ATM ನಲ್ಲಿ ಈ ಕೃತ್ಯ ನಡೆಸಲಾಗಿದ್ದು, ಸೆಪ್ಟೆಂಬರ್ 1 ಬೆಳಿಗ್ಗೆ 6 ಗಂಟೆಗೆ ಬೆಳಕಿಗೆ ಬಂದಿದೆ.
ಹಾಸ್ಟೆಲ್ ನಲ್ಲಿ ಬೀಡಿ, ಮದ್ಯ ಸೇವಿಸುತ್ತಿರುವ ಬಾಲಕರು: ಸಿಬ್ಬಂದಿ, ವಾರ್ಡನ್ ವಿರುದ್ಧ ಭುಗಿಲೆದ್ದ ಆಕ್ರೋಶ!
ಚಾಲಾಕಿ ಕಳ್ಳನ ಚಲನವಲನ CCTV ಕ್ಯಾಮರಾದಲ್ಲಿ ಸೆರೆಯಾಗಿದೆ. ಮುಖಕ್ಕೆ ಮಂಕಿ ಕ್ಯಾಪ್, ಕೈನಲ್ಲಿ ಗ್ಲೌಸ್ ಧರಿಸಿ ATM ಒಡೆಯಲು ಎಂಟ್ರಿಯಾಗಿದ್ದ.
ಬಳಿಕ ಕಪ್ಪು ಬಣ್ಣದ ಮಸಿಯನ್ನ CCTVಗಳಿಗೆ ಸ್ಪ್ರೈ ಮಾಡಿದ್ದ. ನಂತರ ATM ಮಿಷನ್ ಸೇಪ್ ಲಾಕ್ ಡೋರ್ ಡ್ಯಾಮೇಜ್ ಮಾಡಿ, ಅಲ್ಲಿಂದ ಕಳ್ಳ ಎಸ್ಕೇಪ್ ಆಗಿದ್ದಾನೆ.
ಇದೀಗ ಬ್ಯಾಂಕ್ ಮ್ಯಾನೇಜರ್ ಮೋಹನ್ ರಾವ್ ಅವರು ದೂರು ದಾಖಲಿಸಿದ್ದು, ಸ್ಥಳಕ್ಕೆ ಚಿತ್ರದುರ್ಗದ ಬಡಾವಣೆ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