ರಾಮನಗರ: ಚುನಾವಣೆ ಘೋಷಣೆಗೂ ಮುನ್ನವೇ ಚನ್ನಪಟ್ಟಣದಲ್ಲಿ ಉಪಚುನಾವಣೆ ಕಾವು ಹೆಚ್ಚಾಗಿದೆ. ಶತಾಯಗತಾಯವಾಗಿ ಕ್ಷೇತ್ರ ಗೆಲ್ಲಲು ನಿರಂತರ ಪ್ರವಾಸ ಕೈಗೊಳ್ಳುತ್ತಿರುವ ಡಿಸಿಎಂ ಡಿಕೆಶಿ ಇಂದೂ ಕೂಡಾ ಚನ್ನಪಟ್ಟಣದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಧ್ವಜಾರೋಹಣ ನೆರವೇರಿಸಿದರು.
ಈ ಮೂಲಕ ಈ ಹಿಂದೆ 6 ವರ್ಷ ಕ್ಷೇತ್ರದ ಶಾಸಕರಾಗಿದ್ದ ಕೇಂದ್ರ ಸಚಿವ ಹೆಚ್ಡಿಕೆ ಒಂದು ಬಾರಿಯೂ ಕ್ಷೇತ್ರದಲ್ಲಿ ಧ್ವಜಾರೋಹಣ ಮಾಡಿಲ್ಲ ಎಂಬ ವಿಚಾರವನ್ನು ಇಟ್ಟುಕೊಂಡು ಹೆಚ್ಡಿಕೆಗೆ ಟಕ್ಕರ್ ಕೊಟ್ಟರು. ಇನ್ನೂ ಡಿಕೆಶಿ ಜೊತೆ ಮಾಜಿ ಸಚಿವ, ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ವೇದಿಕೆ ಹಂಚಿಕೊಂಡಿದ್ದು ಮತ್ತಷ್ಟು ಕುತೂಹಲ ಹೆಚ್ಚಿಸಿದೆ.
ಬಾಳೆ ಎಲೆಯಲ್ಲಿ ಊಟ ಮಾಡುತ್ತೀರಾ.? ಹಾಗಾದ್ರೆ ಈ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳಲೇಬೇಕು
ಇನ್ನೂ ಚನ್ನಪಟ್ಟಣ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ರಾಜಕೀಯ ಬದ್ಧವೈರಿಗಳಾದ ಡಿಸಿಎಂ ಡಿಕೆಶಿ ಹಾಗೂ ಮಾಜಿ ಸಚಿವ ಸಿಪಿವೈ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರು. ಡಿಕೆಶಿಯನ್ನ ಕೈಮುಗಿದು ಸಿಪಿವೈ ಸ್ವಾಗತ ಮಾಡಿದ್ದನ್ನು ಹೊರತುಪಡಿಸಿದರೆ ಯಾವುದೇ ಮಾತುಗಳನ್ನಾಡದೇ ಮೌನವಾಗಿ ಕುಳಿತಿದ್ದರು. ಸಿಪಿವೈ ದೆಹಲಿಯಿಂದ ಬಂದ ಬಳಿಕ ಡಿಕೆಶಿ ಜೊತೆ ವೇದಿಕೆ ಹಂಚಿಕೊಂಡಿದ್ದು ರಾಜಕೀಯ ಕುತೂಹಲವನ್ನು ಹೆಚ್ಚಿಸಿದೆ.