ಕೋಲಾರ: ಮುಡಾ ಹಗರಣದಲ್ಲಿ ತಪ್ಪು ಯಾರೇ ಮಾಡಿದ್ರು ಶಿಕ್ಷೆ ಆಗಲಿ.ಸಿದ್ದರಾಮಯ್ಯ ಕುಟುಂಬ ನೇರವಾಗಿ ಮೂಡಾ ಹಗರಣದಲ್ಲಿ ಭಾಗಿ ಕಾನೂನು ಸುವ್ಯವಸ್ಥೆ ರಾಜ್ಯದಲ್ಲಿ ಹಾಳಾಗಿದೆ ಎಂದು ಕೋಲಾರದಲ್ಲಿವಿಧಾನ ಪರಿಷತ್ ವಿರೋಧ ಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.
ಶಾಸಕ ಗಣಿಗ ರವಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದು ಅವರೆ ರೇಟ್ ಫಿಕ್ಸ್ ಮಾಡಿಕೊಳ್ಳುತ್ತಿದ್ದಾರೆ. ಮೊದಲಿಗೆ 50 ಕೋಟಿ ಎಂದಿದ್ರು, ಈಗ ನೂರು ಕೋಟಿ ಎನ್ನುತ್ತಿದ್ದಾರೆ. ಅವರೆ ಒಂದು ರೇಟ್ ಫಿಕ್ಸ್ ಮಾಡಿಕೊಳ್ಳುವ ದುಸ್ಥಿತಿ ಅವರಿಗೆ ಬಂದಿದೆ. ಪಾರಿವಾಳಗಳ ಜೊತೆ ಕರಿ ಕಾಗೆಗಳ ಅವಶ್ಯಕತೆ ಇಲ್ಲ. ನೇರವಾಗಿ ಸರ್ಕಾರ ಬಿದ್ರೆ ಮಾತ್ರ ಚುನಾವಣೆ. ನಾವು ಯಾವುದೆ ಆಪರೇಷನ್ ಮಾಡಲ್ಲ.
ಕಾಂಗ್ರೆಸ್ ನಲ್ಲಿ ಸಿಎಂ ಆಗುವವರ ಸಂಖ್ಯೆ ಒಂದು ಡಜನ್ ಇದೆ ಒಂದು ಡಜನ್ ನಲ್ಲಿ ಈಗಾಗಲೆ ಬಟ್ಟೆ ಹೊಲಿಸಿಕೊಂಡಿರುವವರು ಮನೆಗೆ ಸುಣ್ಣ ಬಣ್ಣ ಮಾಡಿಸುತ್ತಿದ್ದಾರೆ ಬದಲಾದ್ರೆ ನಾನೆ ನಾನೆ ಎನ್ನುತ್ತಿದ್ದಾರೆ.ವಿಪಕ್ಷ ಸ್ಥಾನದ ಕೆಲಸ ನಾವು ಸರಿಯಾಗಿಯೇ ಮಾಡುತ್ತಿದ್ದೇವೆ ಅವರು ಒಂದು ವರ್ಷದಲ್ಲಿ ಒಂದು ಟೇಪ್ ಸಹ ಕಟ್ ಮಾಡಿಲ್ಲ.
ನಟ ದರ್ಶನ್ ಗೆ ಜೈಲಿನಲ್ಲಿ ರಾಜಾತಿಥ್ಯ ವಿಚಾರ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಸುಲಿಗೆ ಹೆಚ್ಚಾಗಿದೆ ಎಲ್ಲಾ ಜೈಲ್ ಗಳು ರೆಸಾರ್ಟ್ ಗಳಾಗಿವೆ ಸೆರೆ ಮನೆಗಳೆಲ್ಲಾ ಅರಮನೆಗಳಾಗಿವೆ ಇನ್ನೂ ಜೈಲ್ ಅಧಿಕಾರಿ ಹೊಸ ಮನೆಯ ಜವಬ್ದಾರಿಯನ್ನ ಇವರೆ ಹೊತ್ತಿದ್ದಾರೆ ನಮಗೆ ಇರುವ ಮಾಹಿತಿ ಪ್ರಕಾರ ಅಲ್ಲಿರುವ ಹಿರಿಯ ಅಧಿಕಾರಿ ಹೊಸ ಮನೆ ಕಟ್ಟುತ್ತಿದ್ದಾರೆ ಅದಕ್ಕೆ ಬೇಕಾದ ಜಲ್ಲಿ, ಸಿಮೆಂಟ್ , ಮರಳು ಎಲ್ಲವೂ ಅವರೆ ಸಪ್ಲೆ ಮಾಡುತ್ತಿದ್ದಾರೆ ಮುಖ್ಯಮಂತ್ರಿಗಳು ಇದರ ಬಗ್ಗೆ ಗಮನ ಹರಿಸಬೇಕು.
ಗೃಹ ಸಚಿವರು ಕೂಡಲೆ ಆ ಜೈಲ್ ಅಧಿಕಾರಿಯನ್ನ ಅಮಾನತು ಮಾಡಬೇಕು ಈ ಸರ್ಕಾರ ತೇಪೆ ಹಚ್ವುವ ಕೆಲಸ ಮಾಡುತ್ತಿದೆ ಒಬ್ಬ ಅಧಿಕಾರಿ ಶುದ್ದವಾಗಿದ್ದಾಗ ಮಾತ್ರ ಎಲ್ಲವೂ ಸಾಧ್ಯ
ಯಾದಗಿರಿ ಪಿಎಸ್ ಐ ಆತ್ಮಹತ್ಯೆ ವಿಚಾರ 30 ಲಕ್ಷ ಕೊಟ್ರೆ ಮಾತ್ರ ಮುಂದುವರೆಯುತ್ತಾರೆ, ಇಲ್ಲವಾದಲ್ಲಿ ವರ್ಗಾವಣೆ ಮಾಡುತ್ತಾರೆ ಎಂಎಲ್ ಎ ವಿರುದ್ದ ಜಾತಿ ನಿಂದನೆ ಸೇರಿ ಹಲವು ಪ್ರಕರಣಗಳಿವೆ ಆದ್ರೆ ತಲೆ ಮರೆಸಿಕೊಂಡಿದ್ದಾರೆ ಎಂದು ಪೊಲೀಸರು ಹೇಳುತ್ತಾರೆ ಆದ್ರೆ ಇಂದು ಮನೆಯಲ್ಲೆ ಇದ್ದಾನೆ, ಪೋಲೀಸರೆ ಸೆಕ್ಯೂರಿಟಿ ಕೊಡುತ್ತಿದ್ದಾರೆ. ರಾಜ್ಯದಲ್ಲಿ ಇವರು ಸರ್ಕಾರ ನಡೆಸಲು ಯೋಗ್ಯರಲ್ಲ ಜನರು ಸಹ ಇದನ್ನೆ ಮಾತನಾಡುತ್ತಿದ್ದಾರೆ.
ಖರ್ಗೆ ಕುಟುಂಬದಿಂದಲೂ ಹಗರಣದ ಆರೋಪ ಮೂಡಾದಂತೆ ಅದೆ ರೀತಿ ಮತ್ತೊಂದು ಕುಟುಂಬದ ಹಗರಣ ಬಯಲಿಗೆ ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕಾ ಖರ್ಗೆ ಅವರದ್ದು ಹಗರಣ ಇದೆ ಬುದ್ದ ವಿಹಾರ ಎಂಬ ಟ್ರಸ್ಟ್ ಮೂಲಕ ಹಗರಣ ಖರ್ಗೆ ಕುಟುಂಬ ಗುಲ್ಬರ್ಗಾ ದಲ್ಲಿ 5 ಎಕರೆ ಜಾಗವನ್ನ ಟ್ರಸ್ಟ್ ಗೆ ಪಡೆದಿದ್ದಾರೆ ಸಚಿವರಾದವರು ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ.ಸ್ವಜನಪಕ್ಷಪಾತ, ಅಧಿಕಾರ ದುರುಪಯೋಗ ಇದ್ದು ತಕ್ಷಣ ಪ್ರಿಯಾಂಕ ಖರ್ಗೆ ವಿರುದ್ದ ಕ್ರಮ ಕೈಗೊಳ್ಳಬೇಕು. ಮಲ್ಲಿಕಾರ್ಜುನ ಖರ್ಗೆ, ಅಳಿಯ, ಮಗ ಸೇರಿ ಕೋಟ್ಯಾಂತರ ಅವ್ಯವಹಾರ.58 ಸಾವಿರ ಕೋಟಿ ಗ್ಯಾರಂಟಿಗಳಿಗಾಗಿ ಬಜೆಟ್ ನಲ್ಲಿ ಮೀಸಲಿಟ್ಟಿದ್ದೀರಿ ಆದ್ರೆ ಕೆಲವು ಅನುದಾನ ವಾಪಸ್ ಪಡೆಯುವ ಉದ್ದೇಶ ಏನು. ಸರ್ಕಾರ ಹಾಗೂ ಸಿದ್ದರಾಮಯ್ಯ ವಿರುದ್ದ ಕೋಲಾರದಲ್ಲಿ ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ ನಡೆಸಿದರು.