ಹುಬ್ಬಳ್ಳಿ: ನಗರದ ವಿವಾದಾತ್ಮಕ ಈದ್ಲಾ ಮೈದಾನದಲ್ಲಿ ಗಣೇಶಮೂರ್ತಿ ಪ್ರತಿಷ್ಠಾಪನೆ, ನೇಹಾ- ಅಂಜಲಿ ಕೊಲೆ ಪ್ರಕರಣದ ಬೆಳವಣಿಗೆ, ಮೇಲೇತುವೆ ಕಾಮಗಾರಿಗೆ ಇದ್ದಾ ಕಾಂಪೌಂಡ್ ಭಾಗಶಃ ತೆರವು, ಸಂಚಾರ ಹಾಗೂ ಕಾನೂನು ಸುವ್ಯವಸ್ಥೆ ಕುರಿತು ಚರ್ಚೆ ಹಿನ್ನೆಲೆಯಲ್ಲಿ ಕಾನೂನು ಮತ್ತು ಸುವ್ಯಸ್ಥೆ ವಿಭಾಗದ ಎಡಿಜಿಪಿ ಆರ್. ಹಿತೇಂದ್ರ ಮತ್ತು ಸಂಚಾರ ಮತ್ತು ರಸ್ತೆ ಸುರಕ್ಷತಾ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಅವರು ಬುಧವಾರ ಹುಬ್ಬಳ್ಳಿಯ ನವನಗರದ ಪೊಲೀಸ್ ಕಮೀಷನರ್ ಕಚೇರಿಯಲ್ಲಿ ಸಭೆ ಮೇಲೆ ಸಭೆ ನಡೆಸಿದರು.
Tesla: ಇದೆಂಥಾ ಆಫರ್! ದಿನಕ್ಕೆ 28 ಸಾವಿರ ರೂಪಾಯಿ ಸಂಬಳ ನೀಡುತ್ತೆ ಈ ಕಂಪನಿ..! ಮಿಸ್ ಮಾಡ್ಬೇಡಿ
ನವನಗರದ ಪೊಲೀಸ್ ಕಮಿಷನರ್ ಕಚೇರಿಯ ಸಭಾಂಗಣದಲ್ಲಿ ಅಲೋಕ್ ಕುಮಾರ್ ಅವರು ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದುಸಂಜೆ ಆರ್. ಹಿತೇಂದ್ರ ಅವರು ಪೊಲೀಸ್ ಅಧಿಕಾರಿಗಳ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳ ಜೊತೆ ಮುಂಜಾಗ್ರತಾ ಸಭೆ ನಡೆಸಲಿದ್ದಾರೆ. ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಟಾಪನೆಗೆ ಅವಕಾಶ ಕೊಡ ಬಾರದು ಎಂದು ಕಳೆದ ವರ್ಷ ಹುಬ್ಬಳ್ಳಿ ಅಂಜುಮನ್ ಸಂಸ್ಥೆ, ಎಐಎಂಐಎಂ, ಎಸ್ಡಿಪಿಐ ಸೇರಿದಂತೆ 20ಕ್ಕೂ ಹೆಚ್ಚು ಸಂಘಟನೆಗಳು ಪಾಲಿಕೆಗೆ ಮನವಿ ಸಲ್ಲಿಸಿದ್ದವು. ನಾಲ್ಕು ಸಮಿತಿಗಳು ಅವಕಾಶ ಕೋರಿ ಮನವಿ ಸಲ್ಲಿಸಿದ್ದವು.
‘ವಿರೋಧ ಪಕ್ಷದ ಜೊತೆ ಚರ್ಚಿಸದೆ ಬಿಜೆಪಿ ಹೆಚ್ಚಿನ ವಿಷಯಪಟ್ಟಿ ಸಿದ್ಧಪಡಿಸಿ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಠರಾವು ಪಾಸು ಮಾಡಿದೆ’ ಎಂದು ಪಾಲಿಕೆ ವಿರೋಧ ಪಕ್ಷದ (ಕಾಂಗ್ರೆಸ್) ನಾಯಕರು ಆಕ್ಷೇಪ ವ್ಯಕ್ತಪಡಿಸಿ ಹೈಕೋರ್ಟ್ ಮೊರೆ ಹೋಗಿದ್ದರು. ಹಿಂದೂ ಸಂಘಟನೆ ಹಾಗೂ ಬಿಜೆಪಿ ಕಾರ್ಯಕರ್ತರು ಪಾಲಿಕೆ ಆಯುಕ್ತರ ಕಚೇರಿ ಎದುರು ಎರಡು ದಿನ ಅಹೋರಾತ್ರಿ ಪ್ರತಿಭಟನೆ ನಡೆಸಿದ್ದರು. ಪರ-ವಿರೋಧದ ಚರ್ಚೆ ನಡುವೆಯೂ, ಎರಡು ದಿನದ ಉತ್ಸವಕ್ಕೆ ಅನುಮತಿ ನೀಡಲಾಗಿತ್ತು. ನಂತರ ದಿನಗಳ ಉತ್ಸವಕ್ಕೆ ಅನುಮತಿ ನೀಡಲಾಗಿತ್ತು. ನಂತರ ಪೊಲೀಸ್
ಸರ್ಪಗಾವಲಿನಲ್ಲಿ ಉತ್ಸವ ನಡೆದಿತ್ತು.
