ವಿಜಯಪುರ:- ಸಿನಿಮಾ ಸ್ಡೈಲ್ನಲ್ಲಿ ಪಂಚ್ ಕೊಟ್ಟು ಕಾರು ಚಾಲಕನ ಮೇಲೆ ಟ್ರಾಫಿಕ್ PSI ಹಲ್ಲೆ ನಡೆಸಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ತುಂಗಭದ್ರಾ ಡ್ಯಾಂ ಗೇಟ್ ಕಾರ್ಯ ಯಶಸ್ವಿಯಾದರೆ ಪ್ರತಿ ಕಾರ್ಮಿಕನಿಗೆ 50 ಸಾವಿರ- ಜಮೀರ್ ಘೋಷಣೆ
ವಿಜಯಪುರ ನಗರದ ಬೇಗಂ ತಲಾಬ್ ಪ್ರವೇಶ ದ್ವಾರದ ಬಳಿ ಘಟನೆ ನಡೆದಿದೆ. ಓವರ್ ಸ್ಪೀಡ್ ಡ್ರೈವಿಂಗ್ ವಿಚಾರದಲ್ಲಿ ಟ್ರಾಫಿಕ್ ಪಿಎಸ್ಐ ನಿಖಿಲ್ ಕಾಂಬ್ಳೆ ಹಾಗೂ ಕಾರು ಚಾಲಕನ ನಡುವೆ ಗಲಾಟೆ ಆಗಿದೆ. ಹಲ್ಲೆಗೊಳಗಾದ ಕಾರು ಚಾಲಕನ ಹೆಸರು ತಿಳಿದು ಬಂದಿಲ್ಲ.
ಕಾರು ಚಾಲಕನಿಗೆ ಅವಾಚ್ಯ ಶಬ್ಧದಿಂದ ನಿಂದಿಸಿ ಪಿಎಸ್ಐ ಹಲ್ಲೆ ನಡೆಸಿದ್ದಾರೆ. ಚಾಲಕನಿಗೆ ಸಿನಿಮಾ ಸ್ಡೈಲ್ನಲ್ಲಿ ಪಂಚ್ ಮಾಡಿ ಗೂಂಡಾ ವರ್ತನೆ ತೋರಿಸಿದ್ದಾರೆ. ಗೂಂಡಾಗಿರಿ ಯಾಕೆ ಮಾಡ್ತಿರಾ? ಎಂದು ಪ್ರಶ್ನೆ ಮಾಡಿದ ಕಾರ್ ಚಾಲಕನಿಗೆ ಪಿಎಸ್ಐ ಗೂಸಾ ನೀಡಿದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.