ಬೆಂಗಳೂರು:- ಕೆಂಪೇಗೌಡ ವಿಮಾನ ನಿಲ್ದಾಣದ ಟರ್ಮಿನಲ್-1 ರ ಬಳಿ ಮಚ್ಚಿನಿಂದ ಕೊಚ್ಚಿ ವ್ಯಕ್ತಿಯ ಕೊಲೆ ಮಾಡಿರುವ ಘಟನೆ ಜರುಗಿದೆ.
Murder Case: ಜಾಮೀನು ಕೋರಿ ಪವಿತ್ರಾಗೌಡ ಅರ್ಜಿ : ಆ.31ಕ್ಕೆ ತೀರ್ಪು ಕಾಯ್ದಿರಿಸಿದ ಕೋರ್ಟ್!
ಕೆಂಪೇಗೌಡ ಏರ್ಪೋರ್ಟ್ ನ ಟರ್ಮಿನಲ್-1 ರ ಶೌಚಾಲಯದ ಬಳಿ ಕೊಲೆ ನಡೆದಿದೆ. ಅನೈತಿಕ ಸಂಬಂಧ ವಿಚಾರಕ್ಕೆ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಏರ್ಪೋರ್ಟ್ ನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತಿದ್ದ 48 ವರ್ಷದ ರಾಮಕೃಷ್ಣ ರನ್ನು ಕೊಲೆ ಮಾಡಲಾಗಿದೆ.
ಇವರದೇ ಗ್ರಾಮದ ರಮೇಶ್ ಎಂಬಾತನಿಂದ ಕೊಲೆ ನಡೆದಿದ್ದು, ಸ್ಥಳಕ್ಕೆ ಏರ್ಪೋರ್ಟ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಆರೋಪಿ ರಮೇಶ್ ನನ್ನು ಪೊಲೀಸರು ಬಂಧಿಸಿದ್ದು, ಮೃತ ರಾಮಕೃಷ್ಣ ಹಾಗೂ ರಮೇಶ್ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿಗೆ ಸೇರಿದವರು ಎನ್ನಲಾಗಿದೆ.
ಮೃತ ರಾಮಕೃಷ್ಣ ಆರೋಪಿ ರಮೇಶ್ ಪತ್ನಿ ಜೊತೆ ಅನೈತಿಕ ಸಂಬಂಧ ಹೊಂದಿದ್ದ. ಹೀಗಾಗಿ ಮನನೊಂದು ರಾಮಕೃಷ್ಣನನ್ನ ಏರ್ಪೋರ್ಟ್ ನಲ್ಲಿ ಕೊಚ್ಚಿ ರಮೇಶ ಕೊಲೆ ಮಾಡಿದ್ದಾನೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿ ಇರುವ ಕೆಂಪೇಗೌಡ ಏರ್ಪೋರ್ಟ್ ನಲ್ಲಿ ಘಟನೆ ಜರುಗಿದೆ.