ದಾಸರಹಳ್ಳಿ: ಇತ್ತೀಚೆಗೆ ನಡೆದ ಕೊಲ್ಕತ್ತಾದಲ್ಲಿ ವೈದ್ಯ ವಿದ್ಯಾರ್ಥಿನಿ ಅತ್ಯಾಚಾರ ಹಾಗೂ ಕೊಲೆ ಪ್ರಕರಣವನ್ನ ಖಂಡಿಸಿ ಸಾವಿರಾರು ಮೆಡಿಕಲ್ ವಿದ್ಯಾರ್ಥಿಗಳು ತುಂತುರು ಮಳೆಯ ನಡುವೆಯೂ ಮೇಣದ ಬತ್ತಿ ಹಚ್ಚಿ ಬೃಹತ್ ಜಾಥ ನಡೆಸುವ ಮೂಲಕ ಪ್ರತಿಭಟನೆಯನ್ನ ನಡೆಸಿದ್ದಾರೆ.
ಬೆಂಗಳೂರಿನ ಟಿ.ದಾಸರಹಳ್ಳಿಯ ಚಿಕ್ಕಬಾಣಾವಾರ ಸಂತೇ ಬೀದಿ ಸರ್ಕಲ್ ನಿಂದ ಗಂಗಮ್ಮ ದೇವಸ್ಥಾನ ವರೆಗೂ ಸಾವಿರಾರು ಮೆಡಿಕಲ್ ವಿದ್ಯಾರ್ಥಿಗಳು, ಹ್ಯೂಮನ್ ರೈಟ್ಸ್ ಪ್ರೊಟೆಕ್ಷನ್ ಕಮಿಟಿ ಸಹಯೋಗದೊಂದಿಗೆ ಘಟನೆ ಖಂಡಿಸುವ ಮೂಲಕ
ಮೇಣದ ಬತ್ತಿ ಅಂಟಿಸಿ ಮೌನಚಾರಣೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಭಾಗಿಯಾದರು.
ಇನ್ನೂ ಅತ್ಯಾಚಾರಿಗಳನ್ನು ಕೂಡಲೇ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಗಂಭೀರ ಪ್ರಕರಣ ಎಂದು ಪರಿಗಣಿಸಿ ಆರೋಪಿಗಳನ್ನ ಗಲ್ಲಿಗೇರಿಸಿ ಎಂದು ವಿದ್ಯಾರ್ಥಿಗು ಆಗ್ರಹಿಸಿದರು.
ಇನ್ನೂ ಮೆರವಣಿಗೆಯಲ್ಲಿ ಹ್ಯೂಮನ್ ರೈಟ್ಸ್ ಪ್ರೊಟೆಕ್ಷನ್ ಕಮಿಟಿಯ ರಾಜ್ಯಾಧ್ಯಕ್ಷ ಬಿ ಎಂ ಚಿಕ್ಕಣ್ಣ ಕಮಿಟಿಯ ಕಾರ್ಯಕರ್ತರು
ಅತ್ಯಾಚಾರಿ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿದ್ದು, ಹತ್ಯೆಯಾದ ವಿದ್ಯಾರ್ಥಿನಿ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಒತ್ತಾಯ ಪ್ರತಿಭಟನೆ ನಡೆಸುವ ಮೂಲಕ ಆಗ್ರಹಿಸಿದರು.
ಇನ್ನೂ ಈ ಪ್ರತಿಭಟನೆಯಿಂದಾಗಿ ಕೆಲಕಾಲ ಟ್ರಾಫಿಕ್ ಸಮಸ್ಯೆ ಎದುರಾಗಿದ್ದು ಟ್ರಾಫಿಕ್ ಪೊಲೀಸರು ನಿಯಂತ್ರಣಕ್ಕೆ ತಂದಿದ್ದಾರೆ.