ಬೆಂಗಳೂರು:- ಸಿದ್ದಾರ್ಥ ಟ್ರಸ್ಟ್ ವಿವಾದದ ಬಗ್ಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ಅದನ್ನು ಕಾನೂನು ಪ್ರಕಾರ ಮಾಡಿದ್ದೇವೆ. ಕ್ಯಾಬಿನೆಟ್ ನಲ್ಲಿ ನಿರ್ಧಾರ ಮಾಡಿ ಕೊಟ್ಟಿದ್ದು, ಅದನ್ನು ಇಶ್ಯೂ ಮಾಡುವ ಅವಶ್ಯಕತೆ ಇಲ್ಲ..ಇವರ ಕಾಲದಲ್ಲಿ ನೂರಾರು ಎಕರೆ ಕೊಟ್ಟಿದ್ದಾರಲ್ಲ. ಆರ್ ಎಸ್ ಎಸ್ ಗೆ ಇವರು ಭೂಮಿ ಕೊಟ್ಟಿದ್ದಾರಲ್ಲ. ಚಾಣಕ್ಯ ಯೂನಿವರ್ಸಿಟಿಗೆ ಕೊಟ್ಟಿದ್ದಾರಲ್ಲ. ನಾವು ಕಾನೂನು ಪ್ರಕಾತವೇ ಭೂಮಿ ಕೊಟ್ಟಿದ್ದೇವೆ. ಖರ್ಗೆ ಟ್ರಸ್ಟ್ ಗೆ ಭೂಮಿ ಕೊಟ್ಟ ವಿಚಾರಕ್ಕೆ ಸಿಎಂ ಸಮರ್ಥನೆ ಮಾಡಿದ್ದಾರೆ.
ಜೈಲಿನಲ್ಲಿ ರಾಜಾತಿಥ್ಯ: ದರ್ಶನ್ ಬಳ್ಳಾರಿಗೆ ಶಿಫ್ಟ್ ಆದ್ರೂ ಬದಲಾಗದ ಖೈದಿ ಸಂಖ್ಯೆ-6106!
16th ಪೈನಾನ್ಸ್ ಕಮಿಷನ್ ಜೊತೆ ಮೀಟಿಂಗ್ ವಿಚಾರವಾಗಿ ಮಾತನಾಡಿ, ನಾಳೆ 16th ಫೈನಾನ್ಸ್ ಕಮಿಷನ್ ಅಧಿಕಾರಿಗಳ ಜೊತೆ ಸಭೆ ಇದೆ. ರಾಜ್ಯಕ್ಕೆ ಆಗಿರುವ ಅನ್ಯಾಯದ ಬಗ್ಗೆ ಗಮನಕ್ಕೆ ತರುತ್ತೇವೆ. 15ನೇ ಹಣಕಾಸಿನ ಆಯೋಗದಲ್ಲಿ ಆಗಿರುವ ಅನ್ಯಾಯ ಗಮನಕ್ಕೆ ತುರುತ್ತೇವೆ. ಕರ್ನಾಟಕ most suffered state ಅಂತ ಗಮನಕ್ಕೆ ತರ್ತೇವೆ. ಹಂಚಿಕೆಯಲ್ಲಿ ಹೆಚ್ಚು ಕೋಡುವಂತೆ ಕೇಳುತ್ತೇವೆ. ೪೧% ಕೊಟ್ಟಿದ್ದಾರೆ, ನಾವು ೫೦% ಕೋಡಬೇಕು ಅಂತ ಕೇಳುತ್ತೇವೆ. ಸೆಸ್ ಹಣವನ್ನು ಕೂಡ ಹಂಚಿಕೆ ಮಾಡುವಂತೆ ಕೇಳುತ್ತೇವೆ. ಹಣಕಾಸಿನ ಅಯೋಗ ಸಂವಿಧಾನದ ಬಾಡಿ ಅವರ ಮೇಲೆ ವಿಶ್ವಾಸ ಇಡಲೇಬೇಕು ಎಂದರು.