ಬೆಂಗಳೂರು:- ಕರ್ನಾಟಕ ವಿಧಾನ ಪರಿಷತ್ತಿನ ಸರ್ಕಾರಿ ಭರವಸೆಗಳ ಸಮಿತಿಯ ನೂತನ ಅಧ್ಯಕ್ಷರಾಗಿ ಪರಿಷತ್ ಶಾಸಕ ಟಿಎ ಶರವಣ ಅವರು ಆಯ್ಕೆ ಆಗಿದ್ದಾರೆ.
ಮಾನ್ಯ ಸಭಾಪತಿಗಳಾದ ಬಸವರಾಜ್ ಹೊರಟ್ಟಿ ಅವರು ಟಿಎ ಶರವಣ ಅವರನ್ನು ಪರಿಷತ್ತಿನ ಸರ್ಕಾರಿ ಭರವಸೆಗಳ ಸಮಿತಿಯ ನೂತನ ಅಧ್ಯಕ್ಷರಾಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
ಇನ್ನೂ ಸರ್ಕಾರಿ ಭರವಸೆಗಳ ಸಮಿತಿಯ ಸದಸ್ಯರಾಗಿ ಪ್ರಕಾಶ್ ಕೆ ರಾಥೋಡ್, ಶರವಣ ಟಿಎ, ಎನ್ ರವಿಕುಮಾರ್, ಯುಬಿ ವೆಂಕಟೇಶ್, ಪ್ರತಾಪ್ ಸಿಂಹ ನಾಯಕ್ ಕೆ, ಡಿ ಎಸ್ ಅರುಣ್, ಕೆ ಎಸ್ ನವೀನ್, ಮಂಜುನಾಥ್ / ಭಂಡಾರಿ, ತಿಪ್ಪಣಪ್ಪ ತಿಮಕನೂರ, ಇವರುಗಳನ್ನು ನೇಮಕ ಮಾಡಲಾಗಿದೆ.
ಇನ್ನೂ ಸರ್ಕಾರಿ ಭರವಸೆಗಳ ಸಮಿತಿಯ ಅಧ್ಯಕ್ಷರಾಗಿ ಆಯ್ಕೆ ಆದ ಹಿನ್ನೆಲೆ ಟಿಎ ಶರವಣ ಅವರು X ಮಾಡಿದ್ದು, ಸಮಾಜಮುಖಿ ಸೇವೆ ಮಾಡಲು ಅವಕಾಶ ನೀಡಿರುವ ಸಭಾಪತಿ ಬಸವರಾಜ್ ಹೊರಟ್ಟಿ ಅವರಿಗೆ ಹೃದಯಪೂರ್ವಕ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.