ಬೆಂಗಳೂರು:- ಸಿದ್ದರಾಮಯ್ಯರ ಕಾನೂನು ಹೋರಾಟಕ್ಕೆ ನಮ್ಮ ತಕರಾರಿಲ್ಲ ಎಂದು ಬಿವೈ ವಿಜಯೇಂದ್ರ ಹೇಳಿದ್ದಾರೆ.
ಮುಡಾ ಪ್ರಕರಣದಲ್ಲಿ ರಾಜ್ಯಪಾಲರು ನೀಡಿರುವ ಪ್ರಾಸಿಕ್ಯೂಷನ್ ಅನುಮತಿಯನ್ನು ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ನ್ಯಾಯಾಲಯದ ಮೊರೆ ಹೊಕ್ಕಿರುವುದಕ್ಕೆ ಮಾತನಾಡಿ,
ರೇಣುಕಾಸ್ವಾಮಿ ಕೊಲೆ ಕೇಸ್: ತನಿಖಾಧಿಕಾರಿಗಳಿಗೆ ಶುರುವಾಯ್ತು ಆರ್ಥಿಕ ಸಂಕಷ್ಟ!
ಒಬ್ಬ ಸಾಮಾನ್ಯ ನಾಗರಿಕನಿಗೆ ಕಾನೂನಿನ ನೆರವು ಪಡೆಯುವ ಅವಕಾಶವಿರುವ ಹಾಗೆ ಮುಖ್ಯಮಂತ್ರಿಯವರಿಗೂ ಇರುತ್ತದೆ, ಅವರು ತಮ್ಮ ಪರ ವಾದಿಸಲು ದೆಹಲಿಯಿಂದ ವಕೀಲರನ್ನು ಕರೆಸಿದ್ದಾರೆ, ಹಿಂದೆ ತಾವು ಕೂಡ ನ್ಯಾಯಾಲಯದ ಮೊರೆ ಹೊಕ್ಕಿದ್ದೆವು, ಅದರ ಬಗ್ಗೆ ಬಿಜೆಪಿಯ ತಕರಾರೇನೂ ಇಲ್ಲ ಎಂದು ಹೇಳಿದರು.
ಆದರೆ, ನಾಲ್ಕೈದು ಸಾವಿರ ಕೋಟಿ ರೂ. ಮೊತ್ತದ ಹಗರಣದ ತನಿಖೆಯನ್ನು ಏಕ ವ್ಯಕ್ತಿಯ ಆಯೋಗ ರಚಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪಲಾಯನ ಮಾಡುವ ಪ್ರಯತ್ನ ಮಾಡಿದ್ದು ಸರಿಯಲ್ಲ, ನ್ಯಾಯಯುತವಾಗಿ ರಾಜೀನಾಮೆ ಸಲ್ಲಿಸಿ ಕಾನೂನು ಹೋರಾಟ ನಡೆಸಲಿ ಎಂದು ವಿಜಯೇಂದ್ರ ಹೇಳಿದರು. ಬಿಜೆಪಿ ಹೋರಾಟಕ್ಕೆ ಸಾಮಾಜಿಕ ಕಾರ್ಯಕರ್ತರೊಬ್ಬರು ನೀಡಿರುವ ದಾಖಲೆಗಳು ಮಾತ್ರ ಆಧಾರವೇ ಎಂದು ಕೇಳಿದ ಪ್ರಶ್ನೆಗೆ ತಡಬಡಿಸಿದ ವಿಜಯೇಂದ್ರ, ನಾವು ಬೆಂಗಳೂರಿನಿಂದ ಮೈಸೂರುವರೆಗೆ ಪಾದಯಾತ್ರೆ ನಡೆಸಿದ್ದು ನಿಮಗೆ ಕಾಣಿಸಲಿಲ್ಲವೇ ಎಂದು ಹೇಳಿಕೆ ಕೊಟ್ಟಿದ್ದಾರೆ.