‘ವಿದ್ಯಾರ್ಥಿನಿ ನೇಹಾ ಹಿರೇಮಠ ಮತ್ತು ಅಂಜಲಿ ಅಂಬಿಗೇರ ಕೊಲೆ ಪ್ರಕರಣ ರಾಜ್ಯ, ಅಂತರರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗಿತ್ತು. ಲವ್ ಜಿಹಾದ್ ಕೊಲೆಗಳು ಕಾನೂನು ಕೆಲವರು ಪ್ರಶ್ನೆ ಹಿನ್ನೆಲೆಯಲ್ಲಿ ನಡೆದ ಆರೋಪಿಸಿ, ಎಂದು ಆರೊ ಸುವ್ಯವಸ್ಥೆ ಬಗ್ಗೆ ಎತ್ತಿದ್ದರು. ಅತಿಸೂಕ್ಷ್ಮ ಪ್ರದೇಶದ ಹಣೆಪಟ್ಟೆ ಹುಬ್ಬಳ್ಳಿಗೆ ಅಂಟಿಕೊಂಡಿದೆ ಈ ವಿಷಯ ಕುರಿತು ಎಡಿಜಿಪಿ ಹಿತೇಂದ್ರ ಅವರು ಪೊಲೀಸ್ ಅಧಿಕಾರಿಗಳ ಜೊತೆ ಚರ್ಚಿಸಿ, ಗಣೇಶ ಹಬ್ಬದ ಮುಂಜಾಗ್ರತೆಗೆ ಹಾಗೂ ಕಾನೂನು ಸುವ್ಯವಸ್ಥೆಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಲಹೆ ಸೂಚನೆ ನೀಡುವ ಸಾಧ್ಯತೆಯಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈದ್ಧಾ ಮೈದಾನಕ್ಕೆ ಭೇಟಿ ಸಾಧ್ಯತೆ
ಕಾನೂನು ಸುವ್ಯವಸ್ಥೆ ಹಾಗೂ ಸಂಚಾರ ವಿಭಾಗದ ಇಬ್ಬರೂ ಎಡಿಜಿಪಿಗಳು ನಗರಕ್ಕೆ ಭೇಟಿ ನೀಡಿ, ಹಬ್ಬದ ಮುಂಜಾಗ್ರತೆ, ಸಂಚಾರ ಸುರಕ್ಷತೆ ಪರಿಶೀಲನೆ ನಡೆಸಲಿದ್ದಾರೆ ಇದರ ಜೊತೆಗೆ ಸಂಜೆ ಈದ್ಗಾ ಮೈದಾನಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ. ಮೇಲೇತುವೆ ಕಾಮಗಾರಿಗೆ ಈದ್ಗಾ ಮೈದಾನದ ಕಾಂಪೌಂಡ್ ಭಾಗಶಃ ತೆರವು ಆಗುವ ಕುರಿತು ಚರ್ಚೆ ನಡೆಯುವ ಸಾಧ್ಯತೆಯಿದ್ದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಪಾಲಿಕೆ, ಲೋಕೋಪಯೋಗಿ ಇಲಾಖೆಗಳ ಅಧಿಕಾರಿಗಳನ್ನು ಸಹ ಸಭೆಗೆ ಆಹ್ವಾನಿಸಲಾಗಿದೆ. ಎಡಿಜಿಪಿ ಹಿತೇಂದ್ರ ಅವರು ಈದ್ಧಾ ಮೈದಾನಕ್ಕೆ ಭೇಟಿ ನೀಡುವ ವೇಳೆ ಇರಲಿದ್ದಾರೆ.