ಚಾಮರಾಜನಗರ:– ಹೈಕೋರ್ಟ್ ಆದೇಶಕ್ಕೂ ಅಧಿಕಾರಿಗಳು ಡೊಂಟ್ಕೇರ್ ಎಂದಿದ್ದು, ಮಹಿಳೆಗೆ ಕೆಲಸ ನೀಡಲು ಮೀನಾಮೇಷ ಎಣಿಸುತ್ತಿದ್ದಾರೆ.
ಯುವಕನ ಮರ್ಮಾಂಗ ಕತ್ತರಿಸಿ ಲಿಂಗ ಪರಿವರ್ತನೆ: ಐವರು ಮಂಗಳ ಮುಖಿಯರಿಂದ ಕೃತ್ಯ!
ತನ್ನ ಕೆಲಸ ಪಡೆದುಕೊಳ್ಳಲು ಕಚೇರಿಯಿಂದ ಕಚೇರಿ ತಿರುಗುತ್ತಿರುವ ಮಹಿಳೆ ಹೆಸರು ಮಂಜುಳಾ, ಚಾಮರಾಜನಗರ ತಾಲೂಕಿನ ಮಲ್ಲಯ್ಯನಪುರ ಗ್ರಾಮಸ್ಥೆ. 25 ವರ್ಷಗಳಿಂದ ಅತ್ತೆ ನಾಗಮ್ಮ ಮಲ್ಲಯ್ಯನಪುರ ಗ್ರಾಮದ ಅಂಗನವಾಡಿಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಆದ್ರೆ, ಸೇವಾ ಅವಧಿ ಮುಗಿಯುವ ಮೊದಲೇ ನಾಗಮ್ಮ ಅವರು ಅನಾರೋಗ್ಯ ಕಾರಣದಿಂದ ಮೃತ ಪಟ್ಟಿದ್ದಾರೆ. ಈ ಹಿನ್ನಲೆ ಅನುಕಂಪ ಆಧಾರದ ಮೇಲೆ ಕೆಲಸ ನೀಡುವಂತೆ ಮನವಿ ಮಾಡಿದರು. ಮೊದಲು ಬಿಡುಗಡೆಯಾದ ಜಾಬ್ ಲೀಸ್ಟ್ನಲ್ಲಿ ಮಂಜುಳಾ ಹೆಸರು ಕೂಡ ಬಂದಿತ್ತು. ಆದ್ರೆ, ಮಂಜುಳಾಗೆ ಕೆಲಸ ನೀಡದೆ ಸ್ಥಳೀಯರಲ್ಲದ ಬೇರೊಬ್ಬರಿಗೆ ಇಲಾಖೆ ಕೆಲಸ ನೀಡಿದೆ.
ಯಾವಾಗ ಮಂಜುಳಾಗೆ ಕೆಲಸ ಸಿಗಲಿಲ್ಲವೋ ಆಕೆ ಹೈಕೋರ್ಟ್ಗೆ ಮನವಿ ಸಲ್ಲಿಸಿದ್ದರು. ಸುದೀರ್ಘವಾಗಿ ವಿಚಾರಣೆ ನಡೆಸಿದ ಮಾನ್ಯ ಉಚ್ಛನ್ಯಾಯಾಲಯ, ಈಗ ಮಂಜುಳಾರಿಗೆ ಕೆಲಸ ನೀಡುವಂತೆ ಆದೇಶಿಸಿದೆ. ಅದು ಅಲ್ಲದೆ ನ್ಯಾಯಾಲಯದ ಆದೇಶ ಬಂದು ಎರಡು ವಾರ ಕಳೆಯುವುದರೊಳಗೆ ಕೆಲಸ ನೀಡುವಂತೆ ಸೂಚಿಸಿದರೂ ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿಗಳು ಕೆಲಸ ನೀಡದೆ ಅಲೆದಾಡಿಸುತ್ತಿದ್ದಾರೆ.
ಹೈಕೋರ್ಟ್ ಆದೇಶಕ್ಕೆ ಅಧಿಕಾರಿಗಳು ಕವಡೆ ಕಾಸಿನ ಕಿಮ್ಮತ್ತು ನೀಡದೆ ನಮ್ಮನ್ನ ಸತಾಯಿಸ್ತಾ ಇದ್ದಾರೆ ಎಂದು ದೂರುದಾರೆ ಮಂಜುಳಾ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಮೂಲಕ ಕೋರ್ಟ್ ಆದೇಶಕ್ಕೂ ಅಧಿಕಾರಿಗಳು ಕವಡೆ ಕಾಸಿನ ಕಿಮ್ಮತ್ತು ಕೊಡುತ್ತಿಲ್ಲವಾ ಎಂಬ ಪ್ರಶ್ನೆ ಮೂಡಿದೆ.