ಬೆಂಗಳೂರು:- ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಅರೆಸ್ಟ್ ಆದ ನಟ ದರ್ಶನ್ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ದರ್ಶನ್ ಹೇಗಿದ್ದಾರೆ ಅನ್ನೋ ಕುತೂಹಲ ಎಲ್ಲರಲ್ಲೂ ಇತ್ತು. ಆದರೆ ದರ್ಶನ್ ಕುಖ್ಯಾತ ರೌಡಿ ಶೀಟರ್ ಜೊತೆಗೆ ಜೈಲಿನಲ್ಲಿ ಆರಾಮಾಗಿ ಇದ್ದಾರೆ ಅನ್ನೋ ಒಂದು ಫೋಟೋ ಇದೀಗ ವೈರಲ್ ಆಗಿದೆ. ಇದರ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ ನೋಡಿ..
ತಿಂದ ತಕ್ಷಣ ನೀರು ಕುಡಿಯೋ ಅಭ್ಯಾಸ ಇದ್ರೆ ಇಂದೇ ಬಿಟ್ಟುಬಿಡಿ: ಅಪಾಯ ಗ್ಯಾರಂಟಿ!
ಹೌದು ಪರಪ್ಪನ ಅಗ್ರಹಾರ ಜೈಲಿನ ಸ್ಪೆಷಲ್ ಬ್ಯಾರಕ್ನಲ್ಲಿ ದರ್ಶನ್ ವಿಚಾರಣಾಧೀನ ಕೈದಿಯಾಗಿದ್ದಾರೆ. ಆದರೆ ಅವರು ಬ್ಯಾರಕ್ನಿಂದ ಹೊರಗೆ ಕುಳಿತು, ಸಹಚರರ ಜೊತೆ ಕಾಫಿ ಕುಡಿದು, ಸಿಗರೇಟ್ ಸೇದುತ್ತಿರುವ ಫೋಟೋ ಇದೀಗ ವೈರಲ್ ಆಗಿದೆ. ಇದರಿಂದ ಈ ಪ್ರಕರಣದ ತನಿಖೆ ಬಗ್ಗೆ ಸಾಕಷ್ಟು ಅನುಮಾನ ಮೂಡುವಂತಾಗಿದೆ. ರೇಣುಕಾ ಸ್ವಾಮಿ ಕೊಲೆ ಕೇಸ್ನ ತನಿಖೆ ಕೊನೆ ಹಂತಕ್ಕೆ ಬಂದಿದೆ. ಕೊಲೆ ಆರೋಪದಲ್ಲಿ ನಟ ದರ್ಶನ್ ಜೈಲು ಸೇರಿದ್ದು, ಅಲ್ಲಿ ಅವರಿಗೆ ರಾಜಾತಿಥ್ಯ ಸಿಗುತ್ತಿದೆಯಾ ಎಂಬ ಅನುಮಾನ ಮೂಡಿದೆ. ಯಾಕೆಂದರೆ, ಮೊನ್ನಯಷ್ಟೆ ಜೈಲಿನಲ್ಲಿ ರೈಡ್ ಮಾಡಿ ಇಡೀ ಜೈಲನ್ನೆಲ್ಲ ಜಾಲಾಡಿದರು ಯಾವ ಒಂದು ಮೊಬೈಲ್ ಆಗಲಿ, ಸಿಗರೇಟಿನ ತುಂಡಾಗಲಿ ಸಿಕ್ಕಿರಲಿಲ್ಲ,ಆದರೆ ದರ್ಶನ್ ಅವರ ಈ ಒಂದು ಫೋಟೋ ವೈರಲ್ ಆಗಿದೆ. ಅದರಲ್ಲಿ ಅವರು ಸಿಗರೇಟು ಸೇದುತ್ತಾ, ಕಾಫಿ ಕುಡಿಯುತ್ತಿರುವ ದೃಶ್ಯ ಸೆರೆಯಾಗಿದೆ. ವೈರಲ್ ಆಗಿರುವ ಫೋಟೋದಿಂದ ಅನೇಕ ಅನುಮಾನಗಳು ಮೂಡಲು ಆರಂಭಿಸಿವೆ. ರೇಣುಕಾಸ್ವಾಮಿ ಎಂಬ ವ್ಯಕ್ತಿಯನ್ನು ಕೊಲೆ ಮಾಡಿಸಿದ ಆರೋಪ ದರ್ಶನ್ ಮೇಲಿದೆ. ಹಾಗಾಗಿ ಅವರನ್ನು ಪರಪ್ಪನ ಅಗ್ರಹಾರದ ಸ್ಪೆಷಲ್ ಬ್ಯಾರಕ್ನಲ್ಲಿ ಇರಿಸಲಾಗಿದ್ದು, ಜೈಲಾಧಿಕಾರಿಗಳು ನಟ ದರ್ಶನ್ ಗೆ ಹೈಫೈ ಲೈಫ್ ಜೀವನ ಮಾಡಲು ಬೇಕಾದ ವ್ಯವಸ್ಥೆ ಮಾಡಿಕೊಟ್ಟಿದ್ದು ಆರಾಮಾಗಿ ಕುಖ್ಯಾತ ರೌಡಿ ಶೀಟರ್ ವಿಲ್ಸನ್ ಗಾರ್ಡನ್ ನಾಗನ ಜೊತೆ ದಿನ ಕಳೆಯುತ್ತಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಿಂದ ಲೀಕ್ ಆಗಿರುವ ಫೋಟೋದಲ್ಲಿ ದರ್ಶನ್ ಅವರು ಚೇರ್ ಮೇಲೆ ಆರಾಮಾಗಿ ಕುಳಿತಿದ್ದಾರೆ. ಒಂದು ಕೈಯಲ್ಲಿ ಸಿಗರೇಟ್ ಮತ್ತೊಂದು ಕೈಯಲ್ಲಿ ಟೀ ಕಪ್ ಕೂಡ ಇದೆ.
ಇನ್ನೂ ದರ್ಶನ್ ಅವರ ಪಕ್ಕದಲ್ಲಿ ದರ್ಶನ್ ಮ್ಯಾನೇಜರ್ ಸೇರಿದಂತೆ ರೌಡಿಶೀಟರ್ಗಳು ಕೂತಿದ್ದಾರೆ. A2 ದರ್ಶನ್ ಜೈಲಿನಲ್ಲಿರುವ ಫೋಟೋ ರಿವೀಲ್ ಆಗಿದ್ದು, ಇದೇ ಫೋಟೋದಲ್ಲಿ ವಿಲ್ಸನ್ ಗಾರ್ಡನ್ ನಾಗನ ಜೊತೆ ದರ್ಶನ್ ಕುಳಿತಿದ್ದಾನೆ. ವಿಲ್ಸನ್ ಗಾರ್ಡನ್ ನಾಗ, ಕುಳ್ಳ ಸೀನ, ನಾಗರಾಜ್ ಎಂಬುವವರು ದರ್ಶನ್ ಪಕ್ಕದಲ್ಲಿ ಕೂತು ಮಾತನಾಡುತ್ತಾ ಟೀ ಪಾರ್ಟಿ ಮಾಡಿದ್ದಾರೆ. ಕೊಲೆ ಪ್ರಕರಣದಲ್ಲಿ A2 ಆಗಿರುವ ದರ್ಶನ್ ಅವರ ಈ ಫೋಟೋ ರಿಲೀಸ್ ಆಗಿದ್ದು ರೋಚಕ ಕಥೆ. ವೇಲು ಎಂಬ ಕೈದಿ ಮೊಬೈಲ್ನಲ್ಲಿ ಈ ಫೋಟೋವನ್ನು ಸೆರೆ ಹಿಡಿದಿದ್ದಾನೆ ಎನ್ನಲಾಗಿದೆ. ಜೈಲಿನಲ್ಲಿರೋ ವೇಲು ತನ್ನ ಹೆಂಡತಿಗೆ ಈ ಕಳಿಸಿದ್ದು ಬಹಿರಂಗವಾಗಿದೆ ಎನ್ನಲಾಗಿದೆ.
ಒಟ್ಟಿನಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಡೆಯುತ್ತಿದ್ದ ಅಕ್ರಮ ಚಟುವಟಿಕೆಗಳ ಬಗ್ಗೆ ಸಾಕಷ್ಟು ಬಾರಿ ಸುದ್ದಿಯಾಗಿದೆ. ದುಡ್ಡಿದ್ರೆ ಜೈಲಿನಲ್ಲಿ ಐಷಾರಾಮಿ ಲೈಫ್ ಲೀಡ್ ಮಾಡಹುದು ಎನ್ನುವುದು ಇದೀಗ ದರ್ಶನ್ ಸೇರಿದಂತೆ ಕುಖ್ಯಾತ ರೌಡಿ ಶೀಟರ್ ಗಳ ವಿಚಾರದಲ್ಲೂ ಮತ್ತೊಮ್ಮೆ ಸಾಕ್ಷಿ ಸಮೇತವಾಗಿ ಸಾಬೀತಾಗಿದೆ. ಜೈಲಿನಲ್ಲಿ ನಡೆಯುತ್ತಿರುವ ಈ ಕಳ್ಳಾಟಕ್ಕೆ ಖುದ್ದು ಜೈಲಾಧಿಕಾರಿಗಳು, ಸಿಬ್ಬಂದಿಗಳೇ ಸಾಥ್ ನೀಡಿದ್ದು, ಅಂತವರ ವಿರುದ್ಧ ಕಠಿಣ ಕ್ರಮವಾಗುತ್ತ ಎಂದು ಕಾದು ನೋಡಬೇಕಿದೆ.