ವಿಜಯಪುರ:-ಉಲ್ಟಾ ಧ್ವಜ ಹಾರಿಸುವ ಮೂಲಕ ಪುರಸಭೆ ಅಧಿಕಾರಿಗಳು ರಾಷ್ಟ್ರದ್ವಜಕ್ಕೆ ಅಪಮಾನ ಮಾಡಿದ ಘಟನೆ ಜರುಗಿದೆ.
ದೇಶದ್ರೋಹಿ ಮನಸ್ಥಿತಿಯ ಪೇದೆಗೆ ಸಿಎಂ ಪದಕ: ಆಕ್ರೋಶ ಹೊರ ಹಾಕಿದ ವಿಜಯೇಂದ್ರ!
ಧ್ವಜ ಹಾರಿಸುವಾಗಲು ಗಮನಕ್ಕೆ ಬಾರದ ಹಿನ್ನೆಲೆ, ಸತತವಾಗಿ ೧೦ ಗಂಟೆ ಕಳೆದರೂ ಅಧಿಕಾರಿಗಳು ದ್ವಜ ಸರಿಪಡಿಸಿಲ್ಲ. ಹೀಗಾಗಿ ಸಿಂದಗಿ ತಾಲೂಕಿನ ಪುರಸಭೆ ಅಧಿಕಾರಿಗಳು ರಾಷ್ಟ್ರದ್ವಜಕ್ಕೆ ಅಪಮಾನ ಮಾಡಿದ್ದಾರೆ.
ಸ್ಥಳೀಯರು ಫೋಟೊ ತೆಗೆದುಕೊಳ್ಳುವಾಗ ಗಮನಕ್ಕೆ ಬಂದ ಹಿನ್ನೆಲೆ ಕೂಡಲೇ ದ್ವಜ ಕೆಳಕ್ಕೆ ಇಳಿಸಲು ಸಿಬ್ಬಂದಿ ಮುಂದಾದರು. ಸಿಂದಗಿ ಪಟ್ಟಣದಲ್ಲೇ ನಡೆದ ಅಚಾತುರ್ಯ ಇದಾಗಿದ್ದು, ಅಧಿಕಾರಿಗಳ ಬೆಜವಾಬ್ದಾರಿಗೆ ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ.
ಅಧಿಕಾರಿಗಳ ವಿರುದ್ಧ ಕ್ರಮಕ್ಕೆ
ಪೊಲೀಸ್ ಇಲಾಖೆ ಮುಂದಾಗುತ್ತಾ ಕಾದುನೋಡಬೇಕಾಗಿದೆ.