ಕಳೆದ 2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯಲ್ಲಿ ಪರಿಚಯಿಸಲಾಗಿದ್ದ ಇಂಪ್ಯಾಕ್ಟ್ ನಿಮಿಯವನ್ನು ಹಾಗೆಯೇ ಮುಂದುವರಿಸಬೇಕೆಂದು ಟೀಮ್ ಇಂಡಿಯಾ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ಆಗ್ರಹಿಸಿದ್ದಾರೆ. ಇಂಪ್ಯಾಕ್ಟ್ ನಿಯಮದಿಂದ ತಾಂತ್ರಿಕವಾಗಿ ಯೋಚಿಸುವುದಕ್ಕೆ ಉತ್ತೇಜನ ನೀಡುತ್ತದೆ ಎಂಂದು ಹೇಳಿದ್ದಾರೆ.
2023ರ ಐಪಿಎಲ್ ಟೂರ್ನಿಯಲ್ಲಿಯೇ ಇಂಪ್ಯಾಕ್ಟ್ ನಿಯಮವನ್ನು ಪರಿಚಯಿಸಲಾಗಿತ್ತು. ಆದರೆ, ಇದರ ಬಗ್ಗೆ ಮಿಶ್ರ ಅಭಿಪ್ರಾಯಗಳು ಕೇಳಿ ಬಂದಿದ್ದವು. ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಇಬ್ಬರೂ ಈ ನಿಯಮದಿಂದ ಭಾರತದಲ್ಲಿ ಆಲ್ರೌಂಡರ್ಗಳ ಬೆಳವಣಿಗೆಯ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಹೇಳಿದ್ದರು.
ಇಂಪ್ಯಾಕ್ಟ್ ಪ್ಲೇಯರ್ ನಿಯಮದಿಂದ ಐಪಿಎಲ್ ತಂಡಗಳು ಒಟ್ಟು 8 ಮಂದಿ ಬ್ಯಾಟ್ಸ್ಮನ್ಗಳನ್ನು ಆಡಿಸಿದ್ದವು ಹಾಗೂ ಹೆಚ್ಚುವರಿ ಬೌಲರ್ ಅನ್ನು ಆಡಿಸಲಾಗುತ್ತಿತ್ತು. ಐಪಿಎಲ್ ಟೂರ್ನಿಯ ವೇಳೆ ಹಲವು ಟೀಮ್ ಇಂಡಿಯಾದ ಹಿರಿಯ ಆಟಗಾರರು ವರ್ಕ್ಲೋಡ್ ಮ್ಯಾನೇಜ್ಮೆಂಟ್ ಸಲುವಾಗಿ ಬೌಲಿಂಗ್ ವೇಳೆ ಮೈದಾನಕ್ಕೆ ಆಗಮಿಸಿದರೆ ಡ್ರೆಸ್ಸಿಂಗ್ ರೂಂನಲ್ಲಿಯೇ ವಿಶ್ರಾಂತಿಯನ್ನು ಪಡೆಯುತ್ತಿದ್ದರು.
ಇಂಪ್ಯಾಕ್ಟ್ ಪ್ಲೇಯರ್ ನಿಯಮ ಕೆಟ್ಟದಾಗಿಲ್ಲ ಎಂಬುದು ನನ್ನ ಅಭಿಪ್ರಾಯ. ಏಕೆಂದರೆ ಆಟದ ತಂತ್ರಕ್ಕೆ ಹೆಚ್ಚಿನ ಮೌಲ್ಯವನ್ನು ತಂದುಕೊಡುತ್ತದೆ. ಆಲ್ರೌಂಡರ್ಗಳ ಬೆಳವಣಿಗೆ ಮೇಲೆ ಇದು ಪರಿಣಾಮ ಬೀರುತ್ತದೆಂಬುದು ಮತ್ತೊಂದು ವಾದ ಇದೆ. ಆದರೆ, ಪಂದ್ಯದಲ್ಲಿ ಆಲ್ರೌಂಡರ್ಗಳನ್ನು ನಿಯಂತ್ರಿಸಲು ಸಾಧ್ಯವಿಲ್ಲ,” ಎಂದು ಆರ್ ಅಶ್ವಿನ್ ತಿಳಿಸಿದ್ದಾರೆ.