ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ಬಹುತೇಕ ಮುಕ್ತಾಯವಾಗಿದ್ದು , ಚಾರ್ಜ್ ಶೀಟ್ ಸಲ್ಲಿಸಲು ಪೊಲೀಸರು ಸಿದ್ದತೆ ಮಾಡಿಕೊಂಡಿದ್ದಾರೆ. ಹೈದರಾಬಾದ್ ಇಂದ ಎರಡು ರಿಪೋರ್ಟ್ ಗಾಗಿ ಕಾಯ್ತಾಯಿರುವ ಕಾಮಾಕ್ಷಿಪಾಳ್ಯ ಪೋಲೀಸರು.ರಿಪೋರ್ಟ್ ಗಳನ್ನ ಖುದ್ದು ಪೊಲೀಸ್ ಕಮೀಷನರ್ ಪರಿಶೀಲನೆ ಮಾಡಲು ತಯಾರಿ ನಡೆಸಿದ್ದಾರೆ….
ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಪೊಲೀಸರ ತನಿಖೆಯ ಕೆಲಸ ಬಹುತೇಕ ಮುಕ್ತಾಯ ವಾಗಿದೆ ಇನ್ನೇನಿದ್ರು ಒಂದೇರೆಡು ಇಂಪಾರ್ಟೆಂಟ್ ರಿಪೋರ್ಟ್ ಗಳು ಮಾತ್ರ ಬರಬೇಕಿದೆ. ಅದು ಇನ್ನೊಂದೆರಡು ದಿನಗಳಲ್ಲಿ ಪೋಲಿಸರ ಕೈ ಸೇರಲಿದೆ. ಮುಂದೆ ಏನ್ ಮಾಡಬೇಕು ಅಂತ ತನಿಖಾ ತಂಡಗಳು ಕಾನೂನು ಹೋರಾಟಕ್ಕೆ ಮುಂದಾಗುತ್ತಿವೆ.
CRPC 164 ಅಡಿಯಲ್ಲಿ ನಟ ಚಿಕ್ಕಣ್ಣ ನ ಹೇಳಿಕೆಗಳನ್ನ ದಾಖಲಿಸಿಕೊಂಡಿದ್ದಪೋಲೀಸರು ,ಸಾಕ್ಷಿಗಳನ್ನಾಗಿಬಮಾಡಿಕೊಂಡಿದ್ದಾರೆ. ಅಲ್ಲದೆ ಪೋಲಿಸ್ ಠಾಣೆಯಲ್ಲಿ ನೀಡಿದ ಸ್ಟೇಟ್ ಮೆಂಟ್ ನ್ನ ಮತ್ತೊಮ್ಮೆ ನ್ಯಾಯಾಧೀಶರ ಮುಂದೆ ಹೇಳಿಕೆ ನೀಡಿಸಿದ್ರು ಆದಾದ ಬಳಿಕ ದರ್ಶನ್ ನ್ನ ಜೈಲಿನಲ್ಲಿ ಭೇಟಿ ಮಾಡಿದ್ದ ಚಿಕ್ಕಣ್ಣ ಗೆ ಮತ್ತೊಮ್ಮೆ ಸಂಕಷ್ಟ ಎದುರಾಗಿದು,ಕಾನೂನು ಮೂಲಕ ನೋಟೀಸ್ ನೀಡಲು ಪೋಲಿಸರು ಮುಂದಾಗಿದ್ದಾರೆ..
ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡೋವಾಗ ಡಿ ಗ್ಯಾಂಗ್ ನಡೆಸಿದ್ದ ಕ್ರೂರತೆ ಖಾಕಿ ಪಡೆಯೇ ಒಂದು ಕ್ಷಣ ಬೆಚ್ಚಿ ಬಿದ್ದಿತ್ತು. ಇನ್ನೂ ಪೋಟೊಗಳು, ವಿಡಿಯೋ ಗಳು ಎಫ್ ಎಸ್ ಎಲ್ ವರದಿಗಳು ಬರಬೇಕಿದೆ.ಇದ್ರಿಂದ ಡಿ ಗ್ಯಾಂಗ್ ಮತ್ತಷ್ಟು ಕಾನೂನು ಕುಣಿಕೆ ಗಟ್ಟಿಯಾಗುತ್ತಿದೆ.ಆರೋಪಿಗಳ ಎದೆಯಲ್ಲಿ ನಡುವ ಶುರುವಾಗಿದೆ. ಮೂರು ಜನ ಆರೋಪಿಗಳು ಜಾಮೀನು ಅರ್ಜಿ ಸಲ್ಲಿಸಿದ್ದು ಏನು ಆಗುತ್ತೋ ಕಾದು ನೋಡಬೇಕು..