ಬೆಂಗಳೂರು:- ರಾಜ್ಯಪಾಲರ ವಿರುದ್ಧ ಕಾಂಗ್ರೆಸ್ ನಾಯಕರು ನಾಳೆ ಬೀದಿಗೆ ಇಳಿಯಲಿದ್ದಾರೆ.ಮುಡಾ ಹಗರಣದಲ್ಲಿ ಸಿಎಂ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ಕೊಟ್ಟಿರುವ ವಿಚಾರಕ್ಕೆ ಸಂಬಂಧಪ್ಟಟಂತೆ ರಾಜ್ಯಪಾಲರ ವಿರುದ್ಧ ಕೈ ನಾಯಕರು ತಿರುಗಿಬಿದ್ದಿದ್ದಾರೆ.ಡಿಸಿಎಂ ಡಿಕೆಶಿ ನೇತೃತ್ವದಲ್ಲಿ ನಾಳೆ ಸಚಿವರು,ಶಾಸಕರು,ಸಂಸದರು ರಾಜಭವನ ಚಲೋ ಗೆ ಮುಂದಾಗಿದ್ದಾರೆ.ಇದ್ರ ನಡುವೆ ಕೈ ಮನೆಯಲ್ಲಿ ಗುಪ್ತ್ ಗುಪ್ತ್ ಮೀಟಿಂಗ್ ಗಳು ಶುರುವಾಗಿದೆ.
TA Sharavana: ಕರ್ನಾಟಕ ವಿಧಾನ ಪರಿಷತ್ ಸರ್ಕಾರಿ ಭರವಸೆಗಳ ಸಮಿತಿಗೆ ನೂತನ ಅಧ್ಯಕ್ಷರಾಗಿ TA ಶರವಣ!
ರಾಜ್ಯಪಾಲರ ನಡೆಯ ವಿರುದ್ಧ ಕಾಂಗ್ರೆಸ್ ನಾಯಕರು ತಿರುಗಿಬಿದ್ದಿದ್ದಾರೆ.ಮೂಡಾ ಕೇಸ್ ನಲ್ಲಿ ಸಿಎಂ ಸಿದ್ರಾಮಯ್ಯ ವಿರುದ್ಧ ಪ್ರಾಸಿಕ್ಯೂಶನ್ ಗೆ ಕೊಟ್ಟಿದ್ದಕ್ಕೆ ಗರಂ ಆಗಿದ್ದಾರೆ. ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಸಾಯಿ ವೆಂಕಟೇಶ್ವರ ಮಿನರಲ್ಸ್ ಗಣಿ ಗುತ್ತಿಗೆ ಆರೋಪ,ಜೊಲ್ಲೆಯವರ ಮೊಟ್ಟೆ ಪ್ರಕರಣ,ಜನಾರ್ಧನ ರೆಡ್ಡಿಯವರ ಅಕ್ರಮ ಆದಾಯ ಪ್ರಕರಣ,ನಿರಾಣಿಯವರ ಮೇಲಿನ ಇನ್ ವೆಸ್ಟ್ ಕರ್ನಾಟಕ ಬಂಡವಾಳ ಹೂಡಿಕೆಯ ಪ್ರಕರಣಗಳಲ್ಲಿ ಚಾರ್ಜ್ ಶೀಟ್ ಹಾಕಿದ್ರೂ ಪ್ರಾಸಿಕ್ಯೂಶನ್ ಗೆ ಕೊಟ್ಟಿಲ್ಲವೆಂದು ಗರಂ ಆಗಿದ್ದಾರೆ.ಈಬಾಕಿ ಪ್ರಕರಣಗಳನ್ನ ಪ್ರಾಸಿಕ್ಯೂಶನ್ ಗೆ ಕೊಡ್ಬೇಕೆಂದು ರಾಜ್ಯ ಕಾಂಗ್ರೆಸ್ ನಾಳೆ ರಾಜಭವನ ಚಲೋಗೆ ಕರೆ ನೀಡಿದೆ..
ಇನ್ನು ನಾಳೆ ವಿಧಾನ ಸೌಧ ಆವರಣದಲ್ಲಿರುವ ಗಾಂಧಿ ಪ್ರತಿಮೆಯ ಮುಂಭಾಗ ಕಾಂಗ್ರೆಸ್ ಪ್ರತಿಭಟನೆ ಹಮ್ಮಿಕೊಂಡಿದೆ.ಡಿಸಿಎಂ ಡಿ ಕೆ ಶಿವಕುಮಾರ್ ನೇತೃತ್ವದಲ್ಲಿ ನಡೆಯಲಿರುವ ಪ್ರತಿಭಟನೆಯಲ್ಲಿ ಸಚಿವರು,ಶಾಸಕರು,ಸಂಸದರು,ಪರಿಷತ್ ಸದಸ್ಯರು ಭಾಗಿಯಾಗಲಿದ್ದಾರೆ.
