ಕೋಲಾರ:– ಜಿಲ್ಲೆಯ ಮುಳಬಾಗಿಲಿನ ಮುತ್ಯಾಲಪೇಟೆ ಲೇಔಟ್ನಲ್ಲಿ ಮೂವರು ಹಂತಕರಿಂದ ಶಿಕ್ಷಕಿಯ ಕತ್ತು ಕೊಯ್ದು ಬರ್ಬರವಾಗಿ ಕೊಲೆಗೈದ ಘಟನೆ ಜರುಗಿದೆ.
ಮೈಸೂರು ಅರಮನೆ ನೋಡ್ಬೇಕಾ!?, ಹಾಗಿದ್ರೆ ಟಿಕೆಟ್ ಗಾಗಿ ಗಂಟೆಗಟ್ಟಲೇ ಕಾಯ್ಬೇಡಿ, ವಾಟ್ಸಾಪ್ ಬಳಸಿ, ಸಮಯ ಉಳಿಸಿ!
42 ವರ್ಷದ ದಿವ್ಯಶ್ರೀ ಕೊಲೆಯಾದ ಶಿಕ್ಷಕಿ ಎನ್ನಲಾಗಿದೆ. ಮನೆಯಲ್ಲಿ ಮಗಳ ಜೊತೆ ಇದ್ದಾಗ ಕೊಲೆ ಮಾಡಲಾಗಿದೆ. ಮಗಳನ್ನೂ ಹತ್ಯೆಗೈಯಲು ಯತ್ನಿಸಿದ್ದು ಅದೃಷ್ಟವಶಾತ್ ಬಚಾವ್ ಆಗಿದ್ದಾರೆ. ಘಟನಾ ಸ್ಥಳಕ್ಕೆ ಕೋಲಾರ ಎಸ್ಪಿ ನಿಖಿಲ್.ಬಿ, ಎಫ್ಎಸ್ಎಲ್ ಹಾಗೂ ಶ್ವಾನದಳದ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದೆ.
ಮೃತ ದಿವ್ಯಶ್ರೀ ಮುಡಿಯನೂರು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ಪತಿ ಪದ್ಮನಾಭ್ ಉದ್ಯಮಿ ಆಗಿದ್ದಾರೆ. ಶಿಕ್ಷಕಿ ಕೊಲೆಯಿಂದ ಸದ್ಯ ಮುಳಬಾಗಿಲು ಜನರು ಬೆಚ್ಚಿಬಿದಿದ್ದಾರೆ.