ಬೆಂಗಳೂರು:- ಅವರಿಬ್ಬರು ಒಡಹುಟ್ಟಿದವರು ಜೊತೆಯಲ್ಲೇ ಬೆಳದೆವರು,ಕಷ್ಟ- ಸುಖದಲ್ಲಿ ಭಾಗಿಯಾದವರು. ಇತ್ತೀಚೆಗೆ
ತಾಯಿ, ಗಂಡನಿಗೆ ಆರೋಗ್ಯ ಸರಿಯಿಲ್ಲ .ಅಂತ ಅಕ್ಕನ ಮನೆಗೆ ಕರೆದುಕೊಂಡು ಬಂದು ಹಾರೈಕ ಮಾಡ್ತಿದ್ದಳು. ಅಕ್ಕ ಔಷಧಿ ತರುವಂತೆ ಹೇಳಿ ಹಣ ಕೊಟ್ಟು ತಂಗಿಯನ್ನ ಕಳುಹಿಸಿದ್ದಳು ಆದ್ರೆ ಈಕೆ ಮಾಡಿದ ಕೃತ್ಯ ಕಂಡು ಇಡೀ ಕುಟುಂಬ ವೇ ಒಂದು ಕ್ಷಣ ಶಾಕ್ ಆಗಿದೆ..
ಗ್ರಾಹಕರಿಗೆ ಬಿಗ್ ಶಾಕ್ ಕೊಟ್ಟ ಬೆಸ್ಕಾಂ: ಶೀಘ್ರವೇ ಈ ಕೆಲಸ ಮಾಡಿ ಇಲ್ಲಾಂದ್ರೆ ಕರೆಂಟ್ ಕಟ್!?
ಚಂದ್ರಿಕಾ, ಹಾಗೂ ಶಶಿಕಲಾ ಇಬ್ಬರು ಒಂದೇ ತಾಯಿಯ ಮಕ್ಕಳು ,ಆಡುಗೋಡಿ ಎಸ್ ಆರ್ ನಗರದಲ್ಲಿ ಚಂದ್ರಿಕಾ ಗಂಡನ ಜೊತೆ ವಾಸಮಾಡಿಕೊಂಡಿದ್ರೆ ,ಅಕ್ಕ ಶಶಿಕಲಾ ಎಲೆಕ್ಟ್ರಾನಿಕ್ ಸಿಟಿಯಲ್ಲಿ ವಾಸ ಮಾಡುತ್ತಿದ್ದಳು.ಇವರ ತಾಯಿ ಶಾಂತಿ ನಗರದಲ್ಲಿ ವಾಸವಾಗಿದ್ರು ಇತ್ತೀಚೆಗೆ ಚಂದ್ರಿಕಾ ಗಂಡ, ಹಾಗೂ ತಾಯಿ ಇಬ್ಬರಿಗೂ ಆರೋಗ್ಯ ಕೈ ಕೊಟ್ಟಿತ್ತು ಇಬ್ಬರನ್ನೂ ನೋಡಿಕೊಳ್ಳೋದು ಕಷ್ಟ ಅಂತ ಅಕ್ಕನ ಮನೆಗೆ ಕರೆದುಕೊಂಡು ಹೋಗಿ ಅಲ್ಲಿ ಯೇ ಹಾರೈಕೆ ಮಾಡುತ್ತಿದ್ದಳು ಹೀಗೆ ಇರಬೇಕಾದರೆ ಔಷಧಿ ತೆಗೆದುಕೊಂಡು ಬರುವಂತೆ ಹೇಳಿ ತಂಗಿ ಚಂದ್ರಿಕಾ ಗಾಡಿ ಕೊಟ್ಟುಕಳಿಸಿದ್ದಾಳೆ . ಸೀದಾ ಮೆಡಿಕಲ್ ಸ್ಟೋರಿಗೆ ಬರಬೇಕಾದ ಶಶಿಕಲಾ ತನ್ನ ದೊಡ್ಡಮ್ಮನನ್ನ ಕರೆದುಕೊಂಡು ಬಂದಿದ್ದು ಎಸ್ ಆರ್ ನಗರದ ತಂಗಿಯ ಮನೆಗೆ.
ತಂಗಿ ಕೊಟ್ಟ ಗಾಡಿಯ ಕೀ ಜೊತೆ ಮನೆಯ ಕೀ ಕೂಡ ಇತ್ತು , ಅಲ್ಲದೆ ತಂಗಿಯ ಹತ್ತಿರ ಚಿನ್ನಾಭರಣ ಇರೋದು ಕೂಡ ಗೊತ್ತಿತ್ತು ಗಾಡಿಯನ್ನ ನೂರು ಮೀಟರ್ ದೂರದಲ್ಲಿ ನಿಲ್ಲಿಸಿ ಆಕೆಯ ದೊಡ್ಡಮ್ಮನನ್ನು ಅಲ್ಲಿಯೆ ಬಿಟ್ಟು ಬಂದಿದ್ದಳು . ಮನೆಯ ಬಾಗಿಲು ಓಪನ್ ಮಾಡಿ, ಬೀರು ಲಾಕ್ ಮುರಿದು ಚಿನ್ನ ಆಭರಣಗಳ ,ಹಣದೋಚಿ ಎಸ್ಕೇಪ್ ಆಗಿದ್ದಳು. ವರಮಹಾಲಕ್ಷ್ಮೀ ಹಬ್ಬ ಮಾಡಬೇಕೆಂದಿದ್ದ ತಂಗಿ ಚಂದ್ರಿಕಾ ಗೆ ಶಾಕ್ ಕಾದಿತ್ತು.
ಔಷಧಿ ತರೋದಕ್ಕೆಯಾಕೆ ಇಷ್ಟು ಲೇಟು ಅಂದ್ರೆ ಮಳೆ ಬರ್ತಿತ್ತು ಎಂದು ಕಥೆ ಹೇಳಿದ್ದಾಳೆ. ಇನ್ನೂ ಈ ಬಗ್ಗೆ ಜೊತೆಯಲ್ಲಿ ಬಂದಿದ್ದ ಅವರ ದೊಡ್ಡಮ್ಮನಿಗೂ ಕಳ್ಳತನ ಮಾಡಿರೋದು ಗೊತ್ತಿರಲಿಲ್ಲಂತೆ.