ವಿಜಯಪುರ: ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ಪಟ್ಟಣದ ಐತಿಹಾಸಿಕ ಮೂಲನಂದೀಶ್ವರ ಜಾತ್ರಾಮ ಹೋತ್ಸವದ ನಿಮಿತ್ತ ಕುಸ್ತಿ ಪಂದ್ಯಾವಳಿ ಆಯೋಜನೆ ಮಾಡಲಾಗಿತ್ತು. ರಾಜ್ಯ ಹೊರ ರಾಜ್ಯದಿಂದ ಆಗಮಿಸಿದ ಪೈಲ್ವಾನರು ಅಖಾಡದಲ್ಲಿ ನಾನಾ ನೀನಾ ಎನ್ನುತ್ತ ಕಾದಾಡುತ್ತಿರುವ ದೃಶ್ಯ ಮೈ ನವಿರೇಳಿಸುವಂತಿತ್ತು.
ಪಂದ್ಯಾವಳಿ ವೀಕ್ಷಿಸಲು ಆಗಮಿಸಿದ ಕ್ರೀಡಾ ಪ್ರೇಮಿಗಳು ಉಸಿರು ಬಿಗಿ ಹಿಡಿದು, ಕಣ್ಣು ಮಿಟುಕಿಸದೇ ಜಟ್ಟಿಗಳ ಕಾಳಗವನ್ನು ನೋಡಿ ಕೇಕೇ ಹಾಕಿ ಸಿಳ್ಳೆ ಹೊಡೆದು ಸಂಭ್ರಮಿಸಿದರು. ಕುಸ್ತಿಯಲ್ಲಿ ವಿಜೇಯತರಾದ ಪೈಲವಾನರಿಗೆ ಜಾತ್ರೆ ಉತ್ಸವ ಸಮಿತಿಯ ಮುಖಂಡರು ನಗದು ಬಹುಮಾನ ನೀಡಿದರು.