ಬಾಗಲಕೋಟೆ: ಜಾತ್ರೆಗೆ ಹಾಗೂ ಉತ್ಸವಗಳಿಗೆ ಜಾತಿ ಇಲ್ಲ,ಎಲ್ಲರೂ ಒಂದಾಗಿ ಭಾಗವಹಿಸಿದರೆ ಸೌಹಾರ್ದತೆ ಹಾಗೂ ಬಾಂಧವ್ಯ ಬಲಗೊಳ್ಳುತ್ತದೆ ಎಂದು ಜಮಖಂಡಿಯ ಮುತ್ತಿನಕಂತಿ ಮಠದ ಶಿವಲಿಂಗ ಶಿವಾಚಾರ್ಯರು ಹೇಳಿದರು,
ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ನಾವಲಗಿ ಗ್ರಾಮದ ನಾವಲಗಿ – ಕಲಹಳ್ಳಿ ಸೀಮೆಯಲ್ಲಿರುವ ಶ್ರೀ ಕರೆವ್ವ ದೇವಿಯ ಜಾತ್ರಾ ಮಹೋತ್ಸವದ ಸಮಾರಂಭದ ಪ್ರಯುಕ್ತ ವೆಂಕಟೇಶ್ವರ ಏತ ನಿರಾವರಿಗೆ ಬಾಗಿನ ಅರ್ಪಿಸುವ ಮೂಲಕ ಜಾತ್ರೆಗೆ ಚಾಲನೆ ನೀಡಿದರು,
ಈ ಭಾಗದ ರೈತರು ಸೇರಿಕೊಂಡು ಪ್ರತಿ ವರ್ಷ ದೇವಿಯ ಜಾತ್ರೆಯನ್ನು ಆಚರಿಸಿಕೊಂಡು ಬರುತ್ತಿರುವುದು ಸಂತಸದ ಸಂಗತಿ,ಇಂತಹ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಮೂಲಕ ಧರ್ಮದ ಹಾದಿಯಲ್ಲಿ ನಡೆದರೆ ಮಾತ್ರ ಮುಕ್ತಿ ಸಿಗುತ್ತದೆ ಎಂದರು,
ತೇರದಾಳದ ಗಂಗಾಧರ ಶ್ರೀಗಳು ಮಾತನಾಡಿ ಈ ಭಾಗದ ರೈತರಿಗೆ ವೆಂಕಟೇಶ್ವರ ಏತ ನೀರಾವರಿಯಿಂದ ಬಹಳಷ್ಟು ಅನುಕೂಲವಾಗಿದೆ,ನೀರು ಅಮೃತಕ್ಕೆ ಸಮಾನ ಆದ್ದರಿಂದ ನೀರನ್ನು ಅನಾವಶ್ಯಕವಾಗಿ ಪೋಲು ಮಾಡದೆ ಉಪಯೋಗಮಾಡಿಕೊಳ್ಳಿ ಎಂದರು,
ಇದೇ ಸಂದರ್ಭದಲ್ಲಿ ರೈತ ಸಂಘದ ತಾಲೂಕಾಧ್ಯಕ್ಷ ಹಣಮಂತ ಮಗದುಮ್, ದಾನಪ್ಪ ಅಸಂಗಿ, ಮಲ್ಲಪ್ಪ ಮಗದುಮ್, ಈರಪ್ಪ ವಾಲಿ, ಮುತ್ತಪ್ಪ ಆಂಗಡಿ,,ಗಿರೀಶ್ ಪಟ್ಟಣಶೆಟ್ಟಿ,ಶಿವಪ್ಪ ವಾಲಿ,ಬಸವರಾಜ ಗಣಿ,ಗಿರಮಲ್ಲ ಮಗದುಮ್, ಈರಪ್ಪ ಮಗದುಮ್, ದುಂಡಪ್ಪ ಕಾಂತಿ, ಚನ್ನಬಸು ಕಂಚು, ಹಣಮಂತ ಕಂಚು,ಬುಜಬಲಿ ಶಿರಹಟ್ಟಿ,ಧನಪಾಲ್ ಶಿರಹಟ್ಟಿ, ಶಿವಪ್ಪ ಮಗದುಮ್,ಅಕ್ಷಯ ಮೇತ್ರಿ ಶಿವಪ್ಪ ಮೇತ್ರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಪ್ರಕಾಶ ಕುಂಬಾರ
ಬಾಗಲಕೋಟೆ