ಬೆಂಗಳೂರು:– ಮರ್ಡರ್ ಕೇಸ್ ನಲ್ಲಿ ಜೈಲು ಸೇರಿರುವ ದರ್ಶನ್ ವಿರುದ್ಧ ಸಾಕ್ಷಿಗಳು ಸ್ಟ್ರಾಂಗ್ ಆಗುತ್ತಲ್ಲೆ ಇವೆ. ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಕರೆಕ್ಟ್ ಆಗಿ ಪೊಲೀಸಿಂಗ್ ಮಾಡಿರೋದೇ ದರ್ಶನ್ಗೆ ಕಂಟಕವಾಗಿರೋದು.ಸಾಕ್ಷಿ ಸಂಗ್ರಹದಲ್ಲಿ ಸಕ್ಸಸ್ ಆಗಿರೋ ಪೊಲೀಸರು ಎಲ್ಲವನ್ನೂ ಎಫ್ ಎಸ್ ಎಲ್ ಗೆ ಕಳಿಸಿದ್ರು ಅದರಲ್ಲಿ ಶೇ 70 ರಷ್ಟು ರಿಪೋರ್ಟ್ ಗಳು ಪೊಲೀಸರ ಕೈ ಸೇರಿವೆ. ರಿಪೋರ್ಟ್ ಗಳಲ್ಲಿ ಆರೋಪಿಗಳು ಕೊಲೆ ಮಾಡಿರೋದು ದೃಢವಾಗಿದೆ. ಹೀಗಾಗಿ ಜೈಲಲ್ಲಿ ಇರೋ ಡಿ ಗ್ಯಾಂಗ್ ಗೆ ಮುಂದೇನು ಅನ್ನೋ ಟೆಂಕ್ಷನ್ ಶುರುವಾಗಿದೆ.
ಜೂನ್ 8 ರಂದು ರೇಣುಕಾಸ್ವಾಮಿಯನ್ನು ಕಿಡ್ನಾಪ್ ಮಾಡ್ಕೊಂಡು ಆರ್ ಆರ್ ನಗರದ ಪಟ್ಟಣಗೆರೆ ಶೆಡ್ ಕರೆತರಲಾಗಿತ್ತು. ಬಳಿಕ ದರ್ಶನ್ ಹಾಗೂ ಪವಿತ್ರಗೌಡ ಶೆಡ್ ಗೆ ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಿ ಬಂದಿದ್ದರು. ಈ ವೇಳೆ ರೇಣುಕಾಸ್ವಾಮಿಯ ಶರೀರದಲ್ಲಿನ ರಕ್ತ ಆರೋಪಿಗಳು ಬಳಸಿದ್ದ ಪಾದರಕ್ಷೆಗಳು ಹಾಗೂ ಬಟ್ಟೆಗಳ ಮೇಲೆ ಬಿದ್ದಿತ್ತು. ಹೀಗಾಗಿ ಪೊಲೀಸರು ಅವತ್ತು ಆರೋಪಿಗಳು ಧರಿಸಿದ್ದ ಪಾದರಕ್ಷೆ ಹಾಗೂ ಬಟ್ಟೆಗಳನ್ನು ಸೀಜ್ ಮಾಡಿ ಎಫ್ಎಸ್ ಎಲ್ ಗೆ ಕಳುಹಿಸಿದ್ದು ಈಗ ಅದರ ವರದಿ ಬಂದಿದೆಮ ರಿಪೋರ್ಟ್ ನಲ್ಲಿ ದರ್ಶನ್, ಪವಿತ್ರ ಹಾಗೂ ಕೆಲ ಆರೋಪಿಗಳ ಪಾದರಕ್ಷೆಯ ಮೇಲೆ ರೇಣುಕಾಸ್ವಾಮಿ ರಕ್ತದ ಕಲೆಗಳು ಇದ್ದು, ಕೊಲೆ ಮಾಡಿದಾಗ ಆರೋಪಿಗಳು ಅಲ್ಲೇ ಇದ್ರು ಅನ್ನೋದಕ್ಕೆ ಇದು ಬಲವಾದ ಸಾಕ್ಷ್ಯ ಆಗಲಿದೆ.
ಕೊಲೆ ನಡೆದ ಸ್ಥಳದಲ್ಲಿ ಸಿಕ್ಕ ಆರೋಪಿಗಳ ಫಿಂಗರ್ ಪ್ರಿಂಟ್ ಮ್ಯಾಚ್ ..!
ಇನ್ನು ಆರೋಪಿಗಳು ಓಡಾಡಿದ ಸ್ಥಳದಲ್ಲಿ ಪುಟ್ ಪ್ರಿಂಡ್ ಸಹ ಕಲೆಕ್ಟ್ ಮಾಡಿದ್ರು. ಆದ್ರೆ ಶೆಡ್ ಒಳಗಡೆ ಹುಲ್ಲು ಬೆಳೆದಿದ್ದರಿಂದ ಯಾವುದು ಸಿಕ್ಕಿಲ್ಲ. ಇದೊಂದು ರಿಪೋರ್ಟ್ ಮಾತ್ರ ಆರೋಪಿಗಳ ಪರವಾಗಿ ಬಂದಿದೆ. ಅದು ಬಿಟ್ಟರೇ ಕೊಲೆ ನಡೆದ ಸ್ಥಳ ಹಾಗೂ ಮೃತದೇಹ ಬಿಸಾಡಲು ಬಳಸಿದ್ದ ಕಾರಿನಲ್ಲೂ ಆರೋಪಿಗಳ ಫಿಂಗರ್ ಪ್ರಿಂಟ್ ಪತ್ತೆಯಾಗಿದ್ದು, ಅದು ಎಫ್ ಎಸ್ ಎಲ್ ವರದಿಯಲ್ಲೂ ದೃಢವಾಗಿದೆ. ಇದರ ಜೊತೆಗೆ ಕೃತ್ಯ ನಡೆದ ಸ್ಥಳದಲ್ಲಿ ಸಿಕ್ಕ ಮದ್ಯದ ಬಾಟಲ್ ಒಂದರ ಮೇಲೆ ಹಂತಕರ ಫಿಂಗರ್ ಪ್ರಿಂಟ್ ಮ್ಯಾಚ್ ಆಗಿದೆ.ಹೀಗಾಗಿ ಪೊಲೀಸರು ಎಫ್ಎಸ್ಎಲ್ ವರದಿಗಳನ್ನ ಕೂಲಂಕುಷವಾಗಿ ಪರಿಶೀಲನೆ ನಡೆಸಿದ್ದಾರೆ.
ಶೇ 70 ರಷ್ಟು ಎಫ್ ಎಸ್ ಎಲ್ ರಿಪೋರ್ಟ್ ಗಳು ಪೊಲೀಸರ ಕೈ ಸೇರಿದ್ದು ಇನ್ನು ಎರಡು ರಿಪೋರ್ಟ್ ಮಾತ್ರ ಪೆಂಡಿಂಗ್ ಇವೆ. ಪಟ್ಟಣಗೆರ ಶೆಡ್ ಸಿಸಿ ಕ್ಯಾಮರಾ ರಿಟ್ರೀವ್ ರಿಪೋರ್ಟ್ ಬಾಕಿ ಇದೆ. ಅದ್ರಲ್ಲಿ ರೇಣುಕಾಸ್ವಾಮಿಯನ್ನು ಹಲ್ಲೆ ಮಾಡಿದ ಬಳಿಕ ಭದ್ರತಾ ಸಿಬ್ಬಂದಿ ಕೊಠಡಿಗೆ ಕರೆದೊಯ್ದಿರೋ ದೃಶ್ಯ ಇದ್ದು ಅದನ್ನು ಆರೋಪಿಗಳು ಡಿಲೀಟ್ ಮಾಡಿದ್ದಾರೆ.ಇದರ ಜೊತೆಗೆ ಆರೋಪಿಗಳ 13 ಮೊಬೈಲ್ ಗಳು ಎಫ್ ಎಸ್ ಎಲ್ ಗೆ ಕಳುಹಿಸಿದ್ದು ಅವುಗಳು ರಿಪೋರ್ಟ್ ಕೂಡ ಬರಬೇಕಿದೆ. ಅದ್ರಲ್ಲಿ ಆರೋಪಿಗಳ ನಡುವಿನ ಚಾಟಿಂಗ್, ಫೋನ್ ಕಾಲ್ ಹಿಸ್ಟರಿ ಹಾಗೂ ಸಂಭಾಷಣೆ,ಮೆಸೇಜ್ಗಳು, ಹಾಗೂ ಹಲ್ಲೆಯ ಫೋಟೋ ಹಾಗೂ ವೀಡಿಯೋ ರಿಟ್ರೀವ್ ಆಗೋದು ಬಾಕಿ ಇದೆ. ಆಗಷ್ಟ್ 20 ರ ಒಳಗಾಗಿ ಈ ರಿಪೋರ್ಟ್ ಗಳು ಪೊಲೀಸರ ಕೈ ಸೇರಲಿವೆ.ಇದರ ಮಧ್ಯೆ ಇವತ್ತು ಕೇಸ್ ನಲ್ಲಿ ಸಾಕ್ಷಿಯಾಗಿರೋ ನಟ ಚಿಕ್ಕಣ್ಣ ಕೂಡ ಪರಪ್ಪನ ಅಗ್ರಹಾರಕ್ಕೆ ಹೋಗಿ ದರ್ಶನ್ ನ ಭೇಟಿಯಾಗಿದ್ದಾರೆ. ಚಿಕ್ಕಣ್ಣ ಜೊತೆ ಅಭಿಷೇಕ್ ಅಂಬರೀಶ್ ಹಾಗೂ ನಟ ಧನ್ವೀರ್ ಕೂಡ ಹೋಗಿ ಭೇಟಿಯಾಗಿದ್ದಾರೆ.
ಇನ್ನು ಇಂದು ವಿ ಸಿ ಮೂಲಕ ನ್ಯಾಯಾಲಯಕ್ಕೆ ದರ್ಶನ್ ಅಂಡ್ ಗ್ಯಾಂಗ್ ಹಾಜರಾಗಿತ್ತು. ಪೊಲೀಸರು ರಿಮ್ಯಾಂಡ್ ಅರ್ಜಿ ನೀಡಿ ಆರೋಪಿಗಳ ನ್ಯಾಯಾಂಗ ಬಂಧನವನ್ನು ವಿಸ್ತರಣೆ ಮಾಡಬೇಕೆಂದು ಕೋರಿದ್ದರಿಂದ 24ನೇ ಎಸಿಎಂಎಂ ನ್ಯಾಯಾಲಯದ ನ್ಯಾಯಮೂರ್ತಿಗಳು ದರ್ಶನ್ ಮತ್ತು ಗ್ಯಾಂಗ್ಗೆ ನ್ಯಾಯಾಂಗ ಬಂಧನವನ್ನು ಆ.28ರವರೆಗೆ ವಿಸ್ತರಣೆ ಮಾಡಿದ್ರು…
ಒಟ್ನಲ್ಲಿ ಕೊಲೆ ಕೇಸ್ನ ತನಿಖೆ ಬಹುತೇಕ ಮುಕ್ತಾಯದ ಹಂತಕ್ಕೆ ಬಂದಿದ್ದು, ಪೆಂಡಿಂಗ್ ಇರೋ ಎರಡು ಎಫ್ ಎಸ್ ಎಲ್ ರಿಪೋರ್ಟ್ ಗಳು ಪೊಲೀಸರ ಕೈ ಸೇರಿದ ಬಳಿಕ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಿದ್ದಾರೆ.