ಬೆಂಗಳೂರು:- ರಾಜಧಾನಿ ಬೆಂಗಳೂರಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟು ಹೋಗಿದೆ. ಪುಂಡರಿಗೆ ಪೊಲೀಸರ ಭಯವೇ ಇಲ್ಲದಂತಾಗಿದೆ.
ದರ್ಶನ್ ಗೆ ಸಾಕ್ಷ್ಯಗಳೇ ಕಂಟಕ: ಜಾಮೀನು ಪಡೆಯಲು ಆರೋಪಿಗಳ ಯತ್ನ, ಒಬ್ಬಂಟಿ ಆದ್ರಾ ದರ್ಶನ್!?
ರಸ್ತೆ ರಸ್ತೆಯಲ್ಲಿಯೂ ಟೂಲ್ಸ್ ಹಿಡಿದು ರಾಬರಿ ಮಾಡಲಾಗುತ್ತಿದೆ. ಅದರಂತೆ ಇದೀಗ ಡಿಲವರಿ ಬಾಯ್ ಅಡ್ಡಹಗಟ್ಟಿ ರಾಬರಿ ಮಾಡಲಾಗಿದೆ. ತಲ್ವಾರ್ ನಿಂದ ಹೊಡೆದು ಅಟ್ಟಹಾಸ ಮೆರೆಯಲಾಗಿದೆ.
ಒಂದೇ ಕಡೆ ಎರಡೆರಡು ಘಟನೆ ನಡೆದರು ಪೊಲೀಸರು ಕ್ಯಾರೆ ಅಂದಿಲ್ಲ. ಹೊಟ್ಟೆಪಾಡಿಗಾಗಿ ಮಧ್ಯರಾತ್ರಿವರೆಗು ಡಿಲವರಿ ಬಾಯ್ಸ್ ಕೆಲಸ ಮಾಡ್ತಾರೆ. ಆದರೆ ಈ ಪುಂಡರು ಅವರನ್ನೇ ಹೆದರಿಸಿ ಕಿತ್ತು ತಿನ್ನುತ್ತಾರೆ. ಆಗಸ್ಟ್ 4 ಮತ್ತು 20 ರ ಮಧ್ಯರಾತ್ರಿ ಒಂದೇ ಕಡೆ ಎರಡು ಬಾರಿ ರಾಬರಿ ನಡೆದಿದೆ.
ಕೋನೇನ ಅಗ್ರಹಾರ ವಿನಾಯಕನಗರ ಬಿ ಬ್ಲಾಕ್ ನಲ್ಲಿ ಘಟನೆ ಹಾಗೂ ಜೀವನ್ ಭೀಮಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೃತ್ಯ ನಡೆದಿದೆ.