ಆನೇಕಲ್:- ಪತ್ನಿ ಕೊಲೆ ಮಾಡಿದ ಆರೋಪಿ ಪತಿ ನೇಣಿಗೆ ಶರಣಾದ ಘಟನೆ ಬನ್ನೇರುಘಟ್ಟ ರಸ್ತೆಯ ದೊಡ್ಡಕಮ್ಮನಹಳ್ಳಿಯಲ್ಲಿ ಜರುಗಿದೆ.
Hubballi: ಖಾಸಗಿ ವೈದ್ಯರ ಕ್ಲಿನಿಕ್ ಬಂದ್, ಕಿಮ್ಸ್ ಆಸ್ಪತ್ರೆ ಒಪಿಡಿ ಒಪನ್: ವೈದ್ಯರ ಆಕ್ರೋಶ
ಮಹೇಶ್ ನೇಣಿಗೆ ಶರಣಾದ ವ್ಯಕ್ತಿ ಎನ್ನಲಾಗಿದೆ. ನಿನ್ನೆ ರಾತ್ರಿ ಮಹೇಶ್ ಪತ್ನಿ ಮೀನಾಳನ್ನ ರಾಡ್ ನಿಂದ ಹೊಡೆದು ಕೊಲೆ ಮಾಡಿದ್ದ. ಕೊಲೆ ಮಾಡಿ ಬಳಿಕ ಪತಿ ಮಹೇಶ್ ಮನೆಯಿಂದ ಎಸ್ಕೇಪ್ ಆಗಿದ್ದ. ಕೊಲೆಯಾದ ಮೀನಾ ಮಹೇಶ್ ಗೆ ಎರಡನೇ ಪತ್ನಿ ಎನ್ನಲಾಗಿದೆ.
ಮಹೇಶ್ ಕ್ರೇನ್ ಆಪರೇಟರ್ ಆಗಿದ್ದ. ನಂದಿ ವುಡ್ಸ್ ಅಪಾರ್ಟ್ಮೆಂಟ್ ಸಮೀಪದಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾರೆ. ಪತ್ನಿಯನ್ನು ಕೊಲೆ ಮಾಡಿ ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ.
ಸ್ಥಳಕ್ಕೆ ಹುಳಿಮಾವು ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.