ಕೆ ಆರ್.ಪುರ: ಕೊತ್ತನೂರಿನಲ್ಲಿ ಹೈಟೆಕ್ ಓವಂ ಆಸ್ಪತ್ರೆಯನ್ನು ಉದ್ಘಾಟನೆ ಮಾಡಿದ್ದು ಮಕ್ಕಳು ಮತ್ತು ಗರ್ಭಿಣಿ ಮಹಿಳೆಯರು ಉತ್ತಮ ಚಿಕಿತ್ಸೆಗಾಗಿ ಸದುಪಯೋಗಪಡೆದುಕೊಳ್ಳಿ ಎಂದು ಶಾಸಕ ಬೈರತಿ ಬಸವರಾಜ್ ತಿಳಿಸಿದರು.
ಕೆ ಆರ್.ಪುರ ಕ್ಷೇತ್ರದ ಕೊತ್ತನೂರಿನಲ್ಲಿ ಓವಂ ಆಸ್ಪತ್ರೆಯ ಆರನೇ ಶಾಖೆಯನ್ನು ಉದ್ಘಾಟಿಸಿ ಅವರು ಮಾತನಾಡಿದ ಅವರು ಕೊತ್ತನೂರು ಭಾಗದಲ್ಲಿ ಹೆಚ್ಚು ಅಭಿವೃದ್ಧಿವೊಂದಿದ ಬಡಾವಣೆಗಳೇ ಇದ್ದು ಇಲ್ಲಿನ ಜನಕ್ಕೆ ತಕ್ಕ ಆಸ್ಪತ್ರೆಯ ಎಲ್ಲಾ ಸೌಲಭ್ಯಗಳೊಂದಿಗೆ ತೆರಿದಿದ್ದಾರೆ ಎಂದು ಹೇಳಿದರು.
ಆಧುನಿಕ ಉಪಕರಣಗಳನ್ನು ಹೊಂದಿರುವ ಈ ಆಸ್ಪತ್ರೆಗೆ ಒಮ್ಮೆ ಭೇಟಿ ಕೊಟ್ಟರೆ ಎಷ್ಟು ಸುರಕ್ಷತೆ ಇದೆ ಎಂಬುದು ತಿಳಿಯುವುದು ಎಂದು ಹೇಳಿದರು.
ಓವಂ ಆಸ್ಪತ್ರೆ ಇನ್ನಷ್ಟು ಎತ್ತರಕ್ಕೆ ಬೆಳೆದು ಜನರಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆಗಳನ್ನು ನೀಡಲಿ ಎಂದು ಆಶಿಸಿದರು.
ಓವಂ ಆಸ್ಪತ್ರೆ ಸಿಇಒ ಡಾ.ಆದರ್ಶ್ ಮಾತನಾಡಿ, ಕಲ್ಯಾಣ್ ನಗರಲ್ಲಿ 2014 ರಲ್ಲಿ ಆರಂಭವಾದ ಮೊದಲ ಓವಂ ಆಸ್ಪತ್ರೆ ಬೆಂಗಳೂರಿನಲ್ಲಿ ಉತ್ತಮ ಗುಣಮಟ್ಟದ ಚಿಕಿತ್ಸೆಗಳನ್ನು ನೀಡುತ್ತಾ ಬಂದಿದ್ದು, ಇಂದು ಆರನೇ ಶಾಖೆಗಳನ್ನು ತೆರೆದಿದೆ ಎಂದರು.
ಈ ಭಾಗದ ಜನರು ಮೊದಲು ಬಾಣಸವಾಡಿ ಶಾಖೆ
ಹೋಗುತ್ತಿದ್ದರು. ಕೋವಿಡ್ ಬಳಿಕ ಟ್ರಾಫಿಕ್ ಜಾಮ್ ಹೆಚ್ಚಾಗಿ ಜನರು ಬರಲು ತೊಂದರೆಯಾಗುತ್ತಿತ್ತು. ಜನರ ಒತ್ತಾಯದ ಮೇರೆಗೆ ಬೆಂಗಳೂರಿನ ಮೂಲೆ ಮೂಲೆಯಲ್ಲಿ ಶಾಖೆಗಳನ್ನು ಆರಂಭ ಮಾಡಲು ಮುಂದಾಗಿದ್ದು ಇದೀಗ ಕೊತ್ತನೂರಿನಲ್ಲಿ ತಮ್ಮ ಆರನೇ ಶಾಖೆ ತೆರೆದಿದ್ದು ಸಾರ್ವಜನಿಕರಿಗೆ ಉತ್ತಮ ಚಿಕಿತ್ಸೆ ನೀಡಲು ಸಹಕಾರಿಯಾಗಿದೆ ಎಂದರು.
ತಾಯಿ ಮತ್ತು ಮಗು ಸುರಕ್ಷತೆಗೆ ಬೇಕಿರುವ ಎಲ್ಲಾ ರೀತಿಯ ಸೌಲಭ್ಯ ಈ ನಮ್ಮ ಹೊಸ ಅಸ್ಪತ್ರೆಯಲ್ಲಿದೆ. ಗರ್ಭಿಣಿಯಿಂದ ಹಿಡಿದು ಹೆರಿಗೆಯಾಗಿ ಆ ಮಗು ಬೆಳೆಯುವವರೆಗೂ ತಾಯಿ ಮತ್ತು ಮಗುವಿಗೆ ಬೇಕಿರುವ ಆರೈಕೆ ಹಾಗೂ ಚಿಕಿತ್ಸೆ ನೀಡಲಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಚಿದಾನಂದ್, ಸಿಇಒ ಡಾ.ಆದರ್ಶ್ ಸೋಮಶೇಖರ್, ಡಾ.ಜಾನಸ್ ಮ್ಯಾತ್ಯೂ, ಡಾ.ಮಂಜುಳಾ ಎಸ್. ಪಾಟೀಲ್, ಡಾ.ಶ್ವೇತ ವೆಂಜುಮೂರಿ, ವೆಂಕಟ್ ಶಿವರಾಮರೆಡ್ಡಿ , ಹಾಗೂ ವೈದ್ಯರುಉಪಸ್ಥಿತರಿದ್ದರು .