ಬೆಂಗಳೂರು:- ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಹಾಗು ರೇವಣ್ಣ ವಿರುದ್ದ ಹೊಳೇನರಸೀಪುರದಲ್ಲಿ ದಾಖಲಾದ ಲೈಂಗಿಕ ದೌರ್ಜನ್ಯದ ಕೇಸ್ ಜೆಡಿಎಸ್ ಪಾಳಯದಲ್ಲಷ್ಟೇ ಅಲ್ಲದೆ ದೊಡ್ಡಗೌಡರ ಕುಟುಂಬದಲ್ಲೂ ಅಲ್ಲೋಲ್ಲ ಕಲ್ಲೋಲ್ಲ ಸೃಷ್ಠಿ ಮಾಡಿತ್ತು. ಪ್ರಜ್ವಲ್ ರೇವಣ್ಣರದ್ದು ಎನ್ನಲಾದ ಅಶ್ಲೀಲ ಪೆನ್ ಡ್ರೈವ್ ಪ್ರಕರಣ ರಾಜ್ಯ ಹಾಗು ರಾಷ್ಟ್ರಮಟ್ಟದಲ್ಲಿ ಬಾರೀ ಸುದ್ದಿ ಮಾಡಿತ್ತು. ಇದೀಗ ಎಸೈಟಿ ಹೊ;ಏನರಸೀಪುರ ಕೇಸ್ ನಲ್ಲಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದೆ. ಈ ಕುರಿಟ ರಿಪೋರ್ಟ್ ಇಲ್ಲಿದೆ ನೋಡಿ..
ಜೆ ಎಸ್ ಡಬ್ಲ್ಯೂ ಜಿಂದಾಲ್ ಕಂಪನಿಗೆ ಭೂಮಿ ಪರಭಾರೆಗೆ ಅರವಿಂದ ಬೆಲ್ಲದ ವಿರೋಧ!
ಹಾಸನದ ಪ್ರಭಾವಿ ರಾಜಕೀಯ ಕುಟುಂಬದ ಅಪ್ಪ ಮಗನ ಮೇಲೆ ಹೊಳೇ ನರಸೀಪುರದಲ್ಲಿ ದಾಖಲಾಗಿದ್ದ ಲೈಂಗಿಕ ದೌರ್ಜನ್ಯ ಪ್ರಕರಣ ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿತ್ತು. ರೇವಣ್ಣ ಮನೆಯಲ್ಲಿ ಮನೆ ಕೆಲಸದಾಕೆ ಸಂತ್ರಸ್ಥ ಮಹಿಳೆಯನ್ನು ಹಣ್ಣುಕೊಡುವ ನೆಪದಲ್ಲಿ ಸೊಂಟ ಚಿವುಟಿ, ಸೀರೆ ಎಳೆದು ಮೈ ಕೈ ಮುಟ್ಟಿ ದೌರ್ಜನ್ಯ ಎಸಗಿದ್ದಾರೆ . ಅಷ್ಟೇ ಅಲ್ಲದೆ ಮಗ ಪ್ರಜ್ವಲ್ ನಿರಂತರವಾಗಿ ಅತ್ಯಚಾರ ಮಾಡಿದ್ದಾರೆಮದು ಸಂತ್ರಸ್ಥ ಮಹಿಳೆ ದೂರುದಾಖಲು ಮಾಡಿದ್ರು, ಹೊಳೆನರಸೀಪುರದ ಆರೋಪಿಗಳ ಮನೆಯಲ್ಲಿ ಸಂತ್ರಸ್ತೆಯನ್ನು ಬೆದರಿಸಿ ನಿರಂತರವಾಗಿ ಲೈಂಗಿಕ ಸಂಪರ್ಕ ಮಾಡಿ ಬೆಂಗಳೂರಿನ ಬಸವನಗುಡಿ ಮನೆಯಲ್ಲೂ ಅತ್ಯಾಚಾರ ನಡೆಸಿರೋದಾಗಿ ದೂರಿನಲ್ಲಿ ಉಲ್ಲೇಖ ಮಾಡಿದ್ರು.. ಪ್ರಕರಣಕ್ಕೆ ಸಂಬಂಧಿಸಿ ಸರ್ಕಾರ ಸೈಟಿ ರಚನೆ ಮಾಡಿತ್ತು. ಪ್ರಕರಣದ ಸಂಬಂಧ ಎ 1 ಆರೋಪಿ ಎಚ್ ಡಿ ರೇವಣ್ಣ ನನ್ನು ಎಸೈಟಿ ಅರೆಸ್ಟ ಮಾಡಿ ವಿಚಾರಣೇ ನೆಡೆಸಿತ್ತು. ದೂರು ದಾಖಲಾಗುವ ಹೊತ್ತಿಗೆ ಆರೋಪಿ ವಿದೇಶಕ್ಕೆ ಹಾರಿ ಹೋಗಿದ್ದ ಎ 2 ಆರೋಪಿ ಪ್ರಜ್ವಲ್ ರೇವಣ್ಣ 1 ತಿಂಗಳ ನಂತರ ಬೆಂಗಳೂರಿಗೆ ಬರುತ್ತಿದ್ದಂತೆ ಕೆಂಪೇಗೌಡ ವಿಮಾನ ನಿಲ್ದಾಣದಲ್ಲೇ ಎಸೈಟಿ ತಂಡ ಅರೆಸ್ಟ್ ಮಾಡಿ ಕೋರ್ಟ್ ಮುಂದೆ ತಂದು ನಿಲ್ಲಿಸಿತ್ತು.. ನಿರಂತರವಾಗಿ ಕಸ್ಟಡಿಗೆ ಪಡೆದುಕೊಂಡ ಎಸೈಟಿ ಪ್ರಜ್ವಲ್ ರೇವಣ್ಣನನ್ನು ವಿಚಾರಣೆ ಮಾಡಿತ್ತು.ಕಳೆದ ಮೂರು ತಿಂಗಳಿಂದ ಜೈಲಿನಲ್ಲಿರುವ ಪ್ರಜ್ವಲ್ ಹಾಗು ಜಾಮೀನಿಮ ಮೇಲೆ ಹೊರ ಬಂದಿರುವ ರೇವಣ್ಣ ವಿರುದ್ದ ಎಸೈಟಿ ಅಧಿಕಾರಿಗಳು ಇಂದು 42 ನೇ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ…
ಹೋಳೆನರಸೀಪುರ ಪ್ರಕರಣಕ್ಕೆ ಸಂಬಂಧಿಸಿ ಎಸೈಟಿ ಅಧಿಕಾರಿಗಳು 2144 ಪುಟಗಳ ಚಾರ್ಜ್ ಶೀಟ್ ಅನ್ನು ಇಂದು 42 ನೇ ಜನಪ್ರತಿನಿಧಿ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.. ಪ್ರಕರಣಕ್ಕೆ ಸಂಬಂಧಿಸಿ 123ಕ್ಕೂ ಹೆಚ್ಚು ಸಾಕ್ಷಗಳನ್ನು ಸಂಗ್ರಹ ಮಾಡಿರುವ ಐಟಿ ಅಧಿಕಾರಿಗಳು ತನಿಖೆಯ ಸಂಪೂರ್ಣ ವಿವರವನ್ನು ದಾಖಲು ಮಾಡಿದ್ದಾರೆ. ಸಂತ್ರಸ್ಥೆಯ ಹೇಳಿಕೆ ವಿಡಿಯೋಗಳ ಎಫ್ ಎಸ್ ಎಲ್ ವರದಿಗಳು ಮಹಜರ್ ವರದಿ, ಆರೋಪಿಗಳ ಹೇಳಿಕೆ ಸೇರಿದಂತೆ ಪ್ರತಿಯೊಂದು ಸಾಕ್ಷವನ್ನು ದಾಖಲಿಸಿ ಕೋರ್ಟ್ ಗೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ.
ಸದ್ಯಕ್ಕೆ ಒಂದು ಪ್ರಕರಣದಲ್ಲಿ ಮಾತ್ರ ಚಾರ್ಜ್ ಶೀಟ್ ಸಲ್ಲಿಕೆ ಯಾಗಿದ್ದು ಇನ್ನೂ ಎರಡು ಪ್ರಕರನಗಳ ಚಾರ್ಜ್ ಶೀಟ್ ಸಲ್ಲಿಸಬೇಕಿದೆ. ಆನಂತರವಷ್ಟೇ ಪ್ರಜ್ವಲ್ ಜಾಮೀನು ಮೊರೆ ಹೋಗೋ ಸಾಧ್ಯತೆ ಇದೆ. ಪ್ರಜ್ವಲ್ಗೆ ಬಿಡುಗಡೆ ಬಾಗ್ಯ ಸದ್ಯಕಂತೂ ದೂರದ ಮಾತಾಗಿದೆ.