ಬೆಂಗಳೂರು:- ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಸಂಬಂಧ ಪೊಲೀಸರ ತನಿಖೆ ಅಂತಿಮಘಟ್ಟ ತಲುಪಿದೆ. ಪ್ರಕರಣ ಸಂಬಂಧ ನಟ ದರ್ಶನ್ ಸೇರಿ 17 ಆರೋಪಿಗಳ ಪ್ರೊಫೈಲ್ ಸಿದ್ಧಪಡಿಸಲು ಮುಂದಾಗಿದ್ದಾರೆ. ಹಾಗಾದ್ರೆ ಪ್ರೊಫೈಲ್ ಹೇಗಿರಲಿದೆ ಏನಲ್ಲಾ ಮಾಹಿತಿ ಇರಲಿದೆ ಗೊತ್ತಾ ಈ ಸ್ಟೋರಿ
ಕೇಂದ್ರದಿಂದ ಅನುದಾನ ತಾರತಮ್ಯ: ವರದಿ ಸಿದ್ದಪಡಿಸೋದಕ್ಕೆ CM ಸಿದ್ದರಾಮಯ್ಯ ಸೂಚನೆ..!
ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಸಂಬಂಧ ಪೊಲೀಸರು ತನಿಖೆಯನ್ನ ಮತ್ತಷ್ಟು ಚುರುಕುಗೊಳಿಸಿದ್ದಾರೆ. ಈಗಾಗಲೇ ಪ್ರಕರಣದ ತನಿಖೆ ಅಂತಿಮ ಘಟ್ಟ ತಲುಪಿದ್ದು, ಆರೋಪಿಗಳ ಪ್ರೊಫೈಲ್ ಸಿದ್ದಪಡಿಸಲು ಪೊಲೀಸರು ಮುಂದಾಗಿದ್ದಾರೆ. ಕೊಲೆ ಪ್ರಕರಣದಲ್ಲಿ ಭಾಗಿಯಾದ ನಟ ದರ್ಶನ್, ಪವಿತ್ರಾಗೌಡ ಸೇರಿ ಎಲ್ಲ 17 ಆರೋಪಿಗಳ ಪ್ರತ್ಯೇಕ ಪ್ರೋಪೈಲ್ ಸಿದ್ದಪಡಿಸಿ ವರದಿ ತಯಾರಿಸಲು ಪೊಲೀಸರು ಮುಂದಾಗಿದ್ದಾರೆ.
ಪೊಲೀಸರು ತಯಾರು ಮಾಡ್ತಿರೋ ಪ್ರೋಪೈಲ್ ನಲ್ಲಿ ಆರೋಪಿಗಳ ಸಂಪೂರ್ಣ ಮಾಹಿತಿ ಇರಲಿದೆಯಂತೆ. ಆರೋಪಿಗಳು ಹುಟ್ಟಿದ್ದು ಯಾವಾಗ, ಆರೋಪಿಗಳ ಆದಾಯ ಏನು..? ಏನು ಕೆಲಸ ಮಾಡ್ತಿದ್ದಾರೆ. ಯಾವ ವಿಳಾಸದಲ್ಲಿ ವಾಸವಾಗಿದ್ದಾರೆ ಅಂತಾ ಒಬ್ಬೊಬ್ಬ ಆರೋಪಿ ಬಗ್ಗೆಯೂ ಪ್ರತ್ಯೇಕ ಪ್ರೋಪೈಲ್ ಸಿದ್ಧ ಮಾಡ್ತಿದ್ದಾರೆ. ಅಲ್ಲದೆ ಆರೋಪಿಗಳ ಮೇಲಿರುವ ಕೇಸ್ ಗಳ ಬಗ್ಗೆಯೂ ಮಾಹಿತಿ ಸಂಗ್ರಹಿಸಿದ್ದಾರೆ. ಇದರಲ್ಲಿ ನಟ ದರ್ಶನ್ ಮೇಲೆ ದಾಖಲಾಗಿರೋ ಎಲ್ಲಾ ಕೇಸ್ ಗಳನ್ನ ಕೂಡ ಪ್ರೋಪೈಲ್ ನಲ್ಲಿ ತರಲು ಪೊಲೀಸರು ಚಿಂತನೆ ನಡೆಸಿದ್ದಾರೆ.
ಇನ್ನೂ ಪ್ರಕರಣದ ತನಿಖೆ ಬಹುತೇಕ ಅಂತಿಮಘಟ್ಟ ತಲುಪಿದ್ದು, ಬಹುತೇಕ ಎಫ್ಎಸ್ಎಲ್ ವರದಿಗಳು ಪೊಲೀಸರ ಕೈಸೇರಿವೆಯಂತೆ. ಅದ್ರೆ ಹೈದರಾಬಾದ್ ಗೆ ಕಳಿಸಲಾಗಿದ್ದ, ಕೆಲವು ವರದಿಗಳು ಬರಬೇಕಿದ್ದು, ಅವು ಬಂದ ನಂತರ ಚಾರ್ಜ್ ಶೀಟ್ ಸಲ್ಲಿಸಲಾಗುವುದು ಅಂತಾ ಕಮೀಷನರ್ ದಯಾನಂದ್ ಪ್ರತಿಕ್ರಿಯಿಸಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧ ಪಟ್ಟಂತೆ..ಆರೋಪಿಗಳ ಹೇರ್ ಸ್ಯಾಂಪಲ್ ರಿಪೋರ್ಟ್
ಪೊಲೀಸರ ಕೈ ಸೇರಿದೆ..ಹಾಗಾಗಿ ಇದೇ ಅರೋಪಿಗಳು ಕಾರಿನಲ್ಲಿ ರೇಣುಕಾಸ್ವಾಮಿ ಶವ ಸಾಗಾಟ ಮಾಡಿರೋದು ಧೃಢವಾಗಿದೆ..ಶವ ಸಾಗಿಸಿದ್ದ ಕಾರಿನ ಪರಿಶೀಲನೆ ವೇಳೆ ಕೂದಲು ಪತ್ತೆಯಾಗಿತ್ತು..ಅದನ್ನ ಪೊಲೀಸರು ಎಫ್ಎಸ್ಎಲ್ ಗೆ ಕಳುಹಿಸಿದ್ದರು..ಸದ್ಯ ಅದರ ರಿಪೋರ್ಟ್ ಪೊಲೀಸರ ಕೈಸೇರಿದ್ದು..ಶವ ಸಾಗಿಸಿದ್ದ ಅರೋಪಿಗಳಾದ ನಿಖಿಲ್,ಕಾರ್ತಿಕ್ ಹಾಗೂ ರಾಘವೇಂದ್ರರ ಕೂದಲು ಜೊತೆಗೆ ಸಿಕ್ಕ ಸ್ಯಾಂಪಲ್ಸ್ ಮ್ಯಾಚ್ ಆಗಿದೆ.
ಒಂದು ಕಡೆ ಪೊಲೀಸರ ತನಿಖೆ ಚುರುಕುಗೊಳ್ತಿದ್ದಂತೆ, ಇನ್ನೊಂದೆಡೆ ಜೈಲಿನಲ್ಲಿರುವ ದರ್ಶನ್ ಗೆ ಟೆನ್ಷನ್ ಹೆಚ್ಚಾಗ್ತಿದೆ ಎನ್ನಲಾಗಿದೆ.
ಎಫ್ಎಸ್ಎಲ್ ರಿಪೋರ್ಟ್ ಹಾಗೂ ಹಲವು ಮಂದಿ ಸಾಕ್ಷ್ಯಗಳು 164 ಹೇಳಿಕೆ ದಾಖಲಿಸಿದ್ದು, ದರ್ಶನ್ ಎದೆಬಡಿತ ಹೆಚ್ಚಿಸಿದೆ ಎನ್ನಲಾಗಿದೆ. ಈ ವಿಚಾರವನ್ನ ಇತ್ತೀಚಿಗೆ ದರ್ಶನ್ ಭೇಟಿಯಾದ ಅಭಿಷೇಕ್ ಅಂಬರೀಶ್, ಧನ್ವೀರ್ ಹಾಗೂ ಚಿಕ್ಕಣ್ಣ ಹಾಗೂ ಸ್ನೇಹಿತರ ಜೊತೆ ಹೇಳಿಕೊಂಡಿದ್ದಾನೆ ಎನ್ನಲಾಗಿದೆ.
ಈ ವೇಳೆ ಅಭಿಷೇಕ್ ಅಂಬರೀಶ್ ಮುಂದಿನ ಕಾನೂನು ಹೋರಾಟದ ಬಗ್ಗೆ ದರ್ಶನ್ ಗೆ ಧೈರ್ಯ ತುಂಬಿದ್ರು ಎನ್ನಲಾಗಿದೆ. ಅಲ್ಲದೇ ಕೊಲೆ ಕೇಸಲ್ಲಿ ಧನ್ವೀರ್ ಹಾಗೂ ಚಿಕ್ಕಣ್ಣ ಸಾಕ್ಷ್ಯಗಳಾಗಿದ್ದು, ಇಬ್ಬರು ಕೂಡ ಜೈಲಿನಲ್ಲಿ ನಟ ದರ್ಶನ್ ಭೇಟಿಯಾಗಿ ಬಂದಿದ್ದಾರೆ. ಅದ್ರಿಂದ ಪೊಲೀಸರು ಕೂಡ ಇಬ್ಬರ ಮೇಲೆ ನಿಗಾ ವಹಿಸಲು ಮುಂದಾಗಿದ್ದಾರೆ