ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಬಗ್ಗೆ ಜಸ್ಪ್ರೀತ್ ಬುಮ್ರಾ ಕೊನೆಗೂ ಮೌನ ಮುರಿದಿದ್ದಾರೆ.
ಕಳೆದ IPL ನಲ್ಲಿ ನಾಯಕ ರೋಹಿತ್ ಶರ್ಮಾ ಅವರನ್ನು ಪಟ್ಟದಿಂದ ಕೆಳಕ್ಕಿಳಿಸಿ ಹಾರ್ದಿಕ್ ಗೆ ನಾಯಕತ್ವ ನೀಡಿದ್ದು ಅಭಿಮಾನಿಗಳಿಗೆ MI ತಂಡ ಶಾಕ್ ನೀಡಿತ್ತು. ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಕಾರಣವಾದ ಈ ವಿಚಾರ ಬಳಿಕ ಮೈದಾನದಲ್ಲೂ ಪ್ರತಿಧ್ವನಿಸಿತು. ವಾಂಖೆಡೆ ಮೈದಾನದಲ್ಲೇ ಹಾರ್ದಿಕ್ ವಿರುದ್ದ ಜನರು ಕೂಗಿದರು. ಇದು ತಂಡದ ಪ್ರದರ್ಶನದ ಮೇಲೂ ಪರಿಣಾಮ ಬೀರಿತ್ತು. ಹತ್ತು ತಂಡಗಳ ಕೂಟದಲ್ಲಿ ಮುಂಬೈ ಕೊನೆಯದಾಗಿ ಕೂಟ ಮುಗಿಸಿತ್ತು.
ಬೆಂಗಳೂರಿನಲ್ಲಿ ಇಂದಿನಿಂದ ಮೂರು ದಿನ ವಿದ್ಯುತ್ ವ್ಯತ್ಯಯ: ನಿಮ್ ಏರಿಯಾನೂ ಇದೆಯಾ?
ಇದೀಗ ಮುಂಬೈ ಇಂಡಿಯನ್ಸ್ ತಂಡದ ಸ್ಟಾರ್ ಬೌಲರ್ ಜಸ್ಪ್ರಿತ್ ಬುಮ್ರಾ ಅವರು ಇದೀಗ ಈ ಘಟನೆಗಳ ಬಗ್ಗೆ ಮಾತನಾಡಿದ್ದಾರೆ.
ನಾವು ಇಂತಹ ಘಟನೆಗಳನ್ನು ಬೆಂಬಲಿಸುವುದಿಲ್ಲ. ಅದನ್ನು ನಾವು ಯಾರು ಬಯಸಿಲ್ಲ. ನಾವು ಹಾರ್ದಿಕ್ ಜತೆಗಿದ್ದೆವು. ಅವನಿಗೆ ಅಗತ್ಯವಿದ್ದಾಗ ಅವನ ಜತೆ ಮಾತನಾಡುತ್ತಿದ್ದೆವು. ಕೆಲವು ವಿಷಯಗಳು ನಮ್ಮ ನಿಯಂತ್ರಣದಲ್ಲಿ ಇರುವುದಿಲ್ಲ. ಇದೀಗ ಅದೆಲ್ಲಾ ಬದಲಾಗಿದೆ. ಟಿ20 ವಿಶ್ವಕಪ್ ಬಳಿಕ ಎಲ್ಲಾ ಬದಲಾಗಿದೆ. ಇದು ಪಯಣದ ಒಂದು ಭಾಗ. ನಾವು ಎಷ್ಟು ಬೆಂಬಲ ನೀಡಲು ಸಾಧ್ಯವೋ ಅಷ್ಟು ನೀಡಿದ್ದೇವೆʼ ಎಂದು ಬುಮ್ರಾ ಹೇಳಿಕೆ ಕೊಟ್ಟಿದ್ದಾರೆ.