ಆಂಧ್ರಪ್ರದೇಶ:- ದೇಶದ ಶ್ರೀಮಂತ ದೇವಸ್ಥಾನವಾಗಿರುವ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ 25 ಕೆಜಿ ಚಿನ್ನಾಭರಣ ಧರಿಸಿ ಕುಟುಂಬವೊಂದು ಬಂದಿದ್ದು, ಭಕ್ತಾಧಿಗಳು ದಂಗಾಗಿದ್ದಾರೆ.
ಏಳು ಬೆಟ್ಟಗಳ ಒಡೆಯ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಬಂದ ಕುಟುಂಬವೊಂದು 25 ಕೆಜಿ ಚಿನ್ನಾಭರಣ ಹಾಕಿದ್ದು ಸಾಕಷ್ಟು ಸುದ್ದಿಯಾಗಿದೆ. ಆಂಧ್ರಪ್ರದೇಶದ ತಿರುಮಲ ದೇವಸ್ಥಾನಕ್ಕೆ 25 ಕೆಜಿ ಚಿನ್ನದ ಸರವನ್ನು ಧರಿಸಿ ಕುಟುಂಬವೊಂದು ಭೇಟಿ ನೀಡಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಈ ಕುಟುಂಬವನ್ನು ದೇವಸ್ಥಾನಕ್ಕೆ ಆಗಮಿಸಿದ ಜನ ನೋಡಿ ಅಚ್ಚರಿಗೊಂಡಿದ್ದಾರೆ.
ಚಿನ್ನ ಮತ್ತು ಚಿನ್ನದ ಆಭರಣಗಳನ್ನು ಧರಿಸುವುದು ಯಾವಾಗಲೂ ಭಾರತೀಯ ಸಂಸ್ಕೃತಿಯ ಪ್ರಮುಖ ಭಾಗವಾಗಿದೆ. ಜನರು ಅದನ್ನು ಪ್ರದರ್ಶಿಸಲು ಹೊಸ ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದಾರೆ. ಇದಕ್ಕೆ ವೈರಲ್ ಆಗಿರುವ ಈ ವಿಡಿಯೋವೇ ಸಾಕ್ಷಿ. ಕುಟುಂಬವೊಂದು ಕೊರಳಲಿನಲ್ಲಿ ಭಾರದ ಚಿನ್ನದ ಸರಗಳನ್ನು ಧರಿಸಿ ದೇವಸ್ಥಾನಕ್ಕೆ ಆಗಮಿಸಿದೆ. ಈ ವೇಳೆ ಸೆರೆಹಿಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಪುಣೆಯ ಕುಟುಂಬವೊಂದು ಆಗಸ್ಟ್ 22, 2024 ರಂದು ತಿರುಮಲದಲ್ಲಿರುವ ವೆಂಕಟೇಶ್ವರ ದೇವಸ್ಥಾನಕ್ಕೆ 25 ಕೆಜಿ ಚಿನ್ನದ ಸರವನ್ನು ಧರಿಸಿ ಭಗವಂತನ ದರ್ಶನ ಪಡೆದಿದೆ. ಟ್ವಿಟರ್ನಲ್ಲಿ ವೈರಲ್ ಆದ ವೀಡಿಯೊದಲ್ಲಿ ಇಬ್ಬರು ಪುರುಷರು, ಮಹಿಳೆ ಮತ್ತು ಮಗು ಹೊಳೆಯುವ ಚಿನ್ನದ ಆಭರಣಗಳನ್ನು ಕೊರಳಿಗೆ ಹಾಕಿರುವುದನ್ನು ಕಾಣಬಹುದು.
ಅದೇನೇ ಆಗಲಿ ಇವರ ಆಭರಣ ನೋಡಿ ಭಕ್ತಾದಿಗಳು ದಂಗಾಗಿದ್ದು ಸುಳ್ಳಲ್ಲ.