ಬೆಂಗಳೂರು:- ನಟ ದರ್ಶನ್ರನ್ನು ನೋಡಲು ಪರಪ್ಪನ ಅಗ್ರಹಾರದ ಜೈಲಿಗೆ ಪತ್ನಿ ವಿಜಯಲಕ್ಷ್ಮಿ ಭೇಟಿ ನೀಡಿದ್ದಾರೆ.
Muda Scam: ಸಿದ್ದರಾಮಯ್ಯರ ಕಾನೂನು ಹೋರಾಟಕ್ಕೆ ನಮ್ಮ ತಕರಾರಿಲ್ಲ: ಬಿವೈ ವಿಜಯೇಂದ್ರ!
ರೇಣುಕಾಸ್ವಾಮಿ ಕೊಲೆ ಕೇಸ್ ಗೆ ಸಂಬಂಧಿಸಿದಂತೆ ದರ್ಶನ್ ಜೈಲಿಗೆ ಹೋದಾಗಿನಿಂದ ಪತ್ನಿ ವಿಜಯಲಕ್ಷ್ಮಿ ಹಾಗೂ ಮಗ ವಿನೀಶ್ ಜೈಲಿಗೆ ಆಗಾಗ ಆಗಮಿಸುತ್ತಲೇ ಇದ್ದಾರೆ. ಬರುವಾ್ ದೇವರ ಪ್ರಸಾದ, ಹಣ್ಣು ಹೀಗೆ ಏನಾದರೊಂದು ಕೊಟ್ಟು ಹೋಗುತ್ತಾರೆ. ಇದೀಗ ಇಂದು ಮತ್ತೆ ದರ್ಶನ್ ಕಾಣಲು ಪತ್ನಿ ವಿಜಯಲಕ್ಷ್ಮಿ ಹಾಗೂ ಪುತ್ರ ಆಗಮಿಸಿದ್ದಾರೆ.
ಇಂದು ಪರಪ್ಪನ ಅಗ್ರಹಾರ ಜೈಲಿಗೆ ಬಂದು ಪತಿಯನ್ನು ವಿಜಯಲಕ್ಷ್ಮಿ ಭೇಟಿಯಾಗಿದ್ದಾರೆ. ದರ್ಶನ್ ಪತ್ನಿ ವಿಜಯಲಕ್ಷ್ಮಿ, ಪುತ್ರ ವಿನೀಶ್ ಇಬ್ಬರು ಆಗಮಿಸಿದ್ದಾರೆ. ಸತತ ಎಂಟನೇ ಬಾರಿಗೆ ಆಗಮಿಸಿದ ಪತಿ ದರ್ಶನ್ನನ್ನು ನೋಡಲು ವಿಜಯಲಕ್ಷ್ಮಿ ಆಗಮಿಸಿದ್ದಾರೆ. ದರ್ಶನ್ ಜೈಲಿಗೆ ಹೋದಾಗಿನಿಂದ ಪ್ರತಿ ಸೋಮವಾರ ವಿಜಯಲಕ್ಷ್ಮೀ ಆಗಮಿಸುತ್ತಲೇ ಇದ್ದಾರೆ. ಅಷ್ಟೇ ಅಲ್ಲದೆ ಇಂದು ಹುಣ್ಣಿಮೆ ಆಗಿರುವುದರಿಂದ ವಿಜಯಲಕ್ಷ್ಮಿಯವರು ದೇವಾಲಯಕ್ಕೆ ಹೋಗಿದ್ದು, ಆ ಪ್ರಯುಕ್ತ ಜೈಲಿಗೆ ತೆರಳಿದ್ದಾರೆ.
ಇನ್ನೂ ಪಟ್ಟಣಗೆರೆ ಶೆಡ್ ನಲ್ಲಿ ನಡೆದಿದೆ ಎನ್ನಲಾದ ರೇಣುಕಾಸ್ವಾಮಿ ಕೊಲೆ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು. ಇದೇ ಕೇಸ್ನಲ್ಲಿ ಸ್ಯಾಂಡಲ್ವುಡ್ ಸ್ಟಾರ್ ನಟ ದರ್ಶನ್ ಹಾಗೂ ನಟಿ ಪವಿತ್ರಾಗೌಡ ಸೇರಿದಂತೆ ಹಲವು ಆರೋಪಿಗಳು ಜೈಲು ವಾಸ ಅನುಭವಿಸುವಂತೆ ಆಗಿದೆ.