ಬಳಿಕ ಗಾಂಧಿ ಪ್ರತಿಮೆಯಿಂದ ರಾಜಭವನದವರೆಗೂ ಕಾಲ್ಮಡಿಗೆಯಲ್ಲಿ ತೆರಳಿ ರಾಜ್ಯಪಾಲರಿಗೆ ಮನವಿ ಪತ್ರ ನೀಡಲಿದ್ದಾರೆ.ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಅನುಮತಿ ನೀಡಿದಂತೆ,ಕೇಂದ್ರ ಸಚಿವ ಹೆಚ್ಡಿಕೆ,ಜನಾರ್ಧನ ರೆಡ್ಡಿ,ಮುರುಗೇಶ್ ನಿರಾಣಿ,ಶಶಿಕಲಾ ಜೊಲ್ಲೆ ಅಕ್ರಮ ಆರೋಪ ಪ್ರಕರಣಗಳ ಬಗ್ಗೆ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡುವಂತೆ ಮನವಿ ಮಾಡಲು ಮುಂದಾಗಿದ್ದಾರೆ. ಪ್ರತಿಭಟನೆಯ ಮೂಲಕವೇ ರಾಜ್ಯಪಾಲರ ಮೇಲೆ ಒತ್ತಡ ತರುವ ಪ್ರಯತ್ನಕ್ಕೆ ಕೈ ನಾಯಕರು ಮುಂದಾಗಿದ್ದಾರೆ.
ಇನ್ನು ಸಿಎಂ ಸಿದ್ದರಾಮ್ಯಯಗೆ ಮುಡಾ ಸಂಕಷ್ಟ ಎದುರಾಗಿರೋದ್ರಿಂದ ಕಾಂಗ್ರೆಸ್ ಮನೆಯಲ್ಲಿ ಮಹತ್ವದ ಬೆಳವಣಿಗೆಗಳು ನೆಡೆಯುತ್ತಿದೆ. ಒಂದು ವೇಳೆ ಮುಡಾ ಪ್ರಕರಣದಲ್ಲಿ ಸಿಎಂ ವಿರುದ್ಧ ಎಫ್ ಐ ಆರ್ ಆದ್ರೆ ಮುಂದೇನು ಎಂಬ ಚರ್ಚೆಗಳು ಶುರುವಾಗಿದೆ.ಸಿಎಂ ಸ್ಥಾನದಿಂದ ಸಿದ್ದರಾಮಯ್ಯ ಇಳಿಯುವ ಸಂದರ್ಭ ಬಂದಿದ್ದೇ ಆದಲ್ಲಿ ಮುಂದಿನ ಸಿಎಂ ಅಭ್ಯರ್ಥಿ ಬಗ್ಗೆ ಕಾಂಗ್ರೆಸ್ ಪಕ್ಷದಲ್ಲಿ ಚರ್ಚೆಯಾಗುತ್ತಿದೆ.ಇದ್ರ ಭಾಗವಾಗಿ ಕೆಲ ನಾಯಕರು ರಹಸ್ಯ ಸಭೆಗಳು ನಡೆಸುತ್ತಿದ್ದಾರೆ.ಇವತ್ತು ಸಚಿವ ಸತೀಶ್ ಜಾರಕಿಹೊಳಿ ನಿವಾಸಕ್ಕೆ ಭೇಟಿ ನೀಡಿದ ಗೃಹ ಸಚಿವ ಜಿ.ಪರಮೇಶ್ವರ್ ಸುಮಾರು ಎರಡು ಗಂಟೆಗಳ ಚರ್ಚೆ ನಡೆಸಿದ್ದಾರೆ. ಜೋಳದ ರೊಟ್ಟಿ ಊಟ ಮಾಡಲು ನಾನು ಬಂದಿದ್ದೆ ಎಂದು ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ರೆ,ಪ್ರಸಕ್ತ ರಾಜಕೀಯ ವಿದ್ಯಮಾನ ಬಳ ಬಗ್ಗೆ ಚರ್ಚೆ ಮಾಡಿದ್ದೇವೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಒಟ್ನಲ್ಲಿ,ರಾಜ್ಯಪಾಲರ ವಿರುದ್ಧ ನಾಳೆ ಕಾಂಗ್ರೆಸ್ ಬೀದಿಗಿಳಿದು,ರಾಜ್ಯಪಾಲರ ನಡೆ ವಿರುದ್ಧ ರಣಕಹಳೆ ಮೊಳಗಿಸಲಿದ್ದಾರೆ.ಇತ್ತ ಸಿಎಂ ಸಿದ್ದರಾಮಯ್ಯ ಬದಲಾವಣೆ ಚರ್ಚೆಗೆ ಕಾಂಗ್ರೆಸ್ ಮನೆಯಲ್ಲಿ ರಹಸ್ಯ ಸಭೆಗಳು ಸಾಕ್ಷಿಯಾಗುತ್ತಿದೆ.