ಚಾಮರಾಜನಗರ:- 2 ನೇ ಶ್ರಾವಣ ಶನಿವಾರದಂದು ಚಾಮರಾಜನಗರ ತಾಲೂಕಿನ ರಾಮಸಮುದ್ರ ಬಳಿ ಇರುವಂತಹ ಹರಳುಕೋಟೆ ಆಂಜನೇಯ ದೇವಾಲಯದಲ್ಲಿ ವಿಶೇಷ ಪೂಜೆ ಕೈಂಕಾರ್ಯ ನಡೆಯಿತು.
ರಾಮಸಮುದ್ರ ಹಾಗೂ ಕರಿನಂಜನಪುರ ನಡುವೆ ಇರುವಂತಹ ಹರಳುಕೋಟೇಯ ಅಭಯ ಪ್ರಧಾನ ಆಂಜನೇಯಸ್ವಾಮಿ ದೇವಾಲಯದಲ್ಲಿ ಶನಿವಾರ ಬೆಳಿಗ್ಗೆಯಿಂದಲೂ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಭಕ್ತಿಭಾವದಿಂದ ಪೂಜೆ ಸಲ್ಲಿಸಿದರು.
ಸಂಜೆ 5 ಗಂಟೆ ವೇಳೆಯಲ್ಲೂ ಕೂಡ ಅಪಾರ ಸಂಖ್ಯೆಯಲ್ಲಿ ಆಗಮಿಸಿದ ಆಂಜನೇಯ ಭಕ್ತರು ಹೂವು ಹಣ್ಣು ಕಾಯಿ ಇಟ್ಟು ಪೂಜೆ ಸಲ್ಲಿಸಿದ್ರು. ಕೆಲ ಭಕ್ತರು ಹರಕೆ ಹೊತ್ತು ಪಂಚಾಮೃತ ಅಭಿಷೇಕ ಮಾಡಿಸಿ ವಿಶೇಷ ಪೂಜೆಗೈದು ಆಗಮಿಸಿದ್ದ ಆಪಾರ ಭಕ್ತರಿಗೆ ವಿತರಿಸಿ ಆಂಜನೇಯನ ಕೃಪಾಶೀರ್ವಾದ ಪಡೆದು ಪುನೀತರಾದರು.