ಕಲಬುರಗಿ: ಕೃಷಿ, ಶಿಕ್ಷಣ ಸೇರಿ ವಿವಿಧ ಕ್ಷೇತ್ರಗಳಲ್ಲಿ ಕಲ್ಯಾಣ ಕರ್ನಾಟಕ ಅಭಿವೃದ್ಧಿಯತ್ತ ಸಾಗುತ್ತಿದೆ. ಆದರೆ, ಕೈಗಾರಿಕಾ ಕ್ಷೇತ್ರದಲ್ಲಿ ಹಿಂದೆ ಬಿದ್ದಿದ್ದು, ಇದಕ್ಕಾಗಿ ಕಲ್ಯಾಣಕ್ಕೆ ಪ್ರತ್ಯೇಕ ಕೈಗಾರಿಕಾ ನೀತಿ ಜಾರಿಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಸಣ್ಣ ಕೈಗಾರಿಕಾ ಸಚಿವ ಶರಣಬಸಪ್ಪ ದರ್ಶನಾಪುರ ತಿಳಿಸಿದರು. ಕಲ್ಯಾಣ ಕರ್ನಾಟಕ ಭಾಗಕ್ಕೆ ಪ್ರತ್ಯೇಕ ಕೈಗಾರಿಕಾ ನೀತಿ ಜಾರಿ ಅವಶ್ಯದ ಬಗ್ಗೆ ಈಗಾಗಲೇ ಮುಖ್ಯಮಂತ್ರಿಯವರ ಜತೆ ಮಾತನಾಡಿದ್ದೇನೆ.
ಪಡಿತರ ಚೀಟಿದಾರರ ಗಮನಕ್ಕೆ: ಈ ಕೆಲಸ ಮಾಡದಿದ್ರೆ ರದ್ದಾಗುತ್ತೆ ನಿಮ್ಮ ‘BPL’ ಕಾರ್ಡ್.!
ಕಲ್ಯಾಣ ಕರ್ನಾಟಕ ಭಾಗದ ಉದ್ಯಮಿಗಳೂ ಸಹ ಹೆಚ್ಚು ಹೂಡಿಕೆ ಮಾಡಬೇಕು. ಜತೆಗೆ ಬೇರೆ ರಾಜ್ಯಗಳ ಉದ್ಯಮಿಗಳೂ ಹೂಡಿಕೆಗೆ ಆಸಕ್ತಿ ತೋರಿಸಬೇಕು. ಎಲ್ಲರೂ ಬೆಂಗಳೂರು ಕಡೆ ಹೆಚ್ಚಿನ ಆಸಕ್ತಿ ತೋರಿಸುತ್ತಾರೆ. ಆದರೆ, ಅಲ್ಲಿ ಒಂದು ಎಕರೆ ಕೋಟಿಗಟ್ಟಲೆ ಬೆಲೆ ಬಾಳಿದರೆ ನಮ್ಮ ಭಾಗದಲ್ಲಿ 25ರಿಂದ 30 ಲಕ್ಷ ರೂ.ಯಲ್ಲಿ ಒಂದು ಎಕರೆ ಸಿಗಲಿದೆ. ಹೂಡಿಕೆಗೆ ಆಸಕ್ತಿ ತೋರಿದರೆ ಹೆಚ್ಚಿನ ಇನ್ಸೆಂಟಿವ್, ಕಡಿಮೆ ದರದಲ್ಲಿ ಭೂಮಿ ಸೇರಿ ಇತರೆ ಸೌಲಭ್ಯಗಳನ್ನು ಒದಗಿಸಲು ಕ್ರಮಕೈಗೊಳ್ಳಲಾಗುವುದು. ದೊಡ್ಡ ಕೈಗಾರಿಕೆಗಳನ್ನು ತರಲು ಆಸಕ್ತಿವಹಿಸಲಾವುದು ಎಂದರು.