ಬೆಂಗಳೂರು:- ಯುವಕರ ಗುಂಪೊಂದು ಯುವ ಕಾಂಗ್ರೆಸ್ ಅಧ್ಯಕ್ಷ ನಲಪಾಡ್ ಹೆಸರೇಳಿ ವಿದ್ಯಾರ್ಥಿ ಕಿಡ್ನ್ಯಾಪ್ ಮಾಡಿ ಕಿರುಕುಳ ಕೊಟ್ಟ ಘಟನೆ ಜರುಗಿದೆ.
ಬೆಂಗಳೂರಲ್ಲಿ ಯುವತಿ ಮೇಲೆ ಅತ್ಯಾಚಾರ ಕೇಸ್: ಪೊಲೀಸರಿಂದ ಆರೋಪಿಯ ಬಂಧನ!
ಈ ಸಂಬಂಧ 9 ಮಂದಿ ವಿರುದ್ಧ ಕೆಂಗೇರಿ ಠಾಣೆಯಲ್ಲಿ ಕಿಡ್ನಾಪ್ ಹಾಗೂ ಸುಲಿಗೆ ಮಾಡಿದ ಸಂಬಂಧ ದೂರು ದಾಖಲಿಸಿದ್ದು, ಪೊಲೀಸರು ತನಿಖೆ ಶುರು ಮಾಡಿದ್ದಾರೆ.
ದೂರುದಾರ ಜೀವನ್ ಜೈನ್ ಎಂಬ ವಿದ್ಯಾರ್ಥಿ ನಗರದ ಖಾಸಗಿ ಕಾಲೇಜಿನಲ್ಲಿ ಬಿಬಿಎ ಮೊದಲ ವರ್ಷದಲ್ಲಿ ವ್ಯಾಸಂಗ ಮಾಡ್ತಿದ್ದಾನೆ. ಈತ ಇವೆಂಟ್ ಒಂದಕ್ಕೆ ಅಂತ ಕಳೆದ ವರ್ಷ ಆಯುಷ್ ಶ್ರೀನಿವಾಸ್ ಎಂಬಾತನಿಂದ ಮೂರು ಲಕ್ಷ ಪಡೆದಿದುಕೊಂಡಿದ್ದನಂತೆ. ನಂತರ ಕಾರಣಾಂತರದಿಂದ ಹಣ ಕೊಡಲು ಆಗಿರಲಿಲ್ಲ ಎನ್ನಲಾಗಿದೆ.
ಹಣ ಕೊಡದೆ ಇದ್ದ ಕಾರಣಕ್ಕೆ ತನ್ನನ್ನು ಕಿಡ್ನಾಪ್ ಮಾಡಿ ನಗ್ನವಾಗಿಸಿ ವಿಡಿಯೋ ತೆಗೆದು ಬೆದರಿಕೆ ಹಾಕುತ್ತಿದ್ದಾರೆ. ಅಲ್ಲದೇ ನಾವು ನಲಪಾಡ್ ಹುಡುಗರು, ಹತ್ತು ಲಕ್ಷ ರೂಪಾಯಿ ಕೊಡಬೇಕು ಅಂತ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರಂತೆ.
ಯುವಕನ್ನನ್ನು ಕಿಡ್ನಾಪ್ ಮಾಡಿದ್ದ ತಂಡ ಆತನಿಂದ ಆರು ಲಕ್ಷ ರೂಪಾಯಿಯನ್ನು ಅಕೌಂಟ್ ಹಾಕಿಸಿಕೊಂಡಿದ್ದಲ್ಲದೆ, ಮತ್ತೆ ಹತ್ತು ಲಕ್ಷದವರೆಗೆ ಕೊಡಬೇಕು ಅಂತ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ವಿದ್ಯಾರ್ಥಿ ಉಲ್ಲೇಖ ಮಾಡಿದ್ದಾನೆ. ಘಟನೆ ಸಂಬಂಧ ಕೆಂಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.