ಮಂಡ್ಯ: ರೈತರಿಗೆ ನಾಟಿ ಮಾಡುವುದನ್ನು ಹೇಳಿಕೊಡಬೇಕೇ? ಬಹುಶಃ ರೈತರಿಗೆ ಹೊಸ ಮಾದರಿಯ ನಾಟಿ ಪದ್ಧತಿ ಕಲಿಸಲು ಕೇಂದ್ರ ಸಚಿವರು ಮುಂದಾಗಿರಬಹುದು ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನು ಟೀಕಿಸಿದರು.
ಮಂಡ್ಯ ಜನರಿಗೆ ಹುಟ್ಟುತ್ತಲೇ ಭತ್ತ, ಕಬ್ಬು ನಾಟಿ ಮಾಡುವುದು ಗೊತ್ತು. ಕುಮಾರಸ್ವಾಮಿಯವರು ಕೆಲವರನ್ನು ಮೆಚ್ಚಿಸಲು ನಾಟಿ ಕಾರ್ಯ ಮಾಡಿರಬಹುದು. ರೈತರ ವಿಚಾರದಲ್ಲಿ ರಾಜಕೀಯ ಮಾಡುವ ಅವಶ್ಯಕತೆ ಇಲ್ಲ’’ ಎಂದು ಸುದ್ದಿಗೋಷ್ಠಿಯಲ್ಲಿ ಲೇವಡಿ ಮಾಡಿದರು. ಮಂಡ್ಯದ ಸೀತಾಪುರ ಗ್ರಾಮದಲ್ಲಿ ಎಚ್ಡಿಕೆ ರೈತ ಮಹಿಳೆಯರೊಂದಿಗೆ ಭತ್ತ ನಾಟಿ ಮಾಡಿರುವ ವಿಚಾರವಾಗಿ ಸಚಿವರು ವ್ಯಂಗ್ಯ ಮಾಡಿದ್ದಾರೆ.
ಬಾಳೆ ಎಲೆಯಲ್ಲಿ ಊಟ ಮಾಡುತ್ತೀರಾ.? ಹಾಗಾದ್ರೆ ಈ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳಲೇಬೇಕು
ಇದೇ ವೇಳೆ ‘ನಾನು ಕೂಡ ಮೂಲತಃ ಕೃಷಿಕ ಕುಟುಂಬದವನು. ಟ್ರ್ಯಾಕ್ಟರ್ ಚಾಲನೆ ಮಾಡುತ್ತೇನೆ. ಉಳುಮೆ ಮಾಡುತ್ತೇನೆ. ಆದರೆ, ನೇಗಿಲು ಕಟ್ಟುವುದನ್ನು ಸ್ವಲ್ಪ ಮರೆತಿದ್ದೇನೆ ಎಂದು ಚಲುವರಾಯಸ್ವಾಮಿ ಹೇಳಿದ್ದಾರೆ.