ಬೆಂಗಳೂರು:- ಕರ್ನಾಟಕದಲ್ಲಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ, ಹಾಜರಾತಿ ಎರಡು ಕುಸಿತ ಕಂಡಿದ್ದು, ಅಧಿಕಾರಿಗಳಿಗೆ ಶಿಕ್ಷಣ ಇಲಾಖೆ ಚಾಟಿ ಬೀಸಿದೆ.
ಮತ್ತೆ ಸದ್ದು ಮಾಡಿದ ಲವ್ ಜಿಹಾದ್: ವಿವಾಹಿತ ಹಿಂದೂ ಮಹಿಳೆ ಜತೆ ಓಡಿಹೋದ ಮುಸ್ಲಿಂ ವ್ಯಕ್ತಿ!
ವರ್ಷದಿಂದ ವರ್ಷಕ್ಕೆ ರಾಜ್ಯದ ಸರ್ಕಾರಿ ಶಾಲೆಗಳು ಅವನತಿ ಹಾದಿ ಹಿಡದಿದ್ದು ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಕುಸಿತಕ್ಕೆ ಕಾರಣವಾಗುತ್ತಿದೆ. ಹೀಗಾಗಿ ಇಲಾಖೆ ಅಧಿಕಾರಿಗಳಿಗೆ ಚಾಟಿ ಬೀಸಿದೆ.
ಕೊವಿಡ್ ಬಳಿಕ ರಾಜ್ಯದಲ್ಲಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹಾಗೂ ಹಾಜರಾತಿ ಎರಡು ತಪ್ಪು ಹಾದಿ ಹಿಡಿದಿವೆ. ಒಂದಲ್ಲ ಒಂದು ಕಾರಣಕ್ಕೆ ಕನ್ನಡ ಮಾದ್ಯಮ ಶಾಲೆಗಳು ಬಂದ್ ಆಗುತ್ತಿವೆ. ಶೂನ್ಯ ದಾಖಲಾತಿ, ಮಕ್ಕಳ ದಾಖಲಾತಿ ಕೊರತೆ, ಶಿಕ್ಷಕರ ಕೊರತೆಗಳಿಂದಲೋ ಅಥವಾ ಪೋಷಕರ ತಪ್ಪಿನಿಂದಲೋ ಮಕ್ಕಳು ಶಾಲೆಗೆ ಸರಿಯಾಗಿ ಬರ್ತಿಲ್ಲ. ಇದು ಸರ್ಕರಿ ಶಾಲೆಗಳ ಪ್ರಗತಿ ಫಲಿತಾಂಶದ ಕುಸಿತಕ್ಕೆ ಕಾರಣವಾಗಿದೆ. ಹೀಗಾಗಿ ಈ ಬಗ್ಗೆ ತಲೆ ಕೆಡಿಸಿಕೊಂಡಿರುವ ಸರ್ಕಾರ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಮಕ್ಕಳನ್ನ ಶಾಲೆಗೆ ಕರೆ ತರವು ಟಾಸ್ಕ್ ನೀಡಿದೆ.
ಶಾಲೆಯಲ್ಲಿ ಮಕ್ಕಳ ಹಾಜರಾತಿ ಕುಸಿತವಾದರೆ ಅಧಿಕಾರಿಗಳನ್ನ ಹೊಣೆ ಮಾಡಲು ಇಲಾಖೆ ಮುಂದಾಗಿದೆ. ಕೊವಿಡ್ ಬಳಿಕ ಶಾಲೆಗೆ ಬರುವ ಮಕ್ಕಳ ಸಂಖ್ಯೆಯಲ್ಲಿ ಇಳಿಕೆ ಕಂಡು ಬಂದಿದೆ. ಸರ್ಕಾರ ರಾಗಿ ಮಾಲ್ಟ್, ಮೊಟ್ಟೆ, ಚಿಕ್ಕಿ, ಹಾಲು , ಊಟಾ ನೀಡಿದರೂ ಸರ್ಕಾರಿ ಶಾಲೆಗಳ ಮಕ್ಕಳ ಹಾಜರಾತಿ ಕುಸಿತ ಕಂಡು ಬರುತ್ತಿಲ್ಲ. ಶಾಲೆಗೆ ಮಕ್ಕಳ ಹಾಜರಾತಿ ಕುಸಿತದಿಂದ ಶಾಲಾ ಫಲಿತಾಂಶ ಪಾತಳಕ್ಕೆ ಬೀಳುತ್ತಿದೆ. ಪ್ರೌಢ ಶಾಲೆ ಹಾಗೂ ಎಸ್ ಎಸ್ಎಲ್ ಸಿ ವಿದ್ಯಾರ್ಥಿಗಳ ಫಲಿತಾಂಶ ಗಣನಿಯ ಕುಸಿತಕ್ಕ ಮಕ್ಕಳ ಹಾಜರಾತಿಯೇ ಕಾರಣ ಎಂಬ ಅಂಶ ಹೊರ ಬಂದಿದೆ ಹೀಗಾಗಿ ಹೈ ಅಲರ್ಟ್ ಆಗಿರುವ ಶಿಕ್ಷಣ ಇಲಾಖೆ ಮಕ್ಕಳ ಹಾಜರಾತಿ ಜವಬ್ದಾರಿಯನ್ನ ಡಿಡಿಪಿಐ ಹಾಗೂ ಬಿಇಎ ಹೆಗಲಿಗೆ ಹಾಕಿದೆ.
ಶಾಲೆಯಲ್ಲಿ ಮಕ್ಕಳ ಹಾಜರಾತಿ ಕುಸಿತವಾಗದ್ದಂತೆ ನೋಡಿಕೊಳ್ಳಬೇಕು. ಹಾಜರಾತಿ ಕುಸಿತಕ್ಕೆ ಕಾರಣ ಏನು, ಮಕ್ಕಳಿಗೆ ಯಾವೆಲ್ಲ ಸಮಸ್ಯೆ ಪತ್ತೆ ಹಚ್ಚಿ ಸರಿಪಡಿಸುವ ಕ್ರಮ ವಹಿಸಬೇಕು ಯಾವುದೇ ಕಾರಣಕ್ಕೂ ಮಕ್ಕಳ ಹಾಜರಾತಿ ಕಡಿಮೆಯಾಗಬಾರದು ಅಂತಾ ಚಾಟಿ ಬಿಸಿದೆ ಒಂದೊಮ್ಮೆ ಸರ್ಕಾರಿ ಶಾಲಾ ಮಕ್ಕಳ ಹಾಜರತಿ ಕುಸಿತವಾದರೆ ಬಿಇಎ ಹಾಗೂ ಡಿಡಿಪಿಐಗಳೆ ಕಾರಣ ಅಂತಾ ಇಲಾಖೆ ಕ್ರಮಕ್ಕೆ ಮುಂದಾಗಿದೆ.
ಇನ್ನು 2022-23ರ ಸಾಲಿನಲ್ಲಿ ರಾಜ್ಯದಲ್ಲಿ 48,066 ಸರ್ಕಾರಿ ಶಾಲೆಗಳಿದ್ದರೆ ಈ ವರ್ಷ ಶಾಲೆಗಳ ಸಂಖ್ಯೆ 47,449ಕ್ಕೆ ಕುಸಿದಿದೆ. ಶಾಲೆಗಳ ಕುಸಿತಕ್ಕೆ ಕಾರಣ ಅಂದ್ರೆ ಮೂಲಭೂತ ಸೌಲಭ್ಯ ಕೊರತೆ ಹಾಗೂ ಶಿಕ್ಷಕರ ಕೊರತೆ ಇದೆ. ರಾಜ್ಯದಲ್ಲಿ ಬರೊಬ್ಬರಿ 50 ಸಾವಿರಕ್ಕು ಹೆಚ್ಚು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಕರ ಕೊರತೆ ಇದೆ. ಮಾಡಲ್ ಶಾಲೆ ಸೇರಿದಂತೆ ರಾಜ್ಯದ ಬಹುತೇಕ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದೆ. ಅಷ್ಟೇ ಅಲ್ಲದೆ ಶಾಲೆಗಳಲ್ಲಿ ಶೌಚಾಲಯ ವೆವಸ್ಥೆ ಇಲ್ಲಕುಡಿಯಲು ನೀರು ಸಿಗಲ ಸಾಕಷ್ಟು ಸಮಸ್ಯೆಗಳಿಂದ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಕುಸಿಯುತ್ತಿದೆ.
ಮೂಲಭೂತ ಸೌಲಭ್ಯದ ಕೊರತೆಯ ಕಾರಣಕ್ಕೆ ಸಾಕಷ್ಟು ಪೋಷಕರು ಸರ್ಕಾರಿ ಶಾಲೆಯಿಂದ ತಮ್ಮ ಮಕ್ಕಳನ್ನ ಖಾಸಗಿ ಶಾಲೆಗಳತ್ತ ಶಿಫ್ಟ್ ಮಾಡ್ತೀದ್ದಾರೆ ಹೀಗಾಗಿ ಸರ್ಕಾರಿ ಶಾಲೆಯಲ್ಲಿ ದಾಖಲಾತಿ ಕಡಿಮೆಯಾಗುತ್ತಿದೆ. ಇನ್ನು ಕೆಲವು ಪೋಷಕರು ಮಕ್ಕಳನ್ನ ಸರಿಯಾಗಿ ಶಾಲೆಗೆ ಕಳಸುತ್ತಿಲ್ಲ ಇದು ಕೂಡಾ ಎಡವಟ್ಟಿಗೆ ಕಾರಣವಾಗಿದೆ