ಡೆಹ್ರಾಡೂನ್:– ಬಸ್ ನಿಲ್ದಾಣದಲ್ಲಿಯೇ ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿರುವ ಹೀನ ಕೃತ್ಯ ದೆಹಲಿಯಿಂದ ಡೆಹ್ರಾಡೂನ್ಗೆ ತೆರಳಿದ ಸರ್ಕಾರಿ ಬಸ್ನೊಳಗೆ ಜರುಗಿದೆ.
ಗೃಹಿಣಿ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ: ಗಂಡನ ಮೇಲೆ ಹೆಚ್ಚಿದ ಗುಮಾನಿ!
ಅತ್ಯಾಚಾರ ಎಸಗಿದ ಆರೋಪದಲ್ಲಿ ಐವರು ಆರೋಪಿಗಳನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ. ಆಗಸ್ಟ್ 12ರಂದು ತಡರಾತ್ರಿ ಡೆಹ್ರಾಡೂನ್ ಐಎಸ್ಬಿಟಿ ಪ್ಲಾಟ್ಫಾರ್ಮ್ನಲ್ಲಿ ಅಪ್ತಾಪ್ತ ಬಾಲಕಿ ಒಂಟಿಯಾಗಿ ಕುಳಿತಿರುವುದು ಕಂಡುಬಂದಿದ್ದು, ಅತ್ಯಾಚಾರಕ್ಕೊಳಗಾಗಿದ್ದ ಆಕೆಯನ್ನು ಅಲ್ಲಿಂದ ಬಾಲ ನಿಕೇತನಕ್ಕೆ ಕಳುಹಿಸಲಾಗಿದೆ.
ಬಾಲ ನಿಕೇತನದಲ್ಲಿ ಕೌನ್ಸೆಲಿಂಗ್ನ ಸಮಯದಲ್ಲಿ ಅವಳು ತನ್ನ ಮೇಲಾದ ದೌರ್ಜನ್ಯದ ಬಗ್ಗೆ ಹೇಳಿಕೊಂಡಿದ್ದಾಳೆ. ಡೆಹ್ರಾಡೂನ್ ಹಿರಿಯ ಪೊಲೀಸ್ ಅಧೀಕ್ಷಕ ಅಜಯ್ ಸಿಂಗ್ ನೀಡಿದ ಮಾಹಿತಿಯ ಪ್ರಕಾರ, ಬಂಧಿತರಲ್ಲಿ ಸರ್ಕಾರಿ ಬಸ್ನ ಚಾಲಕ ಮತ್ತು ಕಂಡಕ್ಟರ್ ಕೂಡ ಸೇರಿದ್ದಾರೆ. ಆಗಸ್ಟ್ 12ರಂದು ಈ ಘಟನೆ ನಡೆದಿದೆ.
ಮಾಹಿತಿ ಪಡೆದ ತಕ್ಷಣ, ಪೊಲೀಸರು ಕಾರ್ಯಾಚರಣೆಗೆ ಇಳಿದರು ಮತ್ತು ಸಿಸಿಟಿವಿ ಕ್ಯಾಮೆರಾಗಳನ್ನು ಸ್ಕ್ಯಾನ್ ಮಾಡುವ ಮೂಲಕ ರೋಡ್ವೇಸ್ ಬಸ್ ಅನ್ನು ಗುರುತಿಸಿದರು. ನಂತರ ಚಾಲಕ, ಕಂಡಕ್ಟರ್ ಸೇರಿದಂತೆ ಐವರು ಆರೋಪಿಗಳನ್ನು ಬಂಧಿಸಲಾಯಿತು. ಆರೋಪಿಗಳನ್ನು ಉತ್ತರಾಖಂಡದ ಹರಿದ್ವಾರದ ಬುಗ್ಗವಾಲಾ ನಿವಾಸಿಗಳಾದ ಧರ್ಮೇಂದ್ರ ಕುಮಾರ್ (32) ಮತ್ತು ರಾಜ್ಪಾಲ್ (57), ಹರಿದ್ವಾರದ ಭಗವಾನ್ಪುರ ನಿವಾಸಿ ದೇವೇಂದ್ರ (52), ಪಟೇಲ್ ನಗರದ ನಿವಾಸಿ ರಾಜೇಶ್ ಕುಮಾರ್ ಸೋಂಕರ್ (38), ನವಾಬ್ಗಂಜ್ ನಿವಾಸಿ ರವಿಕುಮಾರ್ (34) ಎಂದು ಗುರುತಿಸಲಾಗಿದೆ.