ಬೆಂಗಳೂರು:- ರಾಜ್ಯದಲ್ಲಿ ಮಾಜಿ ಹಾಗೂ ಹಾಲಿ ಸಿಎಂಗಳ ಪ್ರಾಸಿಕ್ಯುಷನ್ ಯುದ್ದ ದಿನದಿಂದ ದಿನಕ್ಕೆ ಜೋರಾಗ್ತಿದೆ, ಮೂಡ ಹಗರಣದಲ್ಲಿ ಸಿಎಂ ವಿರುದ್ದ ಪ್ರಾಸಿಕ್ಯುಷನ್ ಗೆ ನಿಡಿದ್ದ ಬೆನ್ನಲ್ಲೇ ಕೇದ್ರ ಸಚಿವ ಕುಮಾರಸ್ವಾಮಿಗೆ ಪ್ರಾಸಿಕ್ಯುಷನ್ ಶಾಕ್ ನೀಡಲು ಹೊರಟಿದ್ದ ಸಿಎಂ ಸಿದ್ದರಾಮಯ್ಯ ಅಂಡ್ ಟೀಮ್ ವಿರುದ್ದ ಕುಮಾರಸ್ವಾಮಿ ದಾಖಲೆ ಸಮೇತ ಗುಡುಗಿದ್ದಾರೆ. ಮಾಜಿ ಸಿಎಂಗೆ ಹಾಲಿ ಸಿಎಂಗೆ ಟಾಂಗ್ ಮೇಲೆ ಟಾಂಗ್ ಕೊಟ್ಟಿದ್ದು ವಾರ್ ಜೋರಾಗ್ತಿದೆ. ಸಿಎಂ ಹಾಗೂ ಕೇಂದ್ರ ಸಚಿವರ ನಡುವಿನ ಟಾಕ್ ವಾರ್ ಗೆ ಕಾರಣ ಏನು ಅನ್ನೋದ್ರ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ….
ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಕಲ್ಪಿಸಿ: DCM ಡಿಕೆಶಿಗೆ ಸಂಸದ ತೇಜಸ್ವಿ ಸೂರ್ಯ ಮನವಿ!
ರಾಜ್ಯ ರಾಜಕೀಯದಲ್ಲಿ ಸದ್ಯ ಪ್ರಾಸಿಕ್ಯುಷನ್ ಅಸ್ತ್ರ ಆಡಳಿತ ಪಕ್ಷ ಹಾಗೂ ವಿಪಕ್ಷಗಳ ನಡುವೆ ಜಟಾಪಟಿಗೆ ಕಾರಣವಾಗಿದೆ. ಮೂಡ ಹಗರಣದಲ್ಲಿ ಸಿಎಂ ವಿರುದ್ದ ತನಿಖೆಗೆ ರಾಜ್ಯಪಾಲರಿಂದ ಪ್ರಾಸಿಕ್ಯುಷನ್ ಗೆ ಅನುಮತಿ ಸಿಕ್ಕಿದ ಮೇಲೆ ರಾಜಕೀಯ ವಲಯದಲ್ಲಿ ವಾಗ್ವಾದದ ಸುಂಟರಗಾಳಿ ಶುರುವಾಗಿದ್ದು ಹಲವು ನಾಯಕರ ನಡುವೆ ಸುತ್ತುತ್ತಿದೆ. ಸಿಎಂ ವಿರುದ್ದ ಪ್ರಾಸಿಕ್ಯುಷನ್ ಸಿಕ್ಕಿದ ಮೇಲೆ ಕೌಂಟರ್ ಆಗಿ ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ದ ಕಾಂಗ್ರೆಸ್ ಪ್ರತ್ಯಾಸ್ತ್ರ ಹೂಡಿ ಎಸ್ ಐಟಿ ಮಾಡಿ ಪ್ರಾಸಿಕ್ಯುಷನ್ ನೀಡಬೇಕಂತ ರಾಜಭವನದತ್ತ ಮತ್ತೆ ಎಲ್ಲರ ತಿರುಗಿ ನೋಡುವಂತೆ ಮಾಡಿದೆ..
ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ದ ಕಾಂಗ್ರೆಸ್ ನಾಯಕರು ಆರೋಪ ಮಾಡುತ್ತಿರೋದಕ್ಕೆ ಕೆಲವು ದಾಖಳೆಗಳನ್ನಿಟ್ಟುಕೊಂಡು ಕುಮಾರಸ್ವಾಮಿ ಇಂದು ಸುದ್ದಿಗೋಷ್ಟಿ ನಡೆಸಿದ್ರು. ಸಾಯಿ ಮಿನರಲ್ ಪ್ರಕರಣದಲ್ಲಿ ಕುಮಾರಸ್ವಾಮಿ ವಿರುದ್ದ ಪ್ರಾಸಿಕ್ಯುಷನ್ ಗೆ ಅನುಮತಿ ಕೊಡಬೇಕು ಅನ್ನೊ ಕಾಂಗ್ರೆಸ್ ನಾಯಕರ ವಾದಕ್ಕೆ ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಅಂದಿನ ಲೋಕಾಯುಕ್ತಗೆ ಗಣಿಗೆ ಸಂಬಂಧಿಸಿದ ದಾಖಲೆ ನಿಡೀದೆ. ಗಣಿ ಅಕ್ರಮ ತನಿಖೆ ಅಲ್ಲಿಂದ ಆರಂಭವಾಗಿ ನಂತರ ಲೋಕಾಯುಕ್ತ 2011ರಲ್ಲಿ ಎರಡು ಮೂರು ಟ್ರಂಕ್ಗಳಲ್ಲಿ ವರದಿ ತಂದುಕೊಟ್ರು. ಆ ವರದಿಯಲ್ಲಿ ಎಸ್.ಎಂ ಕೃಷ್ಣಾ, ಧರ್ಮಸಿಂಗ್, ನನ್ನ ಹೆಸರಿದೆ. ಆ ವರದಿಯಲ್ಲಿ ಅಂದಿನ ಸಿಎಂ ಪ್ರಕರಣದಲ್ಲಿ ಮಿಸ್ ಕಂಡಕ್ಟ್ ರಿಪೋರ್ಟ್ ಇತ್ತು. ಕ್ರಮ ಆಗಬೇಕು ಅಂತ ಒತ್ತಾಯ ಮಾಡಲ್ಲ ಅಂತ ಲೋಕಾಯುಕ್ತ ವರದಿ ನೀಡಿದ್ರು ಎಂದು ಸ್ಪಷ್ಟನೆ ನೀಡಿದ್ರು ಕುಮಾರಸ್ವಾಮಿ..
ಹೈಕೋರ್ಟ್ ನಲ್ಲಿ 20-11-2011ರಲ್ಲಿ ನನ್ನ ಮೇಲಿದ್ದ ಪ್ರಕರಣ ರದ್ದು ಮಾಡಿ, ಸಾಯಿ ವೆಂಕಟೇಶ್ವರ ಕೇಸ್ ತನಿಖೆ ಮಾಡುವಂತೆ ಆದೇಶ ಮಾಡಿತು. ಎಸ್.ಎಂ ಕೃಷ್ಣಾ ಅವರಿಗೆ ಸುಪ್ರೀಂ ಕೋರ್ಟ್ ರಿಲೀಫ್ ನೀಡಿದೆ. ಹೈಕೋರ್ಟ್ ನಲ್ಲಿ ಸಾಯಿ ವೆಂಕಟೇಶ್ವರ ಕೇಸ್ ಬಾಕಿ ಇದೆ. ಸುಪ್ರೀಂ ಕೋರ್ಟ್ ಗೆ ಪ್ರಕರಣ ರದ್ದಿಗೆ ಹೋದ ಸಿದ್ದರಾಮಯ್ಯ ಅವರೇ ಸಿಎಂ ಆಗಿದ್ರು. ಆಗ SIT ತನಿಖೆಗೆ ಕೊಡಿ ಅಂತ ಸಿದ್ದರಾಮಯ್ಯ ಸರ್ಕಾರ ಹೋಯ್ತು ಇವರು ಏನಾದ್ರೂ ಮಾಡಿ ಕುಮಾರಸ್ವಾಮಿನ ಒಳಗೆ ಹಾಕಿಸಬೇಕು ಅಂತಿದ್ರು ಆದ್ರೆ ಅವರಿಗೆ ನಿರಾಸೆ ಆಗಿದೆ ಅಂತ ವ್ಯಂಗ್ಯವಾಡಿದ್ರು ಕುಮಾರಸ್ವಾಮಿ. ಸಾಯಿ ವೆಂಕಟೇಶ್ವರ ಪ್ರಕರಣದಲ್ಲಿ ರಾಜ್ಯಪಾಲರು ಪುನರ್ ಪರಿಶೀಲನೆ ಮಾಡಿ ಕಳಿಸಿ ಅಂತ ಕಳಿಸಿದ್ದಾರೆ. ಸಾಯಿ ವೆಂಕಟೇಶ್ವರ ಫೈಲ್ ನಲ್ಲಿರೋದು ನನ್ನ ಬರಹ ಅಲ್ಲ ಸೈನ್ ಅಲ್ಲಾ , 6-10-2007ರಲ್ಲಿ ಇದು ಆಗಿರೋದು. ಇದು ನನ್ನ ಸಹಿಯೇ ಅಲ್ಲ, ಯಾರು ಬರೆದುಕೊಂಡಿದ್ದಾನೋ ಗೊತ್ತಿಲ್ಲ. ಇದ್ರಲ್ಲಿ ಭೂಮಿಯನ್ನೇ ಕೊಟ್ಟಿಲ್ಲ, ಯಾರೆಲ್ಲಾ ಫ್ರಾಡ್ ಮಾಡಿಕೊಂಡಿದ್ದಾರೆ ಗೊತ್ತಿಲ್ಲ. ಇದಕ್ಕೆ ನಾನು ಪಾತ್ರನಾ. 20ಲಕ್ಷ ಹಣವನ್ನ ಅಧಿಕಾರಿ ತನ್ನ ಮಗನಿಗೆ ವರ್ಗಾವಣೆ ಮಾಡಿಕೊಂಡಿದ್ನಾ ತಪ್ಪು ನೀವು ಇಟ್ಟುಕೊಂಡು ರಾಜ್ಯಪಾಲರನ್ನ, ಕೇಂದ್ರವನ್ನ ಯಾಕೆ ಎಳೆದು ತರ್ತೀರಿ ಎಂದು ನೇರವಾಗಿ ಆಡಳಿತ ಪಕ್ಷದ ನಾಯಕರಿಗೆ ಪ್ರಶ್ನೆ ಮಾಡಿದ್ರು ಕುಮಾರಸ್ವಾಮಿ..
ಇತ್ತ ಕುಮಾರಸ್ವಾಮಿ ಸುದ್ದಿಗೋಷ್ಟಿ ನಡೆಸಿದ ಬಳಿಕ ಕೊಪ್ಪಳದಲ್ಲಿ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ ಕುಮಾರಸ್ವಾಮಿ ಗೆ ಟಾಂಗ್ ಕೊಟ್ಟಿದ್ದಾರೆ. ರಾಜ್ಯಪಾಲರು ತನ್ನ ವಿರುದ್ದ ಯಾವುದೇ ತನಿಖಾ ವರದಿಯನ್ನು ಆಧರಿಸದೇ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದಾರೆ ಇದು ತಾರತಮ್ಯವಲ್ಲವೆ. ಗಣಿಗಾರಿಕೆ ಪ್ರಕರಣದಲ್ಲಿ ಕುಮಾರಸ್ವಾಮಿಯವರನ್ನು ಬಂಧಿಸುವ ಅಗತ್ಯಬಿದ್ದರೆ ಮುಲಾಜಿಲ್ಲದೆ ಬಂದಿಸ್ತೀವಿ. ಒಬ್ಬ ಪೊಲೀಸ್ ಕಾನ್ಸಟೇಬಲ್ ಸಾಕು ಕುಮಾರಸ್ವಾಮಿ ನ ಬಂಧಿಸೋಕೆ, ಹೆಚ್ ಡಿಕೆ ನನಗೆ ಹೆದರಿಕೊಳ್ಳದೆ ಹೋಗಿದ್ದರೆ ಪ್ರೆಸ್ ಮೀಟ್ ಏಕೆ ಮಾಡ್ತಿದ್ದರು ಅವರೊಬ್ಬ ಹಿಡ್ ಆ್ಯಂಡ್ ರನ್ ಗಿರಾಕಿ ಅಂತ ವ್ಯಂಗ್ಯವಾಡಿದ್ದಾರೆ ಸಿಎಂ.
ಅಗತ್ಯ ಬಿದ್ರೆ ಕುಮಾರಸ್ವಾಮಿ ಬಂಧನ ಮಾಡ್ತೀವಿ ಎಂಬ ಸಿಎಂ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಹೆಚ್ ಡಿಕೆ ನನ್ನ ಬಂಧನ ಮಾಡೋಕೆ ನೂರು ಸಿದ್ದರಾಮಯ್ಯ ಬರಬೇಕಂತ ಟಾಂಗ್ ನೀಡಿದ್ರು. ನನಗೆ ಭಯ ಶುರುವಾಗಿದೆಯಾ,ನನ್ನ ನೋಡಿದ್ರೆ ಹಾಗೆ ಅನಿಸುತ್ತಾ, ಅವರು ಕಳೆದ ವಾರದಿಂದ ಹೇಗೆ ನಡೆದುಕೊಳ್ತಿದ್ದಾರೆ ಯಾರಿಗೆ ಭಯ ಶುರುವಾಗಿದೆ ನೀವೆ ಹೇಳಿ ಅಂತ ಪ್ರಶ್ನಿಸಿದ್ದಾರೆ ಕುಮಾರಸ್ವಾಮಿ
ಒಟ್ನಲ್ಲಿ ಸದ್ಯ ರಾಜ್ಯ ರಾಜಕೀಯದಲ್ಲಿ ಪ್ರಾಸಿಕ್ಯುಷನ್ ವಿಚಾರ ಸಕತ್ ಸದ್ದು ಮಾಡ್ತಿರೋವಾಗಲೆ ಹೆಚ್ ಡಿ ಕುಮಾರಸ್ವಾಮಿ ವಿರುದ್ದ ಪ್ರಾಸಿಕ್ಯುಷನ್ ಗೆ ಕೊಡಬೇಕು ಅನ್ನೋ ವಿಚಾರ ರಾಜ್ಯಪಾಲರ ಅಂಗಳದಲ್ಲಿದ್ದೆ. ಈ ವಿಚಾರವಾಗಿ ನಾಯಕರು ಯಾವ ರೀತಿ ಕಾನೂನಾತ್ಮಕವಾಗಿ ಹೋರಾಟ ಮಾಡ್ತಾರೆ ಜೊತೆಗೆ ಇದೆಲ್ಲದರ ನಡುವೆ ರಾಜ್ಯಪಾಲರ ನಿರ್ಧಾರ ಸಾಕಷ್ಟು ಕುತುಹಲ ಮೂಡಿಸಿದೆ.. ಅದೇನೆ ಇರಲಿ ಪ್ರಾಸಿಕ್ಯುಷನ್ ವಿಚಾರ ಹಾಲಿ ಮಾಜಿ ಸಿಎಂಗಳ ನಡುವೆ ಯಾವ ಮಟ್ಟಕ್ಕೆ ಹೋಗುತ್ತೆ ಅನ್ನೋದನ್ನ ಕಾದುನೋಡಬೇಕಿದೆ