ಬೆಂಗಳೂರು:- ನಗರದಲ್ಲಿ ರಸ್ತೆ ಕಾಮಗಾರಿಗಳ ಅರ್ಧಂಬರ್ಧ ಕಾಮಗಾರಿ ಜನರ ನಿದ್ದೆಗೆಡಿಸಿದೆ. ಗುಂಡಿ ಬಿದ್ದಿದ್ದ ರಸ್ತೆ ಸರಿಮಾಡುತ್ತೇವೆ ಅಂತಾ ಅಗೆದು ಬಿಟ್ಟ ಪಾಲಿಕೆ, ಇದೀಗ ಅರೆಬರೆ ಕಾಮಗಾರಿ ನಡೆಸಿ ನಿಲ್ಲಿಸಿರುವುದು ವಾಹನ ಸವಾರರಿಗೆ ಸಂಕಷ್ಟ ತಂದಿಟ್ಟಿದೆ.
ಪ್ರಾಸಿಕ್ಯೂಷನ್ ಅನುಮತಿ: ಜೋರಾಯ್ತು ಪ್ರತಿಭಟನೆ ಕಾವು, ಬೆಂಗಳೂರಿನಲ್ಲಿ ಪೊಲೀಸ್ ಕಟ್ಟೆಚ್ಚರ!
ನಗರದ ಹೊರಮಾವಿನ ವಿಜಯಬ್ಯಾಂಕ್ ಕಾಲೋನಿ ಪಕ್ಕದಲ್ಲಿರುವ ಸರ್ವೀಸ್ ರಸ್ತೆಯ ದುಸ್ಥಿತಿ ಹೇಳತಿರದು. ಗುಂಡಿಗಳಿಂದ ತುಂಬಿದ್ದ ರಸ್ತೆಗೆ ಟಾರ್ ಹಾಕುತ್ತೇವೆ ಅಂತಾ ಅಗೆದುಹೋಗಿದ್ದ ಪಾಲಿಕೆ ಮೂರು ತಿಂಗಳಾದರೂ ಇತ್ತ ತಿರುಗಿ ನೋಡಿಲ್ಲವಂತೆ. ಇದರಿಂದ ರಸ್ತೆ ತುಂಬ ಧೂಳು, ಕಲ್ಲು ತುಂಬಿ ವಾಹನ ಸವಾರರಿಗೆ ನಿತ್ಯ ನರಕ ದರ್ಶನವಾಗುತ್ತಿದೆ.
ಇನ್ನು ಈ ರಸ್ತೆಯಲ್ಲಿ ಸಿಮೆಂಟ್ ರೀತಿಯ ಧೂಳು ಬರುತ್ತಿದ್ದು, ಇದರಿಂದ ಅಕ್ಕಪಕ್ಕದ ಮನೆಗಳು, ಅಂಗಡಿಗಳಲ್ಲಿರುವ ಜನರು ನಿತ್ಯ ಸಂಕಷ್ಟ ಅನುಭವಿಸ್ತಿದ್ದಾರೆ. ಫುಟ್ ಪಾತ್, ರಸ್ತೆಬದಿ ನಿಲ್ಲಿಸಿದ ವಾಹನಗಳ ಜೊತೆಗೆ ರಸ್ತೆ ಬದಿಯ ಗಿಡ, ಮರಗಳು ಕೂಡ ಧೂಳಿನಿಂದ ತುಂಬಿಹೋಗಿದ್ದು, ಅತ್ತ ರಸ್ತೆ ಮೇಲೆ ಓಡಾಡಲು ವಾಹನ ಸವಾರರು ಪರದಾಡ್ತಿದ್ರೆ, ಇತ್ತ ಉಸಿರಾಟದ ಸಮಸ್ಯೆಯಿಂದ ನಿವಾಸಿಗಳು ಹೈರಾಣಾಗಿಬಿಟ್ಟಿದ್ದಾರೆ.
ರಸ್ತೆ ಕಾಮಗಾರಿ ಶುರು ಮಾಡಿ ಅಂತಾ ಹಲವು ಭಾರೀ ಪಾಲಿಕೆಗೆ ದೂರು ನೀಡಿದ್ರೂ ಕಾಮಗಾರಿ ಆರಂಭವಾಗದೇ ಇರೋದು ಜನರನ್ನ ಸಂಕಷ್ಟಕ್ಕೆ ದೂಡಿದೆ.