ವಿಜಯಪುರ: ಮುಡಾ ಹಾಗೂ ವಾಲ್ಮೀಕಿ ನಿಗಮದಲ್ಲಿ ಹಣ ದುರುಪಯೋಗವಾಗಿದೆ ಎಂದು ಆಡಳಿತಾರೂಢ ಕಾಂಗ್ರೆಸ್ ವಿರುದ್ಧ ಬಿಜೆಪಿ ಜೆಡಿಎಸ್ ಆರೋಪ ವಿಚಾರವಾಗಿ ಕೈಗಾರಿಕಾ ಸಚಿವ ಎಂಬಿ ಪಾಟೀಲ್ ಹರಿಹಾಯ್ದಿದ್ದಾರೆ. ಬಿಜೆಪಿ ವಿರುದ್ಧ ಹರಿಹಾಯ್ದ ಸಚಿವ ಎಂಬಿ ಪಾಟೀಲ್, ಬಿಜೆಪಿಯಲ್ಲಿ 20 ಬಣಗಳಿವೆ. ಆರ್ ಅಶೋಕ್ ಬಣ, ವಿಜಯೇಂದ್ರ ಬಣ, ಪ್ರಹ್ಲಾದ ಜೋಶಿ ಬಣ , ಸಂತೋಷ್ ಬಣ, ಅಶ್ವತ್ಥ್ ನಾರಾಯಣ ಬಣ, ಯತ್ನಾಳ್ ಜಾರಕಿಹೋಳಿ ಬಣ, ಸಿ ಟಿ ರವಿ ಬಣ ಇವೆ. ಒಂದೊಂದು ಬಣ ಪಾದಯಾತ್ರೆ ಮಾಡಲಿ’ ಎಂದು ವಾಗ್ದಾಳಿ ನಡೆಸಿದರು.
Health Tips: ಪುರುಷರೇ ಹುಷಾರ್: ನೀವು ಮಾಡುವ ಈ ತಪ್ಪುಗಳಿಂದ ಕಡಿಮೆಯಾಗುತ್ತಂತೆ ವೀರ್ಯ ಉತ್ಪಾದನೆ!
ಕೊರೋನಾದ ಎರಡು ಸಾವಿರ ಕೋಟಿ ಹಣ ದುರುಪಯೋಗ , ಮಾರಿಷಸ್ ನಲ್ಲಿ 10,000 ಕೋಟಿ ಇಟ್ಟಿರುವ ಹಗರಣ, ಭೋವಿ ನಿಗಮದ ಹಗರಣ, ತಾಂಡಾ ನಿಗಮದ ಹಗರಣ, ದೇವರಾಜ ಅರಸ್ ಟ್ರಕ್ ಟರ್ಮಿನಲ್ ಹಗರಣ, ಇಂತಹ 20 ಹಗರಣಗಳ ಕುರಿತು ಬಿಜೆಪಿಯವರು ಪಾದಯಾತ್ರೆ ಮಾಡಲಿ ಎಂದರು. ಬಿಜೆಪಿ ವಿರುದ್ದವಾಗಿ ನಾವು ಜನಾಂದೋಲನ ಕಾರ್ಯಕ್ರಮ ಮಾಡಿದ್ದೇವೆ. ಐತಿಹಾಸಿಕ ಜನಾಂದೋಲನ ಕಾರ್ಯಕ್ರಮಕ್ಕೆ ಲಕ್ಷಾಂತರ ಜನರು ಸಾಕ್ಷಿಯಾಗಿದ್ದರು. ಬಿಜೆಪಿ ಪಾದಯಾತ್ರೆಯಲ್ಲಿ ಸುಳ್ಳು ಪ್ರಚಾರ ಮಾಡಿದ್ದರು. ಜನಾಂದೋಲನ ಮೂಲಕ ಅದಕ್ಕೆ ತಕ್ಕ ಉತ್ತರ ನೀಡಿದ್ದೇವೆ’ ಎಂದರು.