ವಿಜಯಪುರ:– ಬಸನಗೌಡ ಪಾಟೀಲ್ ಯತ್ನಾಳ್ ಅವರು ಸಿಎಂ ಸ್ಥಾನದ ಬಗ್ಗೆ ಸ್ಪೋಟಕ ಹೇಳಿಕೆ ಕೊಟ್ಟಿದ್ದಾರೆ.
ಸಿಎಂ ಸ್ಥಾನದಿಂದ ಸಿದ್ದು ಇಳಿಸಿ ಜಮೀರ್ ಮುಖ್ಯಮಂತ್ರಿ ಆಗುತ್ತಾರೆ. ಬಳಿಕ ಸಿದ್ದರಾಮಯ್ಯರನ್ನು ಅವರ ಮನೆಯಲ್ಲಿ ಚಹಾ ಕೊಡುವುದಕ್ಕೆ ಇಟ್ಟುಕೊಳ್ಳುತ್ತಾರೆ ಎಂದು ಹೇಳಿಕೆ ಕೊಟ್ಟಿದ್ದಾರೆ.
ಸಂಚಲನ ಮೂಡಿಸಿದ ನಗರಸಭೆ ಆಸ್ತಿ ಹಗರಣ: ಮಾಜಿ ಅಧ್ಯಕ್ಷೆ ಸೇರಿ ಹಲವರಿಗೆ ಶುರುವಾಯ್ತು ನಡುಕ!
ಭಾರತದಲ್ಲಿ ಮುಸ್ಲಿಂರ ಸಂಖ್ಯೆ 50% ಆದರೆ ಸಿದ್ದರಾಮಯ್ಯರನ್ನು ಮುಖ್ಯಮಂತ್ರಿ ಸ್ಥಾನದಿಂದ ಒದ್ದು ಇಳಿಸಿ ಜಮೀರ್ ಅಹಮದ್ ಖಾನ್ ಮುಖ್ಯಮಂತ್ರಿ ಆಗುತ್ತಾರೆ ಎಂದರು.
ಈ ವಿಚಾರವನ್ನು ಸಿದ್ದರಾಮಯ್ಯ ಅವರು ತಲೆಯಲ್ಲಿ ಇಟ್ಟಿಕೊಳ್ಳಿ ಎಂದು ಕಿಡಿಕಾರಿದ್ದಾರೆ. ಮುಂದಿನ ಜನ್ಮದಲ್ಲಿ ನಾ ಮುಸ್ಲಿಂ ಆಗಿ ಹುಟ್ಟುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಸಿದ್ದರಾಮಯ್ಯನವರು ಮುಂದಿನ ಜನ್ಮ ನೀವು ಹುಟ್ಟಿದರಲ್ಲಾ? ದೇವರು ನಿಮ್ಮಂಥವರನ್ನೇಲ್ಲಾ ಹೇಗೆ ಹುಟ್ಟಿಸುತ್ತಾನೆ. ಸಾಕಾಗಿದೆ ಕೇವಲ ಮುಸ್ಲಂರ ಕೆಲಸ ಮಾಡಿದ್ದೀರಿ ಎಂದು ಹೇಳಿದ್ದಾರೆ.
ಮುಸ್ಲಿಂ ಓಲೈಕೆಯಿಂದ ನಿಮ್ಮ ದೇವರ ಗುಡಿಗಳು ಉಳಿಯೋದಿಲ್ಲ. ಯಾವ ದೇವರಿಗೆ ಹೋಗಿ ಕೈ ಮುಗಿಯುವವರಿದ್ದೀರಿ. 2047ಕ್ಕೆ ಭಾರತವನ್ನ ನಾವು ಇಸ್ಲಾಂ ರಾಷ್ಟ್ರವನ್ನಾಗಿ ಮಾಡುತ್ತೇವೆಂದು ಹೇಳುತ್ತಾರೆ. ಕಾರಣ ನೀವು ಒಂದೇ ಮದುವೆ ಆಗೋದು, ಎರಡೇ ಮಕ್ಕಳು. ಅವರು ಐದು ಮದುವೆ ಆಗುತ್ತಾರೆ. ಇಪ್ಪತ್ತೈದು ಮಕ್ಕಳು ಮಾಡುತ್ತಾರೆ ಎಂದು ವಾಗ್ದಾಳಿ ಮಾಡಿದ್ದಾರೆ.