ಪರಪ್ಪನ ಅಗ್ರಹಾರದಲ್ಲಿ ಕೊಲೆ ಆರೋಪಿ ದರ್ಶನ್ ಗೆ ರಾಜಾತಿಥ್ಯ ವಿಚಾರವಾಗಿ ಜೈಲಿನ ಅಧಿಕಾರಿಗಳು ಲಕ್ಷ ಲಕ್ಷ ಹಣ ಪಡೆದಿದ್ರಾ ಎಂಬ ಪ್ರಶ್ನೆ ಮೂಡಿದೆ.
IPL 2025: ಫ್ಯಾನ್ಸ್ ಗೆ ಗುಡ್ ನ್ಯೂಸ್: RCB ಗೆ ಮತ್ತೋರ್ವ ಸ್ಟಾರ್ ಕನ್ನಡಿಗನ ಎಂಟ್ರಿ!
ಜೈಲಿನ ಆವರಣದಲ್ಲೇ ಕುರ್ಚಿ, ಟೆಂಪಲ್ ಹಾಕಿಕೊಂಡು ಕಾಫಿ ಕುಡೀತಾ, ಮತ್ತೊಂದು ಕೈಯಲ್ಲಿ ಸಿಗರೇಟ್ ಹಿಡಿದಿದ್ದ ದರ್ಶನ್, ನಗುತ್ತಾ ರೌಡಿಶೀಟರ್ಗಳ ಜೊತೆ ಹರಟೆ ಹೊಡೆಯುತ್ತಿದ್ದ ಫೋಟೋ ನೋಡಿ ಜನರು ಶಾಕ್ ಆಗಿದ್ರು. ದರ್ಶನ್ ನಿಜಕ್ಕೂ ಜೈಲಿನಲ್ಲಿದ್ದಾರಾ ಅಥವಾ ಯಾವುದಾದ್ರೂ ರೆಸ್ಟಾರ್ಟ್ನಲ್ಲಿ ಇದ್ದಾರಾ ಎನ್ನುವ ಪ್ರಶ್ನೆ ಸಾಮಾನ್ಯ ಜನರಲ್ಲಿ ಮೂಡಿತ್ತು. ಜೈಲಿನಲ್ಲಿ ಇಷ್ಟೆಲ್ಲಾ ಸೌಲಭ್ಯ, ರಾಜಾತಿಥ್ಯ ಸಿಕ್ಕಿದ್ದು ಹೇಗೆ? ಜೈಲಾಧಿಕಾರಿಗಳಿಗೆ ನಟ ದರ್ಶನ್ ಲಕ್ಷ ಲಕ್ಷ ಹಣ ಕೊಟ್ಟಿದ್ರಾ? ದರ್ಶನ್ ಆಪ್ತರು ಅಧಿಕಾರಿಗಳಿಗೆ ಹಣ ಕೊಟ್ಟಿದ್ದಾರೆ ಎನ್ನುವ ಅನುಮಾನ ಮೂಡಿದೆ.
ನಟ ದರ್ಶನ್ ಪರಪ್ಪನ ಅಗ್ರಹಾರದಲ್ಲಿ ಸಿಕ್ಕ ರಾಜಾತಿಥ್ಯಕ್ಕಾಗಿ ನಟ ದರ್ಶನ್ ಲಕ್ಷ ಲಕ್ಷ ಹಣ ಸುರಿದಿದ್ದಾರೆ ಎನ್ನುವ ಮಾತುಗಳು ಕೂಡ ಕೇಳಿ ಬರ್ತಿದೆ.
ಜೈಲಾಧಿಕಾರಿಗಳು ನಟ ದರ್ಶನ್ ಆಪ್ತರಿಂದ ಹಣ ಪಡೆದು ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್ ಅವರಿಗೆ ರಾಜಾತಿಥ್ಯ ನೀಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ದರ್ಶನ್ ಆಪ್ತರಿಂದ ಜೈಲಿನ ಪ್ರಮುಖ ಅಧಿಕಾರಿಗಳಿಗೆ ಹಣ ಸಂದಾಯ ಮಾಡಲಾಗಿದೆ ಎನ್ನಲಾಗ್ತಿದೆ. ಸೆಂಟ್ರಲ್ ಜೈಲಿನಲ್ಲಿರುವ ಐದಕ್ಕೂ ಹೆಚ್ಚು ಮಂದಿ ಅಧಿಕಾರಿಗಳಿಗೆ ಲಕ್ಷ-ಲಕ್ಷ ಹಣವನ್ನೇ ನೀಡಲಾಗಿದೆ ಎನ್ನಲಾಗ್ತಿದೆ.
ರಾಜಾತಿಥ್ಯ ಪಡೆದ ಫೋಟೋ ವೈರಲ್ ಆದ ಬಳಿಕ ನಟ ದರ್ಶನ್ ಅವರನ್ನು ಪೊಲೀಸರು ವಿಚಾರಣೆ ನಡೆಸಿದ್ರು. ಜೈಲಿನಿಂದ ಸ್ಥಳಾಂತರದ ವೇಳೆ ನಟ ದರ್ಶನ್ ಅಸಮಧಾನ ಹೊರಹಾಕಿದ್ರು ಎನ್ನಲಾಗ್ತಿದೆ. ಅಧಿಕಾರಿಗಳು ಲಕ್ಷ ಲಕ್ಷ ಹಣ ಪಡೆದು ಅನ್ಯಾಯ ಮಾಡ್ತಿದ್ದಾರೆ ಎಂದು ದರ್ಶನ್ ಬೇಸರ ಹೊರಹಾಕಿದ್ರು ಎನ್ನಲಾಗಿದೆ.