ಬೆಂಗಳೂರು: ನಗರದ ಉದ್ಯೋಗಾಂಕ್ಷಿಗಳಿಗೆ ಒಂದು ಸಿಹಿ ಸುದ್ದಿ ಕೊಟ್ಟಿದ್ದು ಸಚಿವ ಕೆ ಹೆಚ್ ಮುನಿಯಪ್ಪ ನೇತೃತ್ವದಲ್ಲಿ ಜಿಲ್ಲಾ ಮಟ್ಟದ ಬೃಹತ್ ಉದ್ಯೋಗ ಮೇಳ ಆಯೋಜನೆ ಮಾಡಲಾಗಿದ್ದು ಜಿಲ್ಲೆಯ ನಿರುದ್ಯೋಗ ಯುವಕ ಯುವತಿಯರಿಗೆ ಉದ್ಯೋಗಕ್ಕೆ ಅವಕಾಶಕ್ಕೆ ಹೊಸ ದಾರಿ ದೀಪವಾಗಲಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ತಾಲೂಕಿನ ನಿರುದ್ಯೋಗಿಗಳಿಗಾಗಿ ಎಸ್ಎಸ್ಎಲ್ ಸಿ , ಪಿಯುಸಿ, ಡಿಗ್ರಿ, ಡಿಪ್ಲೋಮೋ, ಹೀಗೆ ವಿದ್ಯಾಭ್ಯಾಸಕ್ಕಾನುಗುಣವಾಗಿ ಹುದ್ದೆಯ ಮೇಳ ಏರ್ಪಾಟು ಮಾಡಲಾಗಿದ್ದು ಸೆಪ್ಟೆಂಬರ್ 13ರಿಂದ ಉದ್ಯೋಗ ಮೇಳ ಆರಂಭವಾಗಲಿದೆ.
ದೇವನಹಳ್ಳಿ ತಾಲೂಕಿನ ಡಿಗ್ರಿ ಕಾಲೇಜು ಮೈದಾನದಲ್ಲಿ ನಡೆಯುವ ಬೃಹತ್ ಉದ್ಯೋಗ ಮೇಳ ನೂರಕ್ಕೂ ಹೆಚ್ಚು ಕಂಪನಿಗಳು ಭಾಗಿ ಹಾಗೂ ಮೂರು ಸಾವಿರಕ್ಕೂ ಹೆಚ್ಚು ಮಂದಿ ಸೇರುವ ನಿರೀಕ್ಷೆ ಇದೆ.
ಈ ಕ್ಷಣದಿಂದಲೇ QR ಕೋಡ್ ಮೂಲಕ ರಿಜಿಸ್ಟರ್ ಮಾಡಿಕೊಳ್ಳಬಹುದಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾದಂಡಾಧಿಕಾರಿ N.ಶಿವಶಂಕರ್ ತಿಳಿಸಿದ್ದಾರೆ.