ಬೆಂಗಳೂರು:- ರಾಜಧಾನಿ ಬೆಂಗಳೂರಿನ ಹಲವು ಏರಿಯಾಗಳಲ್ಲಿ ಇಂದು ಪವರ್ ಕಟ್ ಇರಲಿದೆ.
ದುರಸ್ತಿ ಕಾಮಗಾರಿಯ ಕಾರಣ ಬೆಂಗಳೂರಿನ ಹಲವು ಪ್ರದೇಶಗಳೂ ಸೇರಿದಂತೆ ಬೆಸ್ಕಾಂ ವ್ಯಾಪ್ತಿಯ ಇತರ ಜಿಲ್ಲೆಗಳ ಕೆಲವು ಪ್ರದೇಶಗಳಲ್ಲಿ ಇಂದು ವಿದ್ಯುತ್ ಕಡಿತ / ಪವರ್ ಕಟ್ ಇರಲಿದೆ. ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್ ಮೂಲಕ ಬೆಸ್ಕಾಂ ಮಾಹಿತಿ ನೀಡಿದೆ.
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದ ಲೈನ್ ದುರಸ್ತಿ ನಿರ್ವಹಣಾ ಕಾಮಗಾರಿ ಸಲುವಾಗಿ ಗುರುವಾರ ಈ ಪ್ರದೇಶಗಳಲ್ಲಿ ವಿದ್ಯುತ್ ಅಡಚಣೆ ಉಂಟಾಗಲಿದೆ ಎಂದು ಪ್ರದೇಶಗಳ ವಿವರ ಸಮೇತ ಬೆಸ್ಕಾಂ ಮಾಹಿತಿ ನೀಡಿದೆ.
ಬೆಂಗಳೂರಿನಲ್ಲಿ ಹೆಚ್ಎಸ್ಆರ್ ವಿಭಾಗದ ಲಕ್ಷ್ಮೀ ಲೇಯೌಟ್, ಸೌತ್ ಸಿಟಿ ಅಪಾರ್ಟ್ಮೆಂಟ್ಸ್, ಕಮ್ಮನಹಳ್ಳಿ, ಶಾಂತಿನಿಕೇತನ, ಎಸ್12 ಮತ್ತು ಎಸ್ 14 ಉಪವಿಭಾಗಗಳ ಸುತ್ತಲಿನ ಪ್ರದೇಶಗಳಲ್ಲಿ ವಿ್ಯುತ್ ಕಡಿತ ಇರಲಿದೆ.
ಕೋರಮಂಗಲ ವಿಭಾಗದ ಗುಂಜೂರು ಪಾಳ್ಯ, ಗುರಪ್ಪ ರೆಡ್ಡಿ ಲೇಯೌಟ್, ಎಎಸ್ ಪಾಳ್ಯ ಪ್ರದೇಶಗಳಲ್ಲಿ ಪವರ್ ಕಟ್ ಇರಲಿದೆ.
ಹೆಚ್ಎಸ್ಆರ್ ವಿಭಾಗ ಪ್ರದೇಶಗಳಲ್ಲಿ ಬೆಳಗ್ಗೆ 11ರಿಂದ ಸಂಜೆ 3ರ ವರೆಗೆ ಹಾಗೂ ಕೋರಮಂಗಲದ ಗುಂಜೂರು ಪಾಳ್ಯದಲ್ಲಿ ಬೆಳಗ್ಗೆ 11ರಿಂದ ಸಂಜೆ 5ರ ವರೆಗೆ ಮತ್ತು ಗುರಪ್ಪ ರೆಡ್ಡಿ ಲೇಯೌಟ್, ಎಎಸ್ ಪಾಳ್ಯ ಪ್ರದೇಶಗಳಲ್ಲಿ ಬೆಳಗ್ಗೆ 11ರಿಂದ ಸಂಜೆ 3ರ ವರೆಗೆ ಪವರ್ ಕಟ್ ಇರಲಿದೆ. ಉಳಿದಂತೆ ಬೆಸ್ಕಾಂ ವ್ಯಾಪ್ತಿಯ ರಾಮನಗರ, ಚಿಂತಾಮಣಿ, ಬೆಂಗಳೂರು ಗ್ರಾಮಾಂತರ, ದೊಡ್ಡಬಳ್ಳಾಪುರ, ಚಿತ್ರದುರ್ಗ ಹಾಗೂ ತುಮಕೂರು ವ್ಯಾಪ್ತಿಯಲ್ಲಿಯೂ ಪವರ್ ಕಟ್ ಇರಲಿದೆ.