ಬೆಂಗಳೂರು:– ಕೊಡಿಗೇಹಳ್ಳಿ ಟೆಕ್ಕಿ ಮಿಸ್ಸಿಂಗ್ ಪ್ರಕರಣ ಸಂಬಂಧ ಈಗ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಗಂಡನನ್ನ ಹುಡುಕಿಕೊಡಿ ಎಂದು ಕಣ್ಣೀರಿಡುತ್ತಿದ್ದ ಪತ್ನಿಗೆ ಆಕೆಯ ಪತಿಯೇ ಉತ್ತರ ನೀಡಬೇಕಿದೆ. ಯಸ್ ಆತ ಮಿಸ್ಸಿಂಗ್ ಆಗಿರಲಿಲ್ಲ ಅಸಲಿ ಸಂಗತಿಯೇ ಬೇರೆ ಅದರ ಡಿಟೇಲ್ಸ್ ಇಲ್ಲಿದೆ.
ರೇಣುಕಾಸ್ವಾಮಿ ಕೊಲೆ ಕೇಸ್: 17 ಆರೋಪಿಗಳ ಪ್ರೊಫೈಲ್ ರೆಡಿ ಮಾಡಲು ಖಾಕಿ ಸಿದ್ದತೆ!
ಇದೇ ತಿಂಗಳು ಆರನೇ ತಾರೀಕು ಟೆಕ್ಕಿ ವಿಪುಲ್ ಗುಪ್ತಾ ಎಂಬಾತ ಮಿಸ್ಸಿಂಗ್ ಆಗಿದ್ದ. ಮನೆಯಿಂದ ಹೊರ ಹೋದವನು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಎಸ್ಕೇಪ್ ಆಗಿದ್ದ. ಆಕೆಯ ಪತ್ನಿ ಕೂಡ ಪ್ರತಿದಿನ ಪತಿಯನ್ನ ಹುಡುಕಿಕೊಡಿ ಎಂದು ಗೋಗರೆಯುತ್ತಿದ್ದಳು. ಕೊನೆಗೆ ಅಸಲಿಯತ್ತು ಏನೇಂದು ತಿಳಿದುಬಂದಿದೆ.
ವಿಪುಲ್ ಗುಪ್ತಾ ಹಾಗು ಪತ್ನಿ ಶ್ರೀಪರ್ಣ ದತ್ತ ಇಬ್ಬರೂ ವೃತ್ತಿಯಲ್ಲಿ ಟೆಕ್ಕಿಗಳು . ಇಬ್ಬರು ಮಕ್ಕಳೂ ಇದ್ದಾರೆ . ವಿಪುಲ್ ಇದ್ದಕ್ಕಿಂದಂತೆ ಮಿಸ್ಸಿಂಗ್ ಆಗಿದ್ದ ಹಿನ್ನಲೆ ಪ್ರತಿದಿನ ಫೇಸ್ ಬುಕ್ ಮೂಲಕ ಲೈವ್ ಬಂದು ಆತನನ್ನ ಹುಡುಕಿಕೊಡಿ ಎಂದು ಗೋ್ರೆಯುತ್ತಿದ್ಲು. ಆತನ ಸಂಪೂರ್ಣ ಮಾಹಿತಿಯನ್ನ ಪೋಸ್ಟ್ ಮಾಡ್ತಿದ್ಲು. ಕೊಡಿಗೇಹಳ್ಳಿ ಪೊಲೀಸರಿಗೂ ದೂರು ನೀಡಿ ಪೊಲೀಸರು ಸರಿಯಾಗಿ ವರ್ಕ್ ಮಾಡ್ತಿಲ್ಲ ಎಂದು ಆರೋಪ ಮಾಡಿದ್ಲು. ಆದ್ರೆ ಪೊಲೀಸರಿಗೆ ಅದಾಗಲೆ ಮೈಂಡ್ ವರ್ಕ್ ಆಗಿತ್ತು. ಇದು ಮಿಸ್ಸಿಂಗ್ ಅಲ್ಲ ಇಂಟನ್ಷನಲೀ ಆತ ಎಸ್ಕೇಪ್ ಆಗಿದ್ದ ಎಂದು
ವಿಪುಲ್ ಹಾಗು ಶ್ರೀಪರ್ಣ ದತ್ತಾಗೆ ಸುಮಾರು ಹತ್ತು ವರ್ಷಗಳ ಏಜ್ ಗ್ಯಾಪ್ ಇದೆ. ಆಕೆಗೆ 43 ಈತನಿಗೆ 34 . ಶ್ರೀಪರ್ಣ ದತ್ತಾಳಿಗೆ ಇದು ಎರಡನೇ ಮದ್ವೆಯಂತೆ. ಏಜ್ ಗ್ಯಾಪ್ ಇದ್ದ ಹಿನ್ನಲೆ ಸಹಜವಾಗಿ ಹೊಂದಾಣಿಕೆ ಸಾಧ್ಯವಾಗದೇ ಇರಬಹುದು.ಆಕೆಯ ತೀವ್ರ ಒತ್ತಡದಿಂದಾಗಿ ಪೊಲೀಸರು ವಿಶೇಷ ತಂಡವನ್ನ ರಚನೆ ಮಾಡಿ ಟೆಕ್ಕಿಯ ಹುಡಯಕಾಟಕ್ಕೆ ಮುಂದಾಗಿದ್ದರು. ನಂತರ ಒಂದಷ್ಟು ಸಿಸಿಟಿವಿ ಹಾಗು ಟೆಕ್ನಿಕಲ್ ಎವಿಡೆನ್ಸ್ ಮೂಲಕ ವಿಪುಲ್ ಗುಪ್ತಾ ದೆಹಲಿಯ ನೋಯ್ಡಾದಲ್ಲಿ ಪತ್ತೆಯಾಗಿದ್ದಾನೆ. ಇನ್ನು ಆತನನ್ನ ವಿಚಾರಣೆ ನಡೆಸಿದಾಗ ಪೊಲೀಸ್ ಅಂದುಕೊಂಡಿದ್ದು ನಿಜವಾಗಿತ್ತು. ಯಸ್ ಆತ ಪತ್ನಿಯ ಕಾಟಕ್ಕೇ ಮನೆ ಬಿಟ್ಟು ಹೋಗಿದ್ದ. ಪತ್ನಿ ತನ್ನನ್ನ ಕಂಟ್ರೋಲ್ ಮಾಡ್ತಾಳೆ ತಾನೇನೆ ಮಾಡಿದ್ರು ಅದು ತಪ್ಪು ಎಂಬರ್ಥದಲ್ಲಿ ನಿಂದನೆ ಮಾಡ್ತಾಳೆ .ಅದು ಪೊಸೇಸೀವ್ ನೆಸ್ಸೋ ಅಥವಾ ಅನುಮಾನವೋ ಗೊತ್ತಿಲ್ಲ .. ಆದರೆ ಆಕೆಯ ಜೊತೆ ಬಾಳ್ವೆ ಮಾಡೋದು ಕಷ್ಟವಾಗ್ತಿದೆ . ಅಷ್ಟಲ್ಲದೆ ಮನೆಗೆ ಸಿಸಿಟಿವಿಗಳನ್ನೂ ಹಾಕಿಸಿದ್ದಾಳೆಂದು ಆರೋಪಿಸಿದ್ದಾನೆ. ಇನ್ನು ಪೊಲೀಸ್ ಠಾಣೆಯಲ್ಲಿ ಕರೆ ತಂದ ವೇಳೆ ವಿಪುಲ್ ಹೇಳಿಕೆಗೆ ಒಂದಷ್ಟು ಠಾಣೆಯಲ್ಲಿ ಹೈಡ್ರಾಮ ನಡೆದಿತ್ತು. ಪತ್ನಿ ಶ್ರೀಪರ್ಣ ದತ್ತ ಕೂಡ ತಲೆ ತಿರುಗಿ ಕೆಳಬಿದ್ದಿದ್ಲು .. ತಕ್ಷಣ ಆಕೆಯನ್ಮ ಆಸ್ಪತ್ರೆಗೆ ದಾಖಲಿಸಲಾಗಿದೆ.