ಮಹದೇವಪುರ: ಮಹದೇವಪುರದ ಇಮ್ಮಡಿಹಳ್ಳಿಯ ಬಿಬಿಎಂಪಿ ಕಚೇರಿಯಲ್ಲಿ ರಾಜ್ಯ ಸರ್ಕಾರದ ಪಂಚ ಗ್ಯಾರೆಂಟಿಗಳ ಅನುಷ್ಠಾನ ಸಮಿತಿ ಕಚೇರಿಯನ್ನು ರಾಜ್ಯ ಗ್ಯಾರಂಟಿಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಸೂರಜ್ ಹೆಗ್ಡೆ ರೇವಣ್ಣ ಹಾಗೂ ಮಾಜಿ ಸಚಿವ ಹೆಚ್.ನಾಗೇಶ್ ಉದ್ಘಾಟಿಸಿದರು .
ಉದ್ಘಾಟಿಸಿ ಮಾತನಾಡಿದ ಸಮಿತಿ ಉಪಾಧ್ಯಕ್ಷ ಸೂರಜ್ ಹೆಗ್ಡೆ ಅವರು ಜನಪರ ಕೇಲಸ ಮಾಡುತ್ತಿರುವ ನುಡಿದಂತೆ ನಡೆದಿರುವ ಸರ್ಕಾರ ಕಾಂಗ್ರೆಸ್ ಸರ್ಕಾರವಾಗಿದ್ದು,ಮುಂದಿನ ದಿನಗಳಲ್ಲಿ ಹಲವು ಜನಪರ ಕಾರ್ಯಗಳನ್ನು ಮಾಡುತ್ತೆವೆ ಎಂದು ಹೇಳಿದರು.
ಗ್ಯಾರಂಟಿಗಳ ಅನುಷ್ಠಾನದ ಕುಂದುಕೊರತೆಗಳನ್ನು ನಿವಾರಿಸುವ ಸಲುವಾಗಿ ಕಚೇರಿ ತೆರದಿದ್ದು,ಗ್ಯಾರಂಟಿ ಯೋಜನೆಗಳ ಸರ್ಮಪಕ ಅನುಷ್ಠಾನ ನಮ್ಮ ಜವಾಬ್ದಾರಿ ಎಂದು ತಿಳಿಸಿದರು.ಈ ಭಾಗದಲ್ಲಿ ಎಲ್ಲಾರಿಗೂ ಸರ್ಕಾರದ ಯೋಜನೆಗಳು ಸಮರ್ಪಕವಾಗಿ ಸಿಗುವಂತೆ ನೋಡಿಕೊಳ್ಳಲಾಗುತ್ತೆ ಎಂದರು.
ಐದು ವರ್ಷಗಳ ಕಾಲ ಕಾಂಗ್ರೆಸ್ ಸರ್ಕಾರ ಅದ್ಭುತ ಯಶಸ್ಸನ್ನು ಗಳಿಸುವ ಮೂಲಕ ಜನಮನ್ನಣೆ ಗಳಿಸಲಿದೆ, ಮಹದೇವಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಮುಂದಿನ ದಿನಗಳಲ್ಲಿ ಜಯಗಳಿಸಲಿದೆ ಎಂದು ಭವಿಷ್ಯ ನುಡಿದರು.
ಪೂರ್ವ ಜಿಲ್ಲಾ ಅಧ್ಯಕ್ಷ ನಂದಕುಮಾರ್ ಅವರು ಮಾತನಾಡಿ ಪ್ರಶಾಂತ್ ರವರನ್ನು ಮಹದೇವಪುರ ಕ್ಷೇತ್ರದ ಗ್ಯಾರಂಟಿ ಯೋಜನೆಗಳ ಅಧ್ಯಕ್ಷರಾಗಿ ಆಯ್ಕೆ ಮಾಡಿದ್ದು ಸಾರ್ವಜನಿಕರಿಗೆ ಗ್ಯಾರೆಂಟಿ ಯೋಜನೆಗಳ ಸಮಸ್ಯೆಗೆ ಪ್ರಶಾಂತ್ ಉತ್ತಮ ರೀತಿಯಲ್ಲಿ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ .
ಈ ವೇಳೆ ಬಿಬಿಎಂಪಿ ಗ್ಯಾರೆಂಟಿ ಅನುಷ್ಟಾನ ಸಮಿತಿ ಅಧ್ಯಕ್ಷ ಕೃಷ್ಣಪ್ಪ,ಮುಖಂಡರಾದ ಬೆಳತೂರು ರಮೇಶ್,ಪಟ್ಟಂದೂರು ಬಾಬು, ಬಿ.ವಿ.ವರುಣ್,ಮುನಿಯಪ್ಪ,ಕುಮಾರ್, ಬೊಮ್ಮನಹಳ್ಳಿ ಮುನಿರಾಜು, ಇಬ್ರಾಹಿಂ ಚಾಂದ್, ಶಿಲ್ಪ ಕಾಶ್ಯಪ್, ವರ್ತೂರು ರಾಜು, ಮತ್ತಿತ್ತರರು ಉಪಸ್ಥಿತರಿದ್ದರು.