ಬೆಂಗಳೂರು:- – ದರ್ಶನ್ ರಾಜಾತೀಥ್ಯ ಪ್ರಕರಣ ಸಂಬಂಧ ಇಂದೂ ಕೂಡ ತನಿಖೆ ಮುಂದುವರೆದಿತ್ತು. ಎರಡು ಎಫ್ ಐ ಆರ್ ನಲ್ಲಿ ಆರೋಪಿಯಾಗಿರುವ ನಟನನ್ನ ವಿಚಾರಣೆ ನಡೆಸಿದಾಗ ವಿಡಿಯೋ , ಫೋಟೋಗಳ ಬಗ್ಗೆ ಪ್ರತ್ಯೇಕವಾಗಿ ಹೇಳಿಕೆ ನೀಡಿದ್ದಾರೆ. ಅದರ ಡೀಟೇಲ್ಸ್ ಇಲ್ಲಿದೆ .
ಕಳ್ಳತನ ಆರೋಪ: ವ್ಯಕ್ತಿಯ ಪ್ರೈವೇಟ್ ಜಾಗಕ್ಕೆ ಖಾರದ ತುರುಕಿದ ದುಷ್ಕರ್ಮಿಗಳು!
ಬಳ್ಳಾರಿ ,ಶಿವಮೊಗ್ಗ , ಮೈಸೂರು ಸೇರಿದಂತೆ ಒಟ್ಟು ಒಂಬತ್ತು ಪ್ರತ್ಯೇಕ ಜೈಲುಗಳಿಗೆ ಆರೋಪಿಗಳನ್ನ ಶಿಪ್ಟ್ ಮಾಡಲು ನ್ಯಾಯಾಲಯ ಆದೇಶ ನೀಡಿದೆ . ಅಂದ್ರೆ ಹಂತಕ ಪಡೆ ನಿಜಕ್ಕೂ ಛಿದ್ರವಾಗಿದೆ. ಅದರಲ್ಲೂ ಬಳ್ಳಾರಿಯ ರಗಡ್ ವಾತಾವರಣ ಚ್ಯಾಲೆಂಜಿಂಗ್ ಸ್ಟಾರ್ ಗೆ ಚ್ಯಾಲೆಂಜ್ ಆಗಬಹುದು
ಜೈಲು ಎಂಥಹ ಸ್ಟಾರ್ ಗಳನ್ನೂ ಹೈರಾಣವಾಗಿಸಿಬಿಡುತ್ತೆ . ಹತ್ಯೆ ಪ್ರಕರಣದಲ್ಲಿ ಹೆಚ್ಚು ಕಮ್ಮಿ ಮೂರು ತಿಂಗಳ ಜೈಲುವಾಸದಿಂದ ನಿಜಕ್ಕೂ ದರ್ಶನ್ ಬೇಸತ್ತಿದ್ದಾರೆ. ಅದರ ನಡುವೆ ಸದ್ಯ ನಡೆದ ಮತ್ತೆರಡು ಎಫ್ ಐ ಆರ್ ಗಳು ನಟನಿಗೆ ಮತ್ತಷ್ಟು ತಲೆನೋವು ತಂದಿದೆ. ಯಸ್ ಇಂದು ಎರಡೂ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಂದ ವಿಚಾರಣೆ ಮುಂದುವರೆಸಲಾಗಿತ್ತು.
ಮೊದಲು ವಿಡಿಯೋ ಕಾಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿರುವ ದರ್ಶನ್ ಇದರಲ್ಲಿ ತನ್ನದೇನು ತಪ್ಪಿಲ್ಲ ಎಂದಿದ್ದಾರೆ. ತಾನು ಸುಮ್ಮನೆ ಕೂತಿದ್ದೆ ಆದ್ರೆ ಯಾರೋ ಒಬ್ಬರು ಮೊಬೈಲ್ ಹಿಡಿದು ಬಂದು ದರ್ಶನ್ ಸರ್ ಇದಾರೆ ನೋಡು ಎಂದು ವಾಟ್ಸಪ್ ವಿಡೀಯೋ ಕಾಲ್ ಮಾಡಿ ಏಕಾಏಕಿ ಮುಂದೆ ಹಿಡಿದ . ಈ ಹಿನ್ನಲೆ ತಾನು ಯಾರೋ ಅಭಿಮಾನಿ ಇರಬಹುದೆಂದು ಹಾಯ್ ಎಂದು ಊಟ ಆಯ್ತಾ ಎಂದು ಕೇಳಿದೆ ಅಷ್ಟೆ. ಅವರಿಗೆಲ್ಲ ಬೈಯೋದಕ್ಕೆ ಸಾಧ್ಯವಾಗದ ಕಾರಣ ಸೌಜನ್ಯಕ್ಕೆಂದು ರಿಪ್ಲೇ ಕೊಟ್ಟೆ ಎಂದಿದ್ದಾರೆ. ಆದರೆ ಆ ವ್ಯಕ್ತಿ ಯಾರು ಎಂಬುದು ನನಗೆ ನಿಜಕ್ಕೂ ಗೊತ್ತಿಲ್ಲ ಎಂದಿದ್ದಾರೆ. ನಂತರ ಎರಡನೇ ಪ್ರಕರಣ ಸಂಬಂಧ ಹೇಳಿಕೆಯನ್ನೂ ಅವರಿಂದ ಪಡೆಯಲಾಗಿದೆ. ಪ್ರತಿ ದಿನ ನಾನು ಹುಡುಗರು ಕ್ರಿಕೇಟ್ ಆಡೋದನ್ನ ನೋಡಲು ಹೋಗ್ತಿದ್ದೆ. ಅಂದು ಕೂಡ ಒಬ್ಬಂಟಿಯಾಗಿಯೇ ಸಿಗರೇಟ್ ಸೇದುತ್ತಾ ಕ್ರಿಕೇಟ್ ನೋಡುತ್ತಿದ್ದೆ . ಅಷ್ಟರಲ್ಲಿ ನಾಗ ಹಾಗು ಆತನ ಟೀಂ ಬಂದ ಹಿನ್ನಲೆ ಕ್ಯಾಷುವಲ್ ಆಗಿ ಕುಳಿತು ಮಾತನಾಡಿದಿನೇ ಹೊರತು ಆತನನ್ನ ಮಾತನಾಡಿಸಲೇಬೇಕೆಂಬ ಉದ್ದೇಶ ಇರಲಿಲ್ಲ ಎಂದಿದ್ದಾರೆ. ಸದ್ಯ ಆರೋಪಿ ನಟನ ಹೇಳಿಕೆ ಪಡೆದುಕೊಂಡಿದರುವ ಪೊಲೀಸರು ದರ್ಶನ್ ಅವರ ಪಾತ್ರದ ಬಗ್ಗೆ ಸ್ಪಾಟ್ ಇನ್ವೆಷ್ಟಿಗೇಷನ್ ಕೂಡ ಮುಗಿಸಿದ್ದಾರೆ.
ಒಟ್ಟಾರೆ ದರ್ಶನ್ ಬೇರೆ ಜೈಲಿಗೆ ಶಿಫ್ಟ್ ಆಗುತ್ತಿರುವ ಹಿನ್ನಲೆ ಪೊಲೀಸರು ಪ್ರೊಸೀಝರ್ ಗಳನ್ನ ಮುಗಿಸಿದ್ದಾರೆ. ಉಳಿದ ಆರೋಪಿಗಳ ಹೇಳಿಕೆಗಳನ್ನ ಮುಂದಿನ ಹಂತದಲ್ಲಿ ಪಡೆಯಲಿದ್ದಾರೆ. ಅಕಸ್ಮಾತ್ ತನಿಖೆಗೆ ಅಗತ್ಯವಿದ್ದರೆ ಬಾಡಿ ವಾರೆಂಟ್ ಮೂಲಕ ಮತ್ತೆ ದರ್ಶನ್ ಅವರನ್ನ ವಶಕ್ಕೆ ಪಡೆಯುವ ಸಾಧ್ಯತೆ ಇದೆ