ಕಲಬುರಗಿ: ರೇಣುಕಾಸ್ವಾಮಿ ಕೊಲೆ ಕೇಸ್ ಆರೋಪಿ ನಟ ದರ್ಶನ್ ಅತ್ತ ಬಳ್ಳಾರಿ ಜೈಲಿಗೆ ಶಿಫ್ಟ್ ಆಗ್ತಿದ್ರೆ ದರ್ಶನ್ ಮ್ಯಾನೇಜರ್ ನಾಗರಾಜ ಇತ್ತ ಕಲಬುರಗಿ ಕೇಂದ್ರ ಕಾರಾಗೃಹಕ್ಕೆ ಶಿಷ್ಟ್ ಆಗ್ತಿದ್ದಾನೆ.
ಕೇಸಲ್ಲಿ A11 ಆರೋಪಿಯಾಗಿರುವ ದರ್ಶನ್ ಮ್ಯಾನೇಜರ್ ನನ್ನ ಇಂದು ಮಧ್ಯಾಹ್ನ ಅಥವಾ ರಾತ್ರಿ ಕಲಬುರಗಿ ಸೆಂಟ್ರಲ್ ಜೈಲಿಗೆ ತರುವ ಸಾಧ್ಯತೆ ಇದೆ. ಒಟ್ಟು 629 ಕೈದಿಗಳಿರುವ ಜೈಲಲ್ಲಿ ನಾಗರಾಜ್ ಗೂ ಸಹ ಸಾಮಾನ್ಯ ಕೈದಿಗಳ ಸೆಲ್ಲಲ್ಲಿ ಇರಿಸಲು ವ್ಯವಸ್ಥೆ ಮಾಡಲಾಗಿದೆ ಅಂತ ಜೈಲಾಧಿಕಾರಿಗಳ ಮೂಲಗಳು ತಿಳಿಸಿವೆ..