ಪೀಣ್ಯ ದಾಸರಹಳ್ಳಿ: ವಿಧಾನಸಭಾ ಕ್ಶೇತ್ರದ ಚಿಕ್ಕಬಾಣಾವಾರ ಪುರಸಭೆ ವ್ಯಾಪ್ತಿಯ ಚಿಕ್ಕಬಾಣಾವಾರದ ಹೆಸರುಘಟ್ಟ ಮುಖ್ಯ ರಸ್ತೆಯಲ್ಲಿ ಹ್ಯೆಡ್ರಾಲಿಕ್ ತುಂಬಿಕೊಂಡು ಬಂದ ಟಿಪ್ಪರ್ ಲಾರಿಯೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದು, ಮೂವತ್ಯೆದು ಕಂಬಗಳು ನೆಲಕ್ಕೆ ಉರುಳಿ ಬಿದ್ದವು.
Central Govt: ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್: ಏಕೀಕೃತ ಪಿಂಚಣಿ ಯೋಜನೆ ಜಾರಿಗೆ ಕೇಂದ್ರ ಅಸ್ತು!
ಶುಕ್ರವಾರ ಮಧ್ಯರಾತ್ರಿ 1.30 ರ ಸಮಯದ ವೇಳೆಗೆ ಹೆಸರುಘಟ್ಟ ಮುಖ್ಯರಸ್ತೆಯ ಚಿಕ್ಕಬಾಣಾವಾರದಲ್ಲಿ ಹ್ಯೆಡ್ರಾಲಿಕ್ ತುಂಬಿಕೊಂಡು ಬರುತ್ತಿದ್ದ ಟಿಪ್ಪರ್ ಲಾರಿ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಯಿತು. ಅಪಘಾತದ ರಭಸಕ್ಕೆ ಅಕ್ಕಪಕ್ಕದ ಮೂವತ್ಯೆದು ಕಂಬಗಳು ಧರೆಗೆ ಉರುಳಿದವು. ತಡರಾತ್ರಿ ಆದ ಹಿನ್ನಲೆ ಯಾವುದೆ ಅಪಾಯಗಳು ಸಂಭವಿಸಲಿಲ್ಲ .ಸ್ಥಳೀಯರು ಹಾಗೂ ಚಿಕ್ಕಬಾಣಾವಾರ ಟ್ರಾಪಿಕ್ ಪೋಲಿಸರು ಈ ಮಾರ್ಗವಾಗಿ ಸಂಚರಿಸುತ್ತಿದ್ದ ಇತರೆ ವಾಹನಗಳ ಸವಾರರು ಈ ಬಗ್ಗೆ ಮಾಹಿತಿ ನೀಡಿ ಉಳಿದ ವಾಹನಗಳ ಸಂಚಾರ ತಡೆದರು. ಇದರಿಂದಾಗಿ ಅನಾಹುತ ತಪ್ಪಿತು. ಘಟನೆಯಿಂದಾಗಿ ಕೆಲವು ಕಾಲ ಹೆದ್ದಾರಿಯಲ್ಲಿ ವಾಹನಗಳ ಸಂಚಾರಕ್ಕೆ ತೊಂದರೆಯಾಯಿತು.
ಸಾರ್ವಜನಿಕರು ಬೆಸ್ಕಾಂ ಸಿಬ್ಬಂದಿಗೆ ಮಾಹಿತಿ ನೀಡಿದ್ದು, ಅವರು ಈ ಮಾರ್ಗದಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಿದರು. ಬೆಳಿಗ್ಗಿನ ಜಾವ ನಂತರ ಕಂಬಗಳ ದುರಸ್ತಿ ಕಾರ್ಯಾಚರಣೆಯು ನಡೆಯಿತು.
ಶಾಸಕರು ಸ್ಥಳಕ್ಕೆ ಭೇಟಿ: ಸ್ಥಳಿಯ ಶಾಸಕ ಎಸ್ ಮುನಿರಾಜು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿದರು .ಸ್ಥಳ ಪರಿಶೀಲನೆ ಮಾಡಿ ಮಾತನಾಡಿದ ಶಾಸಕ ಎಸ್ ಮುನಿರಾಜು ನೆನ್ನೆ ಮಧ್ಯರಾತ್ರಿ ಸುಮಾರು 1.30 ರ ಸಮಯದಲ್ಲಿ ಟಿಪ್ಪರ್ ಲಾರಿಯವರು ಬಂದು ಲ್ಯೆಟ್ ಕಂಬಕ್ಕೆ ಗುದ್ದಿ 35 ಕಂಬಗಳು ಮುರಿದುಬಿದ್ದಿದೆ .ಬೆಸ್ಕಾಂ ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದ್ದೇನೆ ಅವರು ಲ್ಯೆಟ್ ಕಂಬಗಳನ್ನು ಸರಿ ಪಡಿಸುವ ಕೆಲಸ ಮಾಡುತ್ತಾ ಇದ್ದಾರೆ ಎಂದು ತಿಳಿಸಿದರು.
ಈ ಸಂಧರ್ಭದಲ್ಲಿ ಬೆಸ್ಕಾಂ ಎಈಈ ಫಣೀಂದ್ರ , ಬೆಸ್ಕಾಂ ಅಧಿಕಾರಿಗಳು , ಸ್ಥಳೀಯ ಮುಖಂಡರಾದ ಬಿ.ಎಂ.ಚಿಕ್ಕಣ್ಣ, ಗೀರೀಶ್ , ನವೀನ್ ಕುಮಾರ್, ಮಹಮ್ಮದ್ ಸಲೀಂ ಅಹಮ್ಮದ್ ,ಮಹಮ್ಮದ್ ಸಿದ್ದಿಕ್ , ಭಾಗ್ಯಮ್ಮ ಇನ್ನೂ ಮುಂತಾದ ಮುಖಂಡರು ಉಪಸ್ಥಿತರಿದ್ದರು.