ಕಲಘಟಗಿ (ಧಾರವಾಡ); ಪಟ್ಟಣದಲ್ಲಿ ಗಣೇಶ್ ಚತುರ್ಥಿ ಹಾಗೂ ಈದ್ ಮಿಲಾದ್ ಹಬ್ಬದ ಪ್ರಯುಕ್ತ ತಾಲೂಕಿನ ವಿವಿಧ ಸಮುದಾಯ ಮುಖಂಡರ ಜೊತೆಗೆ ಪೊಲೀಸ್ ಅಧಿಕಾರಿ ಹಾಗೂ ತಾಲೂಕು ದಂಡಾಧಿಕಾರಿ ಶಾಂತಿ ಸಭೆ ನಡೆಸಿದರು.
ಪಟ್ಟಣದ ಪೊಲೀಸ್ ಠಾಣೆಯ ಸಿಪಿಐ ಶ್ರೀಶೈಲ್ ಕೌಜಲಗಿ ಮಾತನಾಡಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಜಾಗೃತಿ ವಹಿಸಬೇಕು ಹಾಗೂ ಗಣೇಶಮೂರ್ತಿ ವಿಸರ್ಜನೆ ಸಮಯದಲ್ಲಿ ಮೃತ್ಯುಂಜಯ ಕೆರೆ ತುಂಬಿರುವುದರಿಂದ ಎಚ್ಚರವಹಿಸಿ, ಮೆರೆವಣಿಗೆ ಮುಖಾಂತರ ಬೇಗನೆ ವಿಸರ್ಜನೆ ಮಾಡಬೇಕೆಂದು ಎಚ್ಚರಿಕೆ ನೀಡಿದರು.
ಯಾವುದೇ ಪ್ರತಿ ಹಬ್ಬದ ಹರಿದಿನಗಳಲ್ಲಿ ಸಾರ್ವಜನಿಕರ ಪಾತ್ರ ಬಹಳ ಮುಖ್ಯವಾಗಿದೆ ಎಂದು ಸಭೆ ಎಂದರು. ಹೆಸ್ಕಾಂ ಇಲಾಖೆಯ ಅಧಿಕಾರಿ ಎಸ್ ಡಿ, ಸಾಲಿಮಠ, ಕಲಘಟಗಿ ಠಾಣೆಯ ಸಿಪಿಐ ಶ್ರೀಶೈಲ್ ಕೌಜಲಗಿ, ತಾಲೂಕು ದಂಡಾಧಿಕಾರಿಗಳಾದ ವೀರೇಶ್ ಮುಳಗುಂದಮಠ, ಪಟ್ಟಣ ಪಂಚಾಯತಿ ಸಿಬ್ಬಂದಿ ಶರಣಪ್ಪ ಉಣಕಲ್ ,
ವೃಷಭೇಂದ್ರ ಪಟ್ಟಣಶೆಟ್ಟಿ, ಸುಧೀರ್ ಬೋಳಾರ್ , ಪ್ರಮೋದ್ ಪಾಲ್ಕರ,ನಾರಾಯಣ ವಾಗ್ಮುಡಿ. ಗಂಗಾಧರ್ ಗೌಳಿ,ಫಕ್ಕಿರೇಶ ನೆಸ್ರೆಕರ್. ಯಲ್ಲಾರಿ ಸಿಂದೆ, ಸದಾನಂದ ಚಿಂತಾಮಣಿ,ಭಾಷಾ ಸಾಬ್ ಕರಿಗಾರ್, ಹಸೇನ್ ಸಾಬ್ ಗಂಜಿಗಟ್ಟಿ, ಮಹಬೂಬ್ಅಲಿ ದಲಾಲ್, ಶೌಕತ್ ಅಲಿ ತೇರ್ಗಾವ್, ಲತೀಫ್ ಜಂಡೇವಾಲೆ, ಬಸವರಾಜ್ ಮಾದರ, ಸುನಿಲ್ ಲಮಾಣಿ, ವಾಸು ಲಮಾಣಿ, ನಾಗರಾಜ್ ಲಮಾಣಿ, ಪರಶುರಾಮ್ ವಡ್ಡರ, ಚೇತನ್ ವಾಗ್ಮೂಡೆ. ಅಗ್ನಿಶಾಮಕ ದಳದ ಸಿಬ್ಬಂದಿ ಸಾರ್ವಜನಿಕರು ಸಭೆಯಲ್ಲಿ ಉಪಸ್ಥಿತರಿದ್ದರು.