ಬೆಂಗಳೂರು:- ಮುಡಾ ಪ್ರಕರಣದಲ್ಲಿ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಮತ್ತೊಂದು ಸುತ್ತಿನ ಹೋರಾಟಕ್ಕೆ ರಾಜ್ಯ ಬಿಜೆಪಿ ಮುಂದಾಗಿದೆ.ಗುರುವಾರದಂದು ರಾಜ್ಯಾದ್ಯಂತ ಹೋರಾಟ ಮಾಡುವುದಾಗಿ ಕೇಸರಿ ನಾಯಕರು ಕರೆ ನೀಡಿದ್ದಾರೆ.ಅಲ್ದೇ ರಾಜ್ಯಪಾಲರಿಗೆ ಬಹಿರಂಗವಾಗಿ ಬೆದರಿಕೆ ಹಾಕಿರುವ ಕಾಂಗ್ರೆಸ್ ನಾಯಕರು ವರ್ತನೆಗೆ ಕಮಲ ನಾಯಕರು ಕೊತ ಕೊತ ಕುದಿಯುತ್ತಿದ್ದಾರೆ.
ನಿರುದ್ಯೋಗಿಗಳೇ ಗಮನಿಸಿ: ನಮ್ಮ ಮೆಟ್ರೊದಲ್ಲಿದೆ ಹಲವು ಉದ್ಯೋಗ, ಆಸಕ್ತರು ತಕ್ಷಣ ಅರ್ಜಿ ಸಲ್ಲಿಸಿ!
ಸಿಎಂ ವಿರುದ್ದ ಬಿಜೆಪಿ ಪ್ರಯೋಗ ಮಾಡಿರೋ ಮೂಡಾ ಅಸ್ತ್ರವನ್ನ ಸದ್ಯಕ್ಕೆ ಬಿಡುವ ಸೂಚನೆ ಕಾಣ್ತಿಲ್ಲ. ಟಗರುರಾಮಯ್ಯ ವಿರುದ್ದ ಸರಣಿ ಹೋರಾಟ ಮಾಡ್ತಿರೋ ಕೇಸರಿ ಬ್ರಿಗೇಡ್ ಗುರುವಾರದಿಂದ ಮತ್ತೊಂದು ಹೋರಾಟಕ್ಕೆ ಮುಂದಾಗಿದೆ.ನಿನ್ನೆ ಸಿಎಂ ರಾಜೀನಾಮೆಗೆ ಒತ್ತಾಯಿಸಿ ಇಡೀ ಬಿಜೆಪಿ ನಾಯಕರು ವಿಧಾನ ಸೌಧದ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡಸಿ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ್ವು.ಇದೀಗ ಮತ್ತೆ ಇಡೀ ರಾಜ್ಯಾದ್ಯಂತ ಮತ್ತೊಂದು ಹೋರಾಟವನ್ನ ಸಿಎಂ ವಿರುದ್ದ ಮಾಡಲು ರಾಜ್ಯ ಬಿಜೆಪಿ ತೀರ್ಮಾನ ಮಾಡಿದೆ. ಗುರುವಾರದಿಂದ ಇಡೀ ರಾಜ್ಯಾದ್ಯಂತ ಬಿಜೆಪಿ ಜಿಲ್ಲಾ ಘಟಕದಿಂದ ಹಂತಹಂತವಾಗಿ ಪ್ರತಿಭಟನೆ ನಡೆಸಲು ರಾಜ್ಯ ಬಿಜೆಪಿ ತೀರ್ಮಾನಿಸಿದೆ.
ಇನ್ನು ರಾಜ್ಯಪಾಲರ ವಿರುದ್ಧ ಪ್ರತಿಭಟನೆ ಮಾಡುವ ಭರದಲ್ಲಿ ಕಾಂಗ್ರೆಸ್ ನಾಯಕರು ರಾಜ್ಯಪಾಲರ ಗೆಹ್ಲೋಟ್ ವಿರುದ್ಧ ಪ್ರಾಣ ಬೆದರಿಕೆ ಹಾಕಿದ್ದರು.ಕಾಂಗ್ರೆಸ್ ಶಾಸಕರಾದ ನರೇಂದ್ರ ಸ್ವಾಮಿ,ಐವಾನ್ ಡಿಸೋಜ್ ಸೇರಿ ಪ್ರಮುಖ ನಾಯಕರು ಏಕವಚನದಲ್ಲಿ ಪ್ರಾಣ ಬೆದರಿಕೆ ಹಾಕಿದ್ರು.ಅದ್ರಲ್ಲೂ ಐವಾನ್ ಡಿಸೋಜಾ ಬಾಂಗ್ಲಾದೇಶದ ಪ್ರಧಾನಿಗೆ ಆದ ಪರಿಸ್ಥಿತಿಯೇ ನಮ್ಮ ರಾಜ್ಯಪಾಲರಿಗೆ ಆಗಲಿದೆ ಎಂದು ನೇರವಾಗಿಯೇ ಪ್ರಾಣ ಬೆದರಿಕೆ ಹಾಕಿದ್ರು.ಇದಕ್ಕೆ ಕಿಡಿಕಾರಿರುವ ಬಿಜೆಪಿ ನಾಯಕರು ಪಾಕಿಸ್ತಾನದಿಂದ ಬಂದಿರುವ ಐವಾನ್ ಡಿಸೋಜ್ ರಾಜ್ಯಪಾಲರಿಗೆ ಪ್ರಾಣ ಬೆದರಿಕೆ ಹಾಕಿದ್ದಾರೆ.ಕೂಡಲೇ ಇವರನ್ನ ಬಂಧಿಸಬೇಕೆಂದು ಆಗ್ರಹ ಮಾಡಿದಾರೆ.ಅಲ್ದೇ ಡಿಜಿ ಅಲೋಕ್ ಮೋಹನ್ ಭೇಟಿ ಮಾಡಿ ಈ ಬಗ್ಗೆ ಬಿಜೆಪಿ ನಿಯೋಗ ದೂರು ನೀಡಿದೆ.
ಒಟ್ಟಾರೆ ,ಮುಡಾ ಹಗರಣದಲ್ಲಿ ಒಂದು ಕಡೆ ಕಾನೂನು ಸಂಘರ್ಷ ಶುರುವಾಗಿದ್ರೆ,ಮತ್ತೊಂದು ಕಡೆ ಬೀದಿಗೆ ಇಳಿದಿರುವ ಕಮಲ-ದಳ ನಾಯಕರು ಹಂತ ಹಂತವಾಗಿ ಹೋರಾಟ ಮಾಡಲು ಮುಂದಾಗಿದ್ದಾರೆ.ಮುಖ್ಖಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡೋವರೆಗೂ ಹೋರಾಟ ಮುಂದುವರೆಸಲು ಕೇಸರಿ ನಾಯಕರು ನಿರ್ಧಾರ ಮಾಡಿದ್ದಾರೆ